‘2017ರಿಂದ ಅನುದಾನಗಳ ಸದ್ಬಳಕೆ, ನಗರದ ಸ್ವಚ್ಚತೆ, ಪಟ್ಟಣ ಅಭಿವೃದ್ದಿಗಾಗಿ ಈ ಸಭೆಯಲ್ಲಿ ಸದಸ್ಯರು, ಅಧಿಕಾರಿಗಳಿಂದ ಸಲಹೆ, ಸೂಚನೆ ಪಡೆಯಲಾಗಿದ್ದು, ಪಟ್ಟಣದ ಅಭಿವೃದ್ದಿಗಾಗಿ ಗಂಭೀರ ಚೆರ್ಚೆಯಾಗಿದೆ. ಸದಸ್ಯರು ಸರ್ವಾನುಮತದಿಂದ ಪಟ್ಟಣ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳಿಂದ ವಿಶೇಷ ಪ್ಯಾಕೇಜ್ ತರಬೇಕು ಎಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ₹100 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಅಂದು ಮನವಿ ಸಲ್ಲಿಸಲಾಗುವುದು’ ಎಂದರು.