<p><strong>ಹನೂರು: </strong>ಮಹದೇಶ್ವರಬೆಟ್ಟದಲ್ಲಿನಾಲ್ಕುದಿನಗಳಿಂದನಡೆಯುತ್ತಿರುವಮಹಾಶಿವರಾತ್ರಿಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಮಹಾ ರಥೋತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ.</p>.<p>ಬೆಳಿಗ್ಗೆ 9.50ರಿಂದ 11 ಗಂಟೆಯವರೆಗೆ ರಥೋತ್ಸವ ನಡೆಯಲಿದೆ. ರಾತ್ರಿ ಅಭಿಷೇಕ ಮುಗಿದ ನಂತರ ಕೊಂಡೋತ್ಸವ ನಡೆಯಲಿದೆ. ಆ ಮೂಲಕ ನಾಲ್ಕು ದಿನಗಳ ಶಿವರಾತ್ರಿ ಜಾತ್ರೆಗೆ ತೆರೆ ಬೀಳಲಿದೆ.</p>.<p>ನಾಲ್ಕು ದಿನಗಳಲ್ಲಿ ನಾಲ್ಕರಿಂದ ಐದುಲಕ್ಷ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆರು ಲಕ್ಷ ಲಾಡು ಪ್ರಸಾದ ವಿತರಿಸಲಾಗಿದೆ. ಶನಿವಾರ ಒಂದೇ ದಿನ ಹುಂಡಿ ಬಿಟ್ಟು, ₹73 ಲಕ್ಷ ಹಣ ಸಂಗ್ರಹವಾಗಿದೆ.</p>.<p>ಜಾತ್ರೆಗಾಗಿ ಕಾಲ್ನಡಿಗೆಯಲ್ಲಿ ಬಂದಿರುವ ಭಕ್ತರು ಈಗಾಗಲೇ ವಾಪಸ್ಸಾಗಿದ್ದಾರೆ. ಶನಿವಾರದಿಂದ ವಾಹನಗಳಲ್ಲಿ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಭಾನುವಾರವೂ ಇದು ಮುಂದುವರಿದಿದೆ.ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಹತ್ತಿರದ ಮಾತ್ರವಲ್ಲದೇ ದೂರದ ಊರುಗಳಿಂದಲೂ ಭಕ್ತರು ಬರುತ್ತಿದ್ದಾರೆ. ಹೆಚ್ಚಿನಸಂಖ್ಯೆಯಲ್ಲಿ ವಾಹನಗಳು ಆಗಮಿಸುತ್ತಿರುವುದರಿಂದಹನೂರು,ಕೌದಳ್ಳಿ,ತಾಳಬೆಟ್ಟದಿಂದ ಆನೆತಲೆದಿಂಬದವರೆಗೆಅಲ್ಲಲ್ಲಿಸಂಚಾರ ದಟ್ಟಣೆ ಉಂಟಾಗಿದೆ.</p>.<p class="Subhead"><strong>ಧಾರ್ಮಿಕ ವಿಧಿವಿಧಾನಗಳು</strong></p>.<p class="Subhead">ಜಾತ್ರಾ ಮಹೋತ್ಸವದ ಭಾಗವಾಗಿ ಭಾನುವಾರವೂ ಕ್ಷೇತ್ರದಲ್ಲಿ ಅಮಾವಾಸ್ಯೆ ವಿಶೇಷ ಉತ್ಸವಾದಿಗಳು ನಡೆದವು. ಬೆಳಗ್ಗಿನಜಾವ3ಗಂಟೆಯಿಂದದೇವರಿಗೆಜಲಾಭಿಷೇಕ,ಕ್ಷೀರಾಭಿಷೇಕ,ಬಿಲ್ವಾರ್ಚನೆಹಾಗೂಮಹಾರುದ್ರಾಭಿಷೇಕಇನ್ನಿತರೆಪೂಜಾಕಾರ್ಯಗಳನ್ನು ಬೇಡಗಂಪಣದಅರ್ಚಕರುನೆರವೇರಿಸಿದರು. ಹುಲಿವಾಹನ ಸೇವೆ, ಪಂಜಿನ ಸೇವೆ ಸೇರಿದಂತೆ ವಿವಿಧ ಸೇವೆಗಳು ಎಂದಿನಂತೆ ನಡೆದವು.