ಬೆಳಿಗ್ಗೆ 8.30ಕ್ಕೆ ಸಂತೇಮರಹಳ್ಳಿಯಲ್ಲಿ, 9.30ಕ್ಕೆ ಚಾಮರಾಜನಗರ, 11 ಗಂಟೆಗೆ ಚಂದಕವಾಡಿ, ಮಧ್ಯಾಹ್ನ 12ಗಂಟೆಗೆ ಯಳಂದೂರು, ಮಧ್ಯಾಹ್ನ 1 ಗಂಟೆಗೆ ಕೊಳ್ಳೇಗಾಲ, 2 ಗಂಟೆಗೆ ಹನೂರು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬೆಳಿಗ್ಗೆ 8 ಗಂಟೆಗೆ ಗುಂಡ್ಲುಪೇಟೆ, 9 ಗಂಟೆಗೆ ತೆರಕಣಾಂಬಿಯಲ್ಲಿ ಆಂದೋಲನ ನಡೆಯಲಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ರೈತ ಮುಖಂಡರು, ಸಾರ್ವಜನಿಕರು ಭಾಗವಹಿಸಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದ್ದಾರೆ.