ಹಲವು ವರ್ಷಗಳಿಂದ ಅರಿಶಿನಕ್ಕೆ ಅಷ್ಟಾಗಿ ಬೇಡಿಕೆ ಇರಲಿಲ್ಲ. ಇಳುವರಿ ಕೊರತೆ, ಹೆಚ್ಚಾದ ಖರ್ಚು ಮತ್ತು ನಿರ್ವಹಣೆಯ ಸಮಸ್ಯೆಯಿಂದ ಬಹುತೇಕ ಬೆಳೆಗಾರರು ಬೆಳೆಯಿಂದ ವಿಮುಖವಾಗಿದ್ದರು. ಆದರೆ, ಕಳೆದ ವರ್ಷ ಅರಿಶಿನಕ್ಕೆ ದಿಢೀರ್ ಏರಿದ ಬೆಲೆಯಿಂದ ಮತ್ತೆ ನಾಟಿಗೆ ಮುಂದಾಗಿದ್ದು, ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ.