ಘಟನೆ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹದೇವಸ್ವಾಮಿ ಅವರು, ‘ಬೆಟ್ಟ ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಕುಸಿತ ಆಗುವುದು ಸಹಜ. ಎತ್ತರದಿಂದ ರಭಸವಾಗಿ ನೀರು ಹರಿದಾಗ ಎಷ್ಟು ದೃಢವಾದ ತಡೆಗೋಡೆಗೂ ನೀರಿನ ಒತ್ತಡವನ್ನು ತಡೆದುಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಗುಡ್ಡ ಕುಸಿತವಾದರೆ, ತಕ್ಷಣವೇ ವಾಹನಗಳ ಸಂಚಾರಕ್ಕೆ ಅನುವು ಮಾಡುವುದಾಗಿ ತಾತ್ಕಾಲಿಕ ದುರಸ್ತಿ ಮಾಡುತ್ತೇವೆ. ಪಾಲಾರ್ ರಸ್ತೆಯಲ್ಲಿ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿತ್ತು. ನೀರು ಹೋಗಲು ಬೇರೆ ದಾರಿ ಮಾಡಲಾಗಿತ್ತು. ಹೆಚ್ಚು ನೀರು ಬಂದಿದ್ದರಿಂದ ಕುಸಿತ ಉಂಟಾಗಿದೆ.ಮಳೆ ನಿಂತ ಮೇಲೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.