ಆದರೆ, ಈ ಬಾರಿ ಕೋವಿಡ್–19 ಕಾರಣಕ್ಕೆ ಜನರನ್ನು ನಿಯಂತ್ರಿಸುವುದಕ್ಕಾಗಿ ರಥೋತ್ಸವದ ದಿನ ದೇವಸ್ಥಾನಕ್ಕೆ ಬರುವ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಈ ವರ್ಷ ಚಾಮರಾಜೇಶ್ವರ ಸ್ವಾಮಿಯ ಜಾತ್ರೆ ರದ್ದಾಗಿದೆ. ದೇವಾಲಯದ ಮಟ್ಟಿಗೆ ಮಾತ್ರ ರಥೋತ್ಸವ ದಿನದ ಪೂಜೆಗಳು ನಡೆಯಲಿವೆ.