ಈ ಉತ್ತರದಿಂದ ತೃಪ್ತರಾಗದ ಪುಟ್ಟರಂಗಶೆಟ್ಟಿ ಅವರು, ‘ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲರಿಗೆ ಸಂತ್ರಸ್ತರ ಬಗ್ಗೆ ಜಿಲ್ಲಾಡಳಿತ ಬಿಟ್ಟು ಬೇರೆ ಯಾರು ಮಾಹಿತಿ, ದಾಖಲೆಗಳನ್ನು ನೀಡುತ್ತದೆ? ನೀವು ವಿವರಗಳನ್ನು ಕೊಡದೆ ಅವರು ಅಲ್ಲಿ ಹೇಗೆ ವಾದ ಮಾಡುತ್ತಾರೆ? 13 ಕುಟುಂಬಗಳಿಗೆ ಮಾತ್ರ ಹೆಚ್ಚುವರಿ ಪರಿಹಾರ ನೀಡಿ ಉಳಿದವರಿಗೆ ಅನ್ಯಾಯ ಮಾಡಿದ್ದೀರಿ’ ಎಂದು ಅಸಮಾಧಾನ ಹೊರಹಾಕಿದರು.