<p><strong>ಚಾಮರಾಜನಗರ</strong>: ಜಿಲ್ಲೆಯ ವಿವಿಧೆಡೆ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಸ್ವತ್ತುಗಳನ್ನು ಕೂಡಲೇ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂ ದಾಖಲೆಗಳ ಉಪ ನಿರ್ದೇಶಕರು ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.</p>.<p>ಖಾತೆಯಾಗುವವರೆಗೂ ಯಾರ ಹೆಸರಿಗೂ ಖಾತೆ ಮಾಡದಂತೆ, ಕಂದಾಯ ಗ್ರಾಮವಾಗಿ ಘೋಷಿಸದಂತೆ, ಯಾವುದೇ ವಹಿವಾಟು ನಡೆಸಲು ಅವಕಾಶ ನೀಡದಂತೆ ತಕರಾರು ಅರ್ಜಿಯನ್ನೂ ಸಲ್ಲಿಸಿದ್ದಾರೆ.</p>.<p>‘ಮಾರ್ಚ್ 20ರಂದು ಬರೆದಿರುವ ಪತ್ರವು 21ರಂದು ಕಚೇರಿಗೆ ತಲುಪಿದ್ದು ಅರ್ಜಿಯ ಪರಿಶೀಲನೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p><strong>ಪತ್ರದಲ್ಲಿ ಏನಿದೆ?</strong></p>.<p>ಜ.23, 1950ರಂದು ಮೈಸೂರು ಮಹಾರಾಜರು ಹಾಗೂ ಅಂದಿನ ಕೇಂದ್ರ ಸರ್ಕಾರದ ನಡುವಿನ ಒಪ್ಪಂದದಂತೆ ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ, ಹಲವು ಸರ್ವೇ ನಂಬರ್ಗಳಲ್ಲಿರುವ 5,119 ಎಕರೆ 9 ಗುಂಟೆ ಜಮೀನು ಮಹಾರಾಜರಿಗೆ ಸೇರಿದ ಖಾಸಗಿ ಸ್ವತ್ತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.</p>.<p><strong>ಎಲ್ಲಿ ಎಷ್ಟು ಆಸ್ತಿ?</strong></p>.<p>ಅಟ್ಟಗೂಳಿಪುರದಲ್ಲಿ 4,445 ಎಕರೆ 33 ಗುಂಟೆ, ಹರದನಹಳ್ಳಿಯ ಸರ್ವೆ ನಂಬರ್ 125, 124, 134, 135, 133, 463, 169, 184ರಲ್ಲಿ 130 ಎಕರೆ 3 ಗುಂಟೆ, ಬೂದಿತಿಟ್ಟು ಗ್ರಾಮದ ಸರ್ವೇ ನಂಬರ್ 117ರಲ್ಲಿ 63 ಎಕರೆ 39 ಗುಂಟೆ, ಕರಡಿಹಳ್ಳ ಗ್ರಾಮದ ಸರ್ವೇ ನಂಬರ್ 1, 2, 3ರಲ್ಲಿ 76 ಎಕರೆ 23 ಗುಂಟೆ.</p>.<p>ಕನ್ನಿಕೆರೆ ಗ್ರಾಮದ ಸರ್ವೇ ನಂಬರ್ 1, 2, 3 ರಲ್ಲಿ 190 ಎಕರೆ 4 ಗುಂಟೆ, ಉಮ್ಮತ್ತೂರು ಗ್ರಾಮದ ಸರ್ವೇ ನಂಬರ್ 563ರಲ್ಲಿರುವ 199 ಎಕರೆ 27 ಗುಂಟೆ, ಬಸವಾಪುರ ಗ್ರಾಮದ ಸರ್ವೇ ನಂಬರ್ 143ರಲ್ಲಿ 13 ಎಕರೆ ಹಾಗೂ ಚಾಮರಾಜನಗರದಲ್ಲಿರುವ ಮಹಾರಾಜರ ಜನನ ಮಂಟಪ ಹಾಗೂ ಉದ್ಯಾನವು ರಾಜಮನೆತನದ ಸ್ವತ್ತಾಗಿದೆ ಎಂದು ತಿಳಿಸಿದ್ದಾರೆ.</p>.<p>ರಾಜರ ಸ್ವತ್ತುಗಳಿರುವ ಗ್ರಾಮಗಳನ್ನು ಜಿಲ್ಲಾಡಳಿತವು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುತ್ತಿರುವ ಮಾಹಿತಿ ಇದ್ದು, ಖಾಸಗಿ ಸ್ವತ್ತುಗಳನ್ನು ಕಂದಾಯ ಗ್ರಾಮವಾಗಿಸಬಾರದು ಎಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.</p>.<p><strong>‘ಪತ್ರ ತಲುಪಿದೆ; ಪೂರಕ ದಾಖಲೆಗಳು ಸಲ್ಲಿಸಿಲ್ಲ’ </strong></p><p>ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಪತ್ರ ಜಿಲ್ಲಾಡಳಿತಕ್ಕೆ ತಲುಪಿದೆ. ಆದರೆ ಮಹಾರಾಜರ ಖಾಸಗಿ ಸ್ವತ್ತು ಎಂಬುದಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ. ಅರ್ಜಿ ಸಂಬಂಧ ಪರಿಶೀಲನೆ ನಡೆಸುವಂತೆ ಚಾಮರಾಜನಗರ ತಹಶೀಲ್ದಾರ್ಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಜಿಲ್ಲೆಯ ವಿವಿಧೆಡೆ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಸ್ವತ್ತುಗಳನ್ನು ಕೂಡಲೇ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂ ದಾಖಲೆಗಳ ಉಪ ನಿರ್ದೇಶಕರು ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.</p>.<p>ಖಾತೆಯಾಗುವವರೆಗೂ ಯಾರ ಹೆಸರಿಗೂ ಖಾತೆ ಮಾಡದಂತೆ, ಕಂದಾಯ ಗ್ರಾಮವಾಗಿ ಘೋಷಿಸದಂತೆ, ಯಾವುದೇ ವಹಿವಾಟು ನಡೆಸಲು ಅವಕಾಶ ನೀಡದಂತೆ ತಕರಾರು ಅರ್ಜಿಯನ್ನೂ ಸಲ್ಲಿಸಿದ್ದಾರೆ.</p>.<p>‘ಮಾರ್ಚ್ 20ರಂದು ಬರೆದಿರುವ ಪತ್ರವು 21ರಂದು ಕಚೇರಿಗೆ ತಲುಪಿದ್ದು ಅರ್ಜಿಯ ಪರಿಶೀಲನೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p><strong>ಪತ್ರದಲ್ಲಿ ಏನಿದೆ?</strong></p>.<p>ಜ.23, 1950ರಂದು ಮೈಸೂರು ಮಹಾರಾಜರು ಹಾಗೂ ಅಂದಿನ ಕೇಂದ್ರ ಸರ್ಕಾರದ ನಡುವಿನ ಒಪ್ಪಂದದಂತೆ ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ, ಹಲವು ಸರ್ವೇ ನಂಬರ್ಗಳಲ್ಲಿರುವ 5,119 ಎಕರೆ 9 ಗುಂಟೆ ಜಮೀನು ಮಹಾರಾಜರಿಗೆ ಸೇರಿದ ಖಾಸಗಿ ಸ್ವತ್ತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.</p>.<p><strong>ಎಲ್ಲಿ ಎಷ್ಟು ಆಸ್ತಿ?</strong></p>.<p>ಅಟ್ಟಗೂಳಿಪುರದಲ್ಲಿ 4,445 ಎಕರೆ 33 ಗುಂಟೆ, ಹರದನಹಳ್ಳಿಯ ಸರ್