<p><strong>ಚಾಮರಾಜನಗರ:</strong> ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ದಿನ ಈ ಬಾರಿ ಭಾನುವಾರ (ಜುಲೈ 5) ನಡೆಯಬೇಕು.</p>.<p>2017ರಲ್ಲಿ ರಥಕ್ಕೆ ಬೆಂಕಿ ಬಿದ್ದ ನಂತರ ರಥೋತ್ಸವ ಸ್ಥಗಿತಗೊಂಡಿದ್ದು, ಹೊಸ ರಥ ನಿರ್ಮಾಣ ಕಾರ್ಯ ಆಗದೇ ಇರುವುದರಿಂದ ನಾಲ್ಕು ವರ್ಷಗಳಿಂದ ರಥೋತ್ಸವ ನಡೆಯುತ್ತಿರಲಿಲ್ಲ. ಹಾಗಿದ್ದರೂ ನೂರಾರು ಭಕ್ತರು ರಥೋತ್ಸವದ ದಿನ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹೋಗುತ್ತಿದ್ದರು.</p>.<p>ಆದರೆ, ಈ ಬಾರಿ ಕೋವಿಡ್–19 ಕಾರಣಕ್ಕೆ ಜನರನ್ನು ನಿಯಂತ್ರಿಸುವುದಕ್ಕಾಗಿ ರಥೋತ್ಸವದ ದಿನ ದೇವಸ್ಥಾನಕ್ಕೆ ಬರುವ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಈ ವರ್ಷ ಚಾಮರಾಜೇಶ್ವರ ಸ್ವಾಮಿಯ ಜಾತ್ರೆ ರದ್ದಾಗಿದೆ. ದೇವಾಲಯದ ಮಟ್ಟಿಗೆ ಮಾತ್ರ ರಥೋತ್ಸವ ದಿನದ ಪೂಜೆಗಳು ನಡೆಯಲಿವೆ.</p>.<p>ವಿಶೇಷ ಜಾತ್ರೆ: ಆಷಾಢ ಮಾಸದಲ್ಲಿ ರಥೋತ್ಸವ ನಡೆಯುವುದು ಈ ದೇವಾಲಯದ ವಿಶೇಷ.ಜಾತ್ರೆಯ ದಿನದಂದು ಜಿಲ್ಲೆಯ, ಹೊರ ಜಿಲ್ಲೆಗಳ ಸಾವಿರಾರು ನವ ದಂಪತಿ ದೇವಸ್ಥಾನಕ್ಕೆ ಬಂದು ಹರಕೆ ಒಪ್ಪಿಸುವುದು ವಾಡಿಕೆ.</p>.<p>ಸದ್ಯ, ₹1 ಕೋಟಿ ವೆಚ್ಚದಲ್ಲಿ ರಥದ ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಂದಿನ ಜಾತ್ರೆಯ ವೇಳೆಗೆ ರಥ ಸಿದ್ಧವಾಗುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ದಿನ ಈ ಬಾರಿ ಭಾನುವಾರ (ಜುಲೈ 5) ನಡೆಯಬೇಕು.</p>.<p>2017ರಲ್ಲಿ ರಥಕ್ಕೆ ಬೆಂಕಿ ಬಿದ್ದ ನಂತರ ರಥೋತ್ಸವ ಸ್ಥಗಿತಗೊಂಡಿದ್ದು, ಹೊಸ ರಥ ನಿರ್ಮಾಣ ಕಾರ್ಯ ಆಗದೇ ಇರುವುದರಿಂದ ನಾಲ್ಕು ವರ್ಷಗಳಿಂದ ರಥೋತ್ಸವ ನಡೆಯುತ್ತಿರಲಿಲ್ಲ. ಹಾಗಿದ್ದರೂ ನೂರಾರು ಭಕ್ತರು ರಥೋತ್ಸವದ ದಿನ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹೋಗುತ್ತಿದ್ದರು.</p>.<p>ಆದರೆ, ಈ ಬಾರಿ ಕೋವಿಡ್–19 ಕಾರಣಕ್ಕೆ ಜನರನ್ನು ನಿಯಂತ್ರಿಸುವುದಕ್ಕಾಗಿ ರಥೋತ್ಸವದ ದಿನ ದೇವಸ್ಥಾನಕ್ಕೆ ಬರುವ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಈ ವರ್ಷ ಚಾಮರಾಜೇಶ್ವರ ಸ್ವಾಮಿಯ ಜಾತ್ರೆ ರದ್ದಾಗಿದೆ. ದೇವಾಲಯದ ಮಟ್ಟಿಗೆ ಮಾತ್ರ ರಥೋತ್ಸವ ದಿನದ ಪೂಜೆಗಳು ನಡೆಯಲಿವೆ.</p>.<p>ವಿಶೇಷ ಜಾತ್ರೆ: ಆಷಾಢ ಮಾಸದಲ್ಲಿ ರಥೋತ್ಸವ ನಡೆಯುವುದು ಈ ದೇವಾಲಯದ ವಿಶೇಷ.ಜಾತ್ರೆಯ ದಿನದಂದು ಜಿಲ್ಲೆಯ, ಹೊರ ಜಿಲ್ಲೆಗಳ ಸಾವಿರಾರು ನವ ದಂಪತಿ ದೇವಸ್ಥಾನಕ್ಕೆ ಬಂದು ಹರಕೆ ಒಪ್ಪಿಸುವುದು ವಾಡಿಕೆ.</p>.<p>ಸದ್ಯ, ₹1 ಕೋಟಿ ವೆಚ್ಚದಲ್ಲಿ ರಥದ ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಂದಿನ ಜಾತ್ರೆಯ ವೇಳೆಗೆ ರಥ ಸಿದ್ಧವಾಗುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>