<p><strong>ಹನೂರು</strong>: ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಸೋಮವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು.</p>.<p>ಸಂಜೆ 4.30ಕ್ಕೆ ತಾಳಬೆಟ್ಟದಲ್ಲಿ ದೂಪ, ಕರ್ಪೂರ ಹಚ್ಚಿ ಪ್ರಾರ್ಥಿಸಿದ ನಿಖಿಲ್ ಅವರು, 18 ಕಿ.ಮೀ ಪಾದಯಾತ್ರೆ ಆರಂಭಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಅವರು, ’ನಮ್ಮದು ಶಿವನ ಭಕ್ತರ ಕುಟುಂಬ. ಈ ಕಾರಣಕ್ಕಾಗಿ ಪಾದಯಾತ್ರೆ ಹೊರಟಿದ್ದೇನೆಯೇ ವಿನಾ ಬೇರೆ ಯಾವ ಉದ್ದೇಶವೂ ಇಲ್ಲ‘ ಎಂದರು.</p>.<p>ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು,’ ನಮ್ಮ ನಾಡಿನ ಜಲ ನೆಲ ವಿಷಯದ ಪರವಾಗಿ ಯಾವುದೇ ರಾಜಕೀಯ ಪಕ್ಷ ನಿಂತರೂ ಬೆಂಬಲ ಸೂಚಿಸುತ್ತೇವೆ. ಮೇಕೆದಾಟು ಪಾದಯಾತ್ರೆಗೆ ನಮ್ಮ ತಕರಾರಿಲ್ಲ‘ ಎಂದರು.</p>.<p>’ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಿದೆ. ಕಾಂಗ್ರೆಸ್ನ ಪಾದಯಾತ್ರೆಯು ಚುನಾವಣೆಗೆ ಪ್ರಚಾರ ಪಡೆಯಲು ಮಾತ್ರ ಸೀಮಿತವಾಗಬಾರದು. ಅವರು ಪಾದಯಾತ್ರೆ ಮಾಡಲಿ, ಅವರಿಗೆ ಒಳ್ಳೆಯದಾಗಲಿ‘ ಎಂದರು.</p>.<p>’2018ರಲ್ಲಿ ನನ್ನ ತಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆಯನ್ನು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಹಂತದವರೆಗೆ ಕೊಂಡೊಯ್ದಿದ್ದರು.ಎಚ್.ಡಿ.ದೇವೇಗೌಡ ಅವರು ನೀರಾವರಿ ಸಚಿವರಾಗಿದ್ದಾಗ ಮೇಕೆದಾಟು ಯೋಜನೆಯ ಬಗ್ಗೆ ಚಿಂತನೆ ನಡೆಸಿದ್ದರು.ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ಒದಗಿಸಲು ಯೋಚಿಸಿದ್ದರು‘ ಎಂದರು.</p>.<p>ತಿ.ನರಸೀಪುರ ಶಾಸಕ ಅಶ್ವಿನಿ ಗೌಡ, ಮಳವಳ್ಳಿ ಶಾಸಕ ಅನ್ನದಾನಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮಳವಳ್ಳಿ ಮಾಜಿ ಜೆಡಿಎಸ್ ಅಧ್ಯಕ್ಷ ಸಿ.ರವಿ, ಹನೂರು ಶಿವಮೂರ್ತಿ, ಮಂಜೇಶ್, ಗೋವಿಂದ, ಸುರೇಶ್ ಇತರರು ನಿಖಿಲ್ ಜೊತೆಗಿದ್ದರು.</p>.<p><a href="https://www.prajavani.net/district/chikkaballapur/nandhi-915122.html" itemprop="url">ಮಹಾಶಿವರಾತ್ರಿ: ನಂದಿಯಲ್ಲಿ ಶಿವೋತ್ಸವದ ವೈಭವ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು</strong>: ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಸೋಮವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು.</p>.<p>ಸಂಜೆ 4.30ಕ್ಕೆ ತಾಳಬೆಟ್ಟದಲ್ಲಿ ದೂಪ, ಕರ್ಪೂರ ಹಚ್ಚಿ ಪ್ರಾರ್ಥಿಸಿದ ನಿಖಿಲ್ ಅವರು, 18 ಕಿ.ಮೀ ಪಾದಯಾತ್ರೆ ಆರಂಭಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಅವರು, ’ನಮ್ಮದು ಶಿವನ ಭಕ್ತರ ಕುಟುಂಬ. ಈ ಕಾರಣಕ್ಕಾಗಿ ಪಾದಯಾತ್ರೆ ಹೊರಟಿದ್ದೇನೆಯೇ ವಿನಾ ಬೇರೆ ಯಾವ ಉದ್ದೇಶವೂ ಇಲ್ಲ‘ ಎಂದರು.</p>.<p>ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು,’ ನಮ್ಮ ನಾಡಿನ ಜಲ ನೆಲ ವಿಷಯದ ಪರವಾಗಿ ಯಾವುದೇ ರಾಜಕೀಯ ಪಕ್ಷ ನಿಂತರೂ ಬೆಂಬಲ ಸೂಚಿಸುತ್ತೇವೆ. ಮೇಕೆದಾಟು ಪಾದಯಾತ್ರೆಗೆ ನಮ್ಮ ತಕರಾರಿಲ್ಲ‘ ಎಂದರು.</p>.<p>’ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಿದೆ. ಕಾಂಗ್ರೆಸ್ನ ಪಾದಯಾತ್ರೆಯು ಚುನಾವಣೆಗೆ ಪ್ರಚಾರ ಪಡೆಯಲು ಮಾತ್ರ ಸೀಮಿತವಾಗಬಾರದು. ಅವರು ಪಾದಯಾತ್ರೆ ಮಾಡಲಿ, ಅವರಿಗೆ ಒಳ್ಳೆಯದಾಗಲಿ‘ ಎಂದರು.</p>.<p>’2018ರಲ್ಲಿ ನನ್ನ ತಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆಯನ್ನು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಹಂತದವರೆಗೆ ಕೊಂಡೊಯ್ದಿದ್ದರು.ಎಚ್.ಡಿ.ದೇವೇಗೌಡ ಅವರು ನೀರಾವರಿ ಸಚಿವರಾಗಿದ್ದಾಗ ಮೇಕೆದಾಟು ಯೋಜನೆಯ ಬಗ್ಗೆ ಚಿಂತನೆ ನಡೆಸಿದ್ದರು.ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ಒದಗಿಸಲು ಯೋಚಿಸಿದ್ದರು‘ ಎಂದರು.</p>.<p>ತಿ.ನರಸೀಪುರ ಶಾಸಕ ಅಶ್ವಿನಿ ಗೌಡ, ಮಳವಳ್ಳಿ ಶಾಸಕ ಅನ್ನದಾನಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮಳವಳ್ಳಿ ಮಾಜಿ ಜೆಡಿಎಸ್ ಅಧ್ಯಕ್ಷ ಸಿ.ರವಿ, ಹನೂರು ಶಿವಮೂರ್ತಿ, ಮಂಜೇಶ್, ಗೋವಿಂದ, ಸುರೇಶ್ ಇತರರು ನಿಖಿಲ್ ಜೊತೆಗಿದ್ದರು.</p>.<p><a href="https://www.prajavani.net/district/chikkaballapur/nandhi-915122.html" itemprop="url">ಮಹಾಶಿವರಾತ್ರಿ: ನಂದಿಯಲ್ಲಿ ಶಿವೋತ್ಸವದ ವೈಭವ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>