ಯೂರಿಯಾ ಮತ್ತು ಇತರ ರಸಗೊಬ್ಬರಗಳು ಎಲ್ಲೆಡೆ ಸಿಗುತ್ತವೆ. ಇವುಗಳ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಆದರೆ, ₹700ಕ್ಕೆ ಸಿಗುತ್ತಿದ್ದ ಪೊಟ್ಯಾಷ್ ಮಾತ್ರ ದಿಢೀರನೆ ₹ 900ಕ್ಕೆ ಏರಿದೆ. ಕೊಳ್ಳೇಗಾಲ ಮತ್ತು ಯಳಂದೂರು ಪಟ್ಟಣದಲ್ಲಿಯೂ ಇದು ಲಭಿಸುತ್ತಿಲ್ಲ. ಹಾಗಾಗಿ, ಸಂತೇಮರಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಭರವಸೆ ಇದೆ ಎನ್ನುತ್ತಾರೆ ಕೃಷಿಕ ಕೊಳ್ಳೇಗಾಲ ರೈತ ಪ್ರಕಾಶ್.