</p>.<p>ಜಾನಪದಉತ್ಸವಕಾರ್ಯಕ್ರಮ ಭಾನುವಾರವೂ ಮುಂದುವರಿಯಿತು. ಚಾಮರಾಜನಗರ ಜಿಲ್ಲೆನಾನಾಭಾಗಗಳಿಂದಜಾನಪದ ಕಲಾತಂಡಗಳುಭಾಗವಹಿಸಿಗೊರವರ ಕುಣಿತ,ತಂಬೂರಿ,ಕಂಸಾಳೆ ಸೇರಿದಂತೆಇನ್ನಿತರೆಕಲಾತಂಡಗಳುತಮ್ಮ ಕಲೆಯನ್ನು ಪ್ರದರ್ಶಿಸಿನೆರೆದಿದ್ದ ಭಕ್ತರ ಮನರಂಜಿಸಿದರು.</p>.<p>ರಾತ್ರಿ ಬೆಂಗಳೂರಿನ ಸಪ್ತಸ್ವರ ಕಲಾ ಸಂಸ್ಥೆಯ ಮಂಜುಳಾ ಪರಮೇಶ್ ಅವರ ತಂಡ ಪ್ರದರ್ಶಿಸಿದ ‘ನೃತ್ಯ ಸಂಭ್ರಮ’ ಕಾರ್ಯಕ್ರಮ ಗಮನಸೆಳೆಯಿತು.</p>.<p class="Subhead"><strong>ತೆರವು</strong></p>.<p class="Subhead">ಪಾಲಾರ್ ಗೇಟ್ ಬಳಿ ರಸ್ತೆಬದಿಯಲ್ಲಿ ಕೆಲವರು ಅನಧಿಕೃತವಾಗಿ ವ್ಯಾಪಾರ ಮಾಡಿಕೊಂಡಿದ್ದವರಿಂದ ಸಂಚಾರ ದಟ್ಟಣೆ ಹಾಗೂ ಅನೈರ್ಮಲ್ಯ ಉಂಟಾಗುತ್ತಿತ್ತು, ಹಾಗಾಗಿ, ಪ್ರಾಧಿಕಾರದಅಧಿಕಾರಿಗಳು ವ್ಯಾಪಾರಿಗಳನ್ನು ಅಲ್ಲಿಂದ ಬೇರೆ ಕಡೆಗೆ ಕಳುಹಿಸಿದರು.</p>.<p class="Subhead">ಇಂದು ಜನಪರ ಉತ್ಸವ: ಜಾತ್ರೆಯ ಅಂಗವಾಗಿ ಸೋಮವಾರ ಬೆಳಿಗ್ಗೆ ಬೆಟ್ಟದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಜನಪರ ಉತ್ಸವ ನಡೆಯಲಿದೆ.</p>.<p class="Briefhead"><strong>6ಲಕ್ಷಲಾಡುಮಾರಾಟ</strong></p>.<p>ಜಾತ್ರೆಯನಾಲ್ಕುದಿನಗಳಲ್ಲಿಇದುವರೆಗೆಸುಮಾರು6ಲಕ್ಷಲಾಡುಗಳುಮಾರಾಟವಾಗಿವೆ.</p>.<p>‘ಪ್ರಾಧಿಕಾರದವತಿಯಿಂದ7.6ಲಕ್ಷಲಾಡುತಯಾರಿಸಲಾಗಿತ್ತು. ನಾಲ್ಕುದಿನಗಳಲ್ಲಿ ಶೇ85ರಷ್ಟುಲಾಡುಮಾರಾಟವಾದ ಪರಿಣಾಮಹೆಚ್ಚುವರಿಯಾಗಿ ಪ್ರತಿ ದಿನ 40ಸಾವಿರಲಾಡು ತಯಾರಿಸಲಾಗುತ್ತಿದೆ. ಸೋಮವಾರಮಹಾರಥೋತ್ಸವ ನಡೆಯುವುದರಿಂದಭಕ್ತರುಹೆಚ್ಚಿನಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ‘ಪ್ರಜಾವಾಣಿ’ಗೆತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು: </strong>ಮಹದೇಶ್ವರಬೆಟ್ಟದಲ್ಲಿನಾಲ್ಕುದಿನಗಳಿಂದನಡೆಯುತ್ತಿರುವಮಹಾಶಿವರಾತ್ರಿಜಾತ್ರಾಮಹೋತ್ಸವದ ಅಂಗವಾಗಿ ಸೋಮವಾರ ಮಹಾ ರಥೋತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇದೆ.