<p>ಚಾಮರಾಜನಗರ: ಆಯುಧಪೂಜೆ, ವಿಜಯದಶಮಿ ಬಳಿಕ ಹೂವಿನ ಮಾರುಕಟ್ಟೆಯಲ್ಲಿ ಧಾರಣೆಯ ಅಬ್ಬರ ಇಳಿಮುಖವಾಗಿದ್ದು, ಬೇಡಿಕೆ ಸಂಪೂರ್ಣವಾಗಿ ಕುಸಿದಿದೆ.</p>.<p>ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆ ಇಳಿದಿದ್ದು, ಈರುಳ್ಳಿ ಬೆಲೆ ಹೆಚ್ಚಾಗಿದೆ. ಹಣ್ಣುಗಳು, ಮಾಂಸದ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<p>ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯಲ್ಲಿರುವ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರ ಕೆಜಿಗೆ ₹400, ಕಾಕಡಕ್ಕೆ ₹50–₹60 ಇತ್ತು. ಹಬ್ಬದ ಸಮಯದಲ್ಲಿ 200ರವರೆಗೂ ಇದ್ದ ಸೇವಂತಿಗೆಗೆ ಈಗ ₹50–₹60ವರೆಗೆ ಇದೆ. ಸುಗಂಧರಾಜ ಹೂವಿಗೆ ಬೇಡಿಕೆ ಸಂಪೂರ್ಣ ಕುಸಿದಿದ್ದು, ₹10ರಿಂದ ₹20ಗೆ ಮಾರಾಟವಾಗುತ್ತಿದೆ. ಹಬ್ಬದ ಬಳಿಕವೂ ಕೊಂಚ ಬೇಡಿಕೆ ಉಳಿಸಿಕೊಂಡಿರುವ ಚೆಂಡು ಹೂವಿಗೆ ₹40 ಬೆಲೆ ಇದೆ.</p>.<p>‘ಆಯುಧಪೂಜೆಯ ಸಮಯದಲ್ಲಿ ಎಲ್ಲ ಹೂವುಗಳ ಬೆಲೆ ಹೆಚ್ಚಾಗಿದ್ದವು. ವಿಜಯ ದಶಮಿ ಕಳೆದ ಮಾರನೇ ದಿನಕ್ಕೆ ಬೆಲೆ ಇಳಿಕೆಯಾಗಿದೆ. ದೀಪಾವಳಿವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ಈರುಳ್ಳಿ ದರ ಏರುಮುಖ: ತರಕಾರಿ ಮಾರುಕಟ್ಟೆಯಲ್ಲಿ ಹಲವು ತಿಂಗಳ ನಂತರ ಈರುಳ್ಳಿ ಬೆಲೆ ಹೆಚ್ಚಾಗಿದೆ. ಹಾಪ್ಕಾಮ್ಸ್ನಲ್ಲಿ ಹಲವು ವಾರಗಳಿಂದ 25ರಿಂದ ₹30ರ ಆಸುಪಾಸಿನಲ್ಲಿದ್ದ ಕೆಜಿ ಈರುಳ್ಳಿಯ ಬೆಲೆ ಈ ವಾರ ₹40ಕ್ಕೆ ಏರಿದೆ. ಹೊರಗಡೆ ₹50ರಿಂದ ₹60ರವರೆಗೂ ಬೆಲೆ ಇದೆ.</p>.<p>ಮಾರುಕಟ್ಟೆಗೆ ಈರುಳ್ಳಿ ಬರುವ ಪ್ರಮಾಣ ವಾರದಿಂದ ಕಡಿಮೆ ಇದೆ. ಹೀಗಾಗಿ ಬೆಲೆ ಹೆಚ್ಚಾಗಿದೆ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ತಿಳಿಸಿದರು.</p>.<p>ಎರಡು ಮೂರು ವಾರಗಳಿಂದ ಕೆಜಿಗೆ ₹60ರಷ್ಟಿದ್ದ ಬೀನ್ಸ್ ಬೆಲೆ ₹40ಕ್ಕೆ ಕುಸಿದಿದೆ. ಟೊಮೆಟೊ (₹30), ಕ್ಯಾರೆಟ್ (₹40) ಮೂಲಂಗಿ (₹20) ಸೇರಿದಂತೆ ಉಳಿದ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರೆದಿದೆ.</p>.<p>ತರಕಾರಿಗಳ ಪೈಕಿ ನುಗ್ಗೆಕಾಯಿ ಅತಿ ದುಬಾರಿ ತರಕಾರಿ. ಕೆಜಿಗೆ ₹120 ಇದೆ. ಈಗ ನುಗ್ಗೆಕಾಯಿ ಆಗುವ ಸಮಯ ಅಲ್ಲದಿರುವುದರಿಂದ ಬೆಲೆ ಹೆಚ್ಚಿದೆ ಎಂದು ಮಧು ಹೇಳಿದರು.</p>.<p>ಹಣ್ಣುಗಳ ಧಾರಣೆ ಯಥಾಸ್ಥಿತಿ ಮುಂದುವರೆದಿದೆ. ನಾಗಪುರ ಕಿತ್ತಳೆ ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಎಲ್ಲೆಡೆಯೂ ಮಾರಾಟ ಭರಾಟೆ ಹೆಚ್ಚಿದೆ.</p>.<p>ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ಆಯುಧಪೂಜೆ, ವಿಜಯದಶಮಿ ಬಳಿಕ ಹೂವಿನ ಮಾರುಕಟ್ಟೆಯಲ್ಲಿ ಧಾರಣೆಯ ಅಬ್ಬರ ಇಳಿಮುಖವಾಗಿದ್ದು, ಬೇಡಿಕೆ ಸಂಪೂರ್ಣವಾಗಿ ಕುಸಿದಿದೆ.</p>.<p>ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆ ಇಳಿದಿದ್ದು, ಈರುಳ್ಳಿ ಬೆಲೆ ಹೆಚ್ಚಾಗಿದೆ. ಹಣ್ಣುಗಳು, ಮಾಂಸದ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<p>ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯಲ್ಲಿರುವ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರ ಕೆಜಿಗೆ ₹400, ಕಾಕಡಕ್ಕೆ ₹50–₹60 ಇತ್ತು. ಹಬ್ಬದ ಸಮಯದಲ್ಲಿ 200ರವರೆಗೂ ಇದ್ದ ಸೇವಂತಿಗೆಗೆ ಈಗ ₹50–₹60ವರೆಗೆ ಇದೆ. ಸುಗಂಧರಾಜ ಹೂವಿಗೆ ಬೇಡಿಕೆ ಸಂಪೂರ್ಣ ಕುಸಿದಿದ್ದು, ₹10ರಿಂದ ₹20ಗೆ ಮಾರಾಟವಾಗುತ್ತಿದೆ. ಹಬ್ಬದ ಬಳಿಕವೂ ಕೊಂಚ ಬೇಡಿಕೆ ಉಳಿಸಿಕೊಂಡಿರುವ ಚೆಂಡು ಹೂವಿಗೆ ₹40 ಬೆಲೆ ಇದೆ.</p>.<p>‘ಆಯುಧಪೂಜೆಯ ಸಮಯದಲ್ಲಿ ಎಲ್ಲ ಹೂವುಗಳ ಬೆಲೆ ಹೆಚ್ಚಾಗಿದ್ದವು. ವಿಜಯ ದಶಮಿ ಕಳೆದ ಮಾರನೇ ದಿನಕ್ಕೆ ಬೆಲೆ ಇಳಿಕೆಯಾಗಿದೆ. ದೀಪಾವಳಿವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ಈರುಳ್ಳಿ ದರ ಏರುಮುಖ: ತರಕಾರಿ ಮಾರುಕಟ್ಟೆಯಲ್ಲಿ ಹಲವು ತಿಂಗಳ ನಂತರ ಈರುಳ್ಳಿ ಬೆಲೆ ಹೆಚ್ಚಾಗಿದೆ. ಹಾಪ್ಕಾಮ್ಸ್ನಲ್ಲಿ ಹಲವು ವಾರಗಳಿಂದ 25ರಿಂದ ₹30ರ ಆಸುಪಾಸಿನಲ್ಲಿದ್ದ ಕೆಜಿ ಈರುಳ್ಳಿಯ ಬೆಲೆ ಈ ವಾರ ₹40ಕ್ಕೆ ಏರಿದೆ. ಹೊರಗಡೆ ₹50ರಿಂದ ₹60ರವರೆಗೂ ಬೆಲೆ ಇದೆ.</p>.<p>ಮಾರುಕಟ್ಟೆಗೆ ಈರುಳ್ಳಿ ಬರುವ ಪ್ರಮಾಣ ವಾರದಿಂದ ಕಡಿಮೆ ಇದೆ. ಹೀಗಾಗಿ ಬೆಲೆ ಹೆಚ್ಚಾಗಿದೆ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ತಿಳಿಸಿದರು.</p>.<p>ಎರಡು ಮೂರು ವಾರಗಳಿಂದ ಕೆಜಿಗೆ ₹60ರಷ್ಟಿದ್ದ ಬೀನ್ಸ್ ಬೆಲೆ ₹40ಕ್ಕೆ ಕುಸಿದಿದೆ. ಟೊಮೆಟೊ (₹30), ಕ್ಯಾರೆಟ್ (₹40) ಮೂಲಂಗಿ (₹20) ಸೇರಿದಂತೆ ಉಳಿದ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರೆದಿದೆ.</p>.<p>ತರಕಾರಿಗಳ ಪೈಕಿ ನುಗ್ಗೆಕಾಯಿ ಅತಿ ದುಬಾರಿ ತರಕಾರಿ. ಕೆಜಿಗೆ ₹120 ಇದೆ. ಈಗ ನುಗ್ಗೆಕಾಯಿ ಆಗುವ ಸಮಯ ಅಲ್ಲದಿರುವುದರಿಂದ ಬೆಲೆ ಹೆಚ್ಚಿದೆ ಎಂದು ಮಧು ಹೇಳಿದರು.</p>.<p>ಹಣ್ಣುಗಳ ಧಾರಣೆ ಯಥಾಸ್ಥಿತಿ ಮುಂದುವರೆದಿದೆ. ನಾಗಪುರ ಕಿತ್ತಳೆ ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ಎಲ್ಲೆಡೆಯೂ ಮಾರಾಟ ಭರಾಟೆ ಹೆಚ್ಚಿದೆ.</p>.<p>ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>