‘10 ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಂದಿದ್ದೇನೆ. ಅಂಬೇಡ್ಕರ್ ಅವರ ಆದರ್ಶಗಳಿಗೆ ಮಾರುಹೋದೆ. ಗೌತಮ ಬುದ್ಧ ಅವರ ಸಂದೇಶ ನನ್ನಲ್ಲಿ ಮನಃಪರಿವರ್ತನೆ ಮಾಡಿತು. 2015ರಿಂದ ನನ್ನಲ್ಲಿ ಏನೋ ಬದಲಾವಣೆಯಾಯಿತು. ಅಂದಿನಿಂದ ನಾನು ತಲೆ, ಗಡ್ಡ ಬೋಳಿಸಲು ಆರಂಭಿಸಿದೆ. ತ್ರಿಪುರಾದ ಬಂತೇಜಿಯೊಬ್ಬರು ಹೈದಾರಾಬಾದ್ಗೆ ಬಂದಿದ್ದಾಗ, ‘ಬುದ್ಧ ನನ್ನ ಕನಸಲ್ಲಿನಲ್ಲಿ ಬಂದಿದ್ದರು. ನನ್ನಲ್ಲಿ ಬದಲಾವಣೆಗಳಾಗುತ್ತಿದೆ. ಏನು ಮಾಡಬೇಕು’ ಎಂದು ಕೇಳಿದೆ. ಅವರು ಏನೂ ಹೇಳಲಿಲ್ಲ. ನಂತರ ನಾನು ದೆಹಲಿ, ಬೋಧಿ ಗಯಾಕ್ಕೂ ಭೇಟಿ ನೀಡಿದೆ’ ಎಂದು ಅವರು ಹೇಳಿದರು.