<p><strong>ಚಾಮರಾಜನಗರ:</strong> ‘ಕುವೆಂಪು ಕ್ರಾಂತಿಕಾರಿ ಲೇಖಕ. ಗುಡಿ ಮಸೀದಿ, ಚರ್ಚ್ಗಳನ್ನು ಬಿಟ್ಟು ಹೊರಗಡೆ ಬನ್ನಿ; ಒಂದೇ ಧರ್ಮಕ್ಕೆ ಸಿಲುಕಬೇಡಿ ವಿಶ್ವಮಾನವರಾಗಿ ಎಂಬ ಸಂದೇಶ ಕೊಟ್ಟಂತಹ ಧೀಮಂತ’ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್.ಜಯದೇವ ಶುಕ್ರವಾರ ತಿಳಿಸಿದರು.</p>.<p>ನಗರದ ದೀನಬಂಧು ಶಾಲೆಯಲ್ಲಿ ಚಾಮರಾಜನಗರ ಅಭ್ಯಾಸಿ ಟ್ರಸ್ಟ್, ದೀನಬಂಧು ಸಂಸ್ಥೆಯ ಆಶ್ರಯದಲ್ಲಿ ವಿಶ್ವಮಾನವ ದಿನಾಚರಣೆ ಅಂಗವಾಗಿ ಅಭ್ಯಾಸಿ ಮಕ್ಕಳ ವಾರಾಂತ್ಯ ರಂಗಶಾಲೆ ಪ್ರಸ್ತುತಪಡಿಸಿದ ‘ನನ್ನ ಗೋಪಾಲ’ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕುವೆಂಪು ಅವರು ಕ್ರಾಂತಿಕಾರಿಯಾಗಿದ್ದರು. ಕ್ರಾಂತಿಕಾರಿ ಎಂದರೆ ಕತ್ತಿ ಹಿಡಿಯುವುದು ಎಂದಲ್ಲ. ಅವರು ತಮ್ಮ ಲೇಖನಿ ಮೂಲಕ ಕ್ರಾಂತಿ ಮಾಡಿದವರು. ಒಬ್ಬ ಕವಿ ಒಳ್ಳೆಯ ವಿಚಾರವನ್ನು, ಎಲ್ಲರನ್ನೂ ಒಳಗೊಳ್ಳುವಂತಹದ್ದನ್ನು ಬರೆದರೆ ಆತ ದೊಡ್ಡ ಕ್ರಾಂತಿಯನ್ನೇ ಮಾಡಿದಂತೆ’ ಎಂದು ಅವರು ಬಣ್ಣಿಸಿದರು. </p>.<p>‘ಕುವೆಂಪು ಅವರು ಚಿಕ್ಕ ಮಕ್ಕಳಿಗಾಗಿ ಕಿಂದರಜೋಗಿಯಂತಹ ಸಾಹಿತ್ಯವನ್ನು ಬರೆದಿದ್ದಾರೆ. ದೊಡ್ಡವರಿಗೆ ಬೇಕಾಗುವಂತಹ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಮನಸ್ಸು ವಿಶಾಲವಾಗಿರುತ್ತದೆ. ಅದು ಜಾತಿ, ಧರ್ಮ, ಕೋಮು ಇತ್ಯಾದಿ ಸಂಕುಚಿತ ಭಾವನೆಗಳಿಗೆ ಸಿಲುಕದೆ ಇದ್ದಾಗ ಮಕ್ಕಳು ವಿಶ್ವಮಾನವರಾಗುತ್ತಾರೆ’ ಎಂದು ಜಯದೇವ ಹೇಳಿದರು. </p>.<p>‘ಅವರಿಗೆ ಕೊನೆಯವರೆಗೂ ವಿಶ್ವಮಾನವ ಸಂದೇಶದ ಬಗ್ಗೆ ಪ್ರೀತಿ ಇತ್ತು. ಅವರು ನಿಸರ್ಗದ ಕವಿ ಕೂಡ ಆಗಿದ್ದರು’ ಎಂದು ಜಯದೇವ ಹೇಳಿದರು. </p>.<p>ಈ ಕಾರ್ಯಕ್ರಮದಲ್ಲಿ ಅಭ್ಯಾಸಿ ಟ್ಟಸ್ಟ್ನ ಸಂಸ್ಥಾಪಕ ಕಿರಣ್ ಗಿರ್ಗಿ ಸೇರಿದಂತೆ ದೀನಬಂಧು ಶಾಲೆಯ ಮಕ್ಕಳು ಇದ್ದರು.</p>.<p> ಅಭ್ಯಾಸಿ ಮಕ್ಕಳ ವಾರಾಂತ್ಯ ರಂಗಶಾಲೆ ಕಲಾವಿದರು ಪ್ರದರ್ಶಿಸಿದ ‘ನನ್ನ ಗೋಪಾಲ’ ನಾಟಕ ಗಮನಸೆಳೆಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ‘ಕುವೆಂಪು ಕ್ರಾಂತಿಕಾರಿ ಲೇಖಕ. ಗುಡಿ ಮಸೀದಿ, ಚರ್ಚ್ಗಳನ್ನು ಬಿಟ್ಟು ಹೊರಗಡೆ ಬನ್ನಿ; ಒಂದೇ ಧರ್ಮಕ್ಕೆ ಸಿಲುಕಬೇಡಿ ವಿಶ್ವಮಾನವರಾಗಿ ಎಂಬ ಸಂದೇಶ ಕೊಟ್ಟಂತಹ ಧೀಮಂತ’ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್.ಜಯದೇವ ಶುಕ್ರವಾರ ತಿಳಿಸಿದರು.</p>.<p>ನಗರದ ದೀನಬಂಧು ಶಾಲೆಯಲ್ಲಿ ಚಾಮರಾಜನಗರ ಅಭ್ಯಾಸಿ ಟ್ರಸ್ಟ್, ದೀನಬಂಧು ಸಂಸ್ಥೆಯ ಆಶ್ರಯದಲ್ಲಿ ವಿಶ್ವಮಾನವ ದಿನಾಚರಣೆ ಅಂಗವಾಗಿ ಅಭ್ಯಾಸಿ ಮಕ್ಕಳ ವಾರಾಂತ್ಯ ರಂಗಶಾಲೆ ಪ್ರಸ್ತುತಪಡಿಸಿದ ‘ನನ್ನ ಗೋಪಾಲ’ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕುವೆಂಪು ಅವರು ಕ್ರಾಂತಿಕಾರಿಯಾಗಿದ್ದರು. ಕ್ರಾಂತಿಕಾರಿ ಎಂದರೆ ಕತ್ತಿ ಹಿಡಿಯುವುದು ಎಂದಲ್ಲ. ಅವರು ತಮ್ಮ ಲೇಖನಿ ಮೂಲಕ ಕ್ರಾಂತಿ ಮಾಡಿದವರು. ಒಬ್ಬ ಕವಿ ಒಳ್ಳೆಯ ವಿಚಾರವನ್ನು, ಎಲ್ಲರನ್ನೂ ಒಳಗೊಳ್ಳುವಂತಹದ್ದನ್ನು ಬರೆದರೆ ಆತ ದೊಡ್ಡ ಕ್ರಾಂತಿಯನ್ನೇ ಮಾಡಿದಂತೆ’ ಎಂದು ಅವರು ಬಣ್ಣಿಸಿದರು. </p>.<p>‘ಕುವೆಂಪು ಅವರು ಚಿಕ್ಕ ಮಕ್ಕಳಿಗಾಗಿ ಕಿಂದರಜೋಗಿಯಂತಹ ಸಾಹಿತ್ಯವನ್ನು ಬರೆದಿದ್ದಾರೆ. ದೊಡ್ಡವರಿಗೆ ಬೇಕಾಗುವಂತಹ ಸಾಹಿತ್ಯವನ್ನು ಬರೆದಿದ್ದಾರೆ. ಮಕ್ಕಳ ಮನಸ್ಸು ವಿಶಾಲವಾಗಿರುತ್ತದೆ. ಅದು ಜಾತಿ, ಧರ್ಮ, ಕೋಮು ಇತ್ಯಾದಿ ಸಂಕುಚಿತ ಭಾವನೆಗಳಿಗೆ ಸಿಲುಕದೆ ಇದ್ದಾಗ ಮಕ್ಕಳು ವಿಶ್ವಮಾನವರಾಗುತ್ತಾರೆ’ ಎಂದು ಜಯದೇವ ಹೇಳಿದರು. </p>.<p>‘ಅವರಿಗೆ ಕೊನೆಯವರೆಗೂ ವಿಶ್ವಮಾನವ ಸಂದೇಶದ ಬಗ್ಗೆ ಪ್ರೀತಿ ಇತ್ತು. ಅವರು ನಿಸರ್ಗದ ಕವಿ ಕೂಡ ಆಗಿದ್ದರು’ ಎಂದು ಜಯದೇವ ಹೇಳಿದರು. </p>.<p>ಈ ಕಾರ್ಯಕ್ರಮದಲ್ಲಿ ಅಭ್ಯಾಸಿ ಟ್ಟಸ್ಟ್ನ ಸಂಸ್ಥಾಪಕ ಕಿರಣ್ ಗಿರ್ಗಿ ಸೇರಿದಂತೆ ದೀನಬಂಧು ಶಾಲೆಯ ಮಕ್ಕಳು ಇದ್ದರು.</p>.<p> ಅಭ್ಯಾಸಿ ಮಕ್ಕಳ ವಾರಾಂತ್ಯ ರಂಗಶಾಲೆ ಕಲಾವಿದರು ಪ್ರದರ್ಶಿಸಿದ ‘ನನ್ನ ಗೋಪಾಲ’ ನಾಟಕ ಗಮನಸೆಳೆಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>