ಶನಿವಾರ ಸಂಜೆ ಅರಣ್ಯದಂಚಿನಲ್ಲಿ ಕಾಣಿಸಿಕೊಂಡ ಬೆಂಕಿ, ಹುಲ್ಲು, ಇತರೆ ಗಿಡಗಂಟೆಗಳು ಒಣಗಿ ನಿಂತಿದ್ದ ಕಾರಣ ಗಾಳಿಯ ರಭಸಕ್ಕೆ ಪೂರ್ವ-ಪಶ್ಚಿಮಾಭಿಮುಖವಾಗಿ ವ್ಯಾಪಿಸಿತ್ತು. ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿದ್ದ ದೃಶ್ಯ ತ್ರಿಯಂಭಕಪುರ ಮತ್ತು ಕಗ್ಗಳ, ಕಗ್ಗಳದಹುಂಡಿ, ತೆರಕಣಾಂಬಿ ಗ್ರಾಮಗಳಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಜನರು ಚಿತ್ರ ತೆಗೆದು, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.