</p>.<p>ಬೆಳಿಗ್ಗೆ 9.50ರಿಂದ 11 ಗಂಟೆಯವರೆಗೆ ರಥೋತ್ಸವ ನಡೆಯಲಿದೆ. ರಾತ್ರಿ ಅಭಿಷೇಕ ಮುಗಿದ ನಂತರ ಕೊಂಡೋತ್ಸವ ನಡೆಯಲಿದೆ. ಆ ಮೂಲಕ ನಾಲ್ಕು ದಿನಗಳ ಶಿವರಾತ್ರಿ ಜಾತ್ರೆಗೆ ತೆರೆ ಬೀಳಲಿದೆ.</p>.<p>ನಾಲ್ಕು ದಿನಗಳಲ್ಲಿ ನಾಲ್ಕರಿಂದ ಐದುಲಕ್ಷ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆರು ಲಕ್ಷ ಲಾಡು ಪ್ರಸಾದ ವಿತರಿಸಲಾಗಿದೆ. ಶನಿವಾರ ಒಂದೇ ದಿನ ಹುಂಡಿ ಬಿಟ್ಟು, ₹73 ಲಕ್ಷ ಹಣ ಸಂಗ್ರಹವಾಗಿದೆ.</p>.<p>ಜಾತ್ರೆಗಾಗಿ ಕಾಲ್ನಡಿಗೆಯಲ್ಲಿ ಬಂದಿರುವ ಭಕ್ತರು ಈಗಾಗಲೇ ವಾಪಸ್ಸಾಗಿದ್ದಾರೆ. ಶನಿವಾರದಿಂದ ವಾಹನಗಳಲ್ಲಿ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಭಾನುವಾರವೂ ಇದು ಮುಂದುವರಿದಿದೆ.ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಹತ್ತಿರದ ಮಾತ್ರವಲ್ಲದೇ ದೂರದ ಊರುಗಳಿಂದಲೂ ಭಕ್ತರು ಬರುತ್ತಿದ್ದಾರೆ. ಹೆಚ್ಚಿನಸಂಖ್ಯೆಯಲ್ಲಿ ವಾಹನಗಳು ಆಗಮಿಸುತ್ತಿರುವುದರಿಂದಹನೂರು,ಕೌದಳ್ಳಿ,ತಾಳಬೆಟ್ಟದಿಂದ ಆನೆತಲೆದಿಂಬದವರೆಗೆಅಲ್ಲಲ್ಲಿಸಂಚಾರ ದಟ್ಟಣೆ ಉಂಟಾಗಿದೆ.</p>.<p class="Subhead"><strong>ಧಾರ್ಮಿಕ ವಿಧಿವಿಧಾನಗಳು</strong></p>.<p class="Subhead">ಜಾತ್ರಾ ಮಹೋತ್ಸವದ ಭಾಗವಾಗಿ ಭಾನುವಾರವೂ ಕ್ಷೇತ್ರದಲ್ಲಿ ಅಮಾವಾಸ್ಯೆ ವಿಶೇಷ ಉತ್ಸವಾದಿಗಳು ನಡೆದವು. ಬೆಳಗ್ಗಿನಜಾವ3ಗಂಟೆಯಿಂದದೇವರಿಗೆಜಲಾಭಿಷೇಕ,ಕ್ಷೀರಾಭಿಷೇಕ,ಬಿಲ್ವಾರ್ಚನೆಹಾಗೂಮಹಾರುದ್ರಾಭಿಷೇಕಇನ್ನಿತರೆಪೂಜಾಕಾರ್ಯಗಳನ್ನು ಬೇಡಗಂಪಣದಅರ್ಚಕರುನೆರವೇರಿಸಿದರು. ಹುಲಿವಾಹನ ಸೇವೆ, ಪಂಜಿನ ಸೇವೆ ಸೇರಿದಂತೆ ವಿವಿಧ ಸೇವೆಗಳು ಎಂದಿನಂತೆ ನಡೆದವು.</p>.<p>ಜಾನಪದಉತ್ಸವಕಾರ್ಯಕ್ರಮ ಭಾನುವಾರವೂ ಮುಂದುವರಿಯಿತು. ಚಾಮರಾಜನಗರ ಜಿಲ್ಲೆನಾನಾಭಾಗಗಳಿಂದಜಾನಪದ ಕಲಾತಂಡಗಳುಭಾಗವಹಿಸಿಗೊರವರ ಕುಣಿತ,ತಂಬೂರಿ,ಕಂಸಾಳೆ ಸೇರಿದಂತೆಇನ್ನಿತರೆಕಲಾತಂಡಗಳುತಮ್ಮ ಕಲೆಯನ್ನು ಪ್ರದರ್ಶಿಸಿನೆರೆದಿದ್ದ ಭಕ್ತರ ಮನರಂಜಿಸಿದರು.</p>.<p>ರಾತ್ರಿ ಬೆಂಗಳೂರಿನ ಸಪ್ತಸ್ವರ ಕಲಾ ಸಂಸ್ಥೆಯ ಮಂಜುಳಾ ಪರಮೇಶ್ ಅವರ ತಂಡ ಪ್ರದರ್ಶಿಸಿದ ‘ನೃತ್ಯ ಸಂಭ್ರಮ’ ಕಾರ್ಯಕ್ರಮ ಗಮನಸೆಳೆಯಿತು.</p>.<p class="Subhead"><strong>ತೆರವು</strong></p>.<p class="Subhead">ಪಾಲಾರ್ ಗೇಟ್ ಬಳಿ ರಸ್ತೆಬದಿಯಲ್ಲಿ ಕೆಲವರು ಅನಧಿಕೃತವಾಗಿ ವ್ಯಾಪಾರ ಮಾಡಿಕೊಂಡಿದ್ದವರಿಂದ ಸಂಚಾರ ದಟ್ಟಣೆ ಹಾಗೂ ಅನೈರ್ಮಲ್ಯ ಉಂಟಾಗುತ್ತಿತ್ತು, ಹಾಗಾಗಿ, ಪ್ರಾಧಿಕಾರದಅಧಿಕಾರಿಗಳು ವ್ಯಾಪಾರಿಗಳನ್ನು ಅಲ್ಲಿಂದ ಬೇರೆ ಕಡೆಗೆ ಕಳುಹಿಸಿದರು.</p>.<p class="Subhead">ಇಂದು ಜನಪರ ಉತ್ಸವ: ಜಾತ್ರೆಯ ಅಂಗವಾಗಿ ಸೋಮವಾರ ಬೆಳಿಗ್ಗೆ ಬೆಟ್ಟದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಜನಪರ ಉತ್ಸವ ನಡೆಯಲಿದೆ.</p>.<p class="Briefhead"><strong>6ಲಕ್ಷಲಾಡುಮಾರಾಟ</strong></p>.<p>ಜಾತ್ರೆಯನಾಲ್ಕುದಿನಗಳಲ್ಲಿಇದುವರೆಗೆಸುಮಾರು6ಲಕ್ಷಲಾಡುಗಳುಮಾರಾಟವಾಗಿವೆ.</p>.<p>‘ಪ್ರಾಧಿಕಾರದವತಿಯಿಂದ7.6ಲಕ್ಷಲಾಡುತಯಾರಿಸಲಾಗಿತ್ತು. ನಾಲ್ಕುದಿನಗಳಲ್ಲಿ ಶೇ85ರಷ್ಟುಲಾಡುಮಾರಾಟವಾದ ಪರಿಣಾಮಹೆಚ್ಚುವರಿಯಾಗಿ ಪ್ರತಿ ದಿನ 40ಸಾವಿರಲಾಡು ತಯಾರಿಸಲಾಗುತ್ತಿದೆ. ಸೋಮವಾರಮಹಾರಥೋತ್ಸವ ನಡೆಯುವುದರಿಂದಭಕ್ತರುಹೆಚ್ಚಿನಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ‘ಪ್ರಜಾವಾಣಿ’ಗೆತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>