ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಶಾಹಿದ ಶೆಲ್ಫಿ ಅವರು, ‘ಈ ಹಬ್ಬವು ತ್ಯಾಗ ಬಲಿದಾನದ ಸಂಕೇತ. ನಮ್ಮ ಜೀವನದಲ್ಲಿ ತ್ಯಾಗ, ಬಲಿದಾನ ಎಲ್ಲ ಸಂದರ್ಭಗಳಲ್ಲೂ ಇರಬೇಕು. ಅದನ್ನು ಕಟ್ಟುನಿಟ್ಟಾಗಿ ಪರಿಪಾಲಿಸಬೇಕು. ತ್ಯಾಗ, ಬಲಿದಾನ ಸೌಹರ್ದತೆಯ ಸಂಕೇತ. ಇಡೀ ಮಾನವ ಕುಲವನ್ನು ರಕ್ಷಿಸಬೇಕು ಎಂಬುದು ಇದರ ಉದ್ದೇಶ’ ಎಂದರು.