ಮಹದೇಶ್ವರನ ದೇಗುಲದಲ್ಲಿ ಮುಂಜಾವಿನ 3 ಗಂಟೆಯಿಂದ ನಸುಕಿನ 4 ಗಂಟೆ ತನಕ ಸರದಿ ಅರ್ಚಕರು ವಿಶೇಷ ಪೂಜಾ ಕಾರ್ಯ ನೆರವೇರಿಸಿದರು. ನಂತರ ಸ್ವಾಮಿಗೆ ಅಭಿಷೇಕ ಜರುಗಿತು. 4 ಗಂಟೆಯಿಂದ 6 ಗಂಟೆ ತನಕ ರುದ್ರಾಭಿಷೇಕ, ಬಿಲ್ವಾರ್ಚನೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿದರು. ಬಳಿಕ ನೆರೆದಿದ್ದ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿದರು. ಮತ್ತೆ ಸಂಜೆ 6 ಗಂಟೆಗೆ ಅಭಿಷೇಕ ನೆರವೇರಿಸಿ, 6.30ರಿಂದ ರಾತ್ರಿ 8ಗಂಟೆ ತನಕ ರುದ್ರಾಭಿಷೇಕ ಮಾಡಿ, ಮಹಾಮಂಗಳಾರತಿ ಬೆಳಗಿ ನೈವೇದ್ಯ ಅರ್ಪಿಸಿದರು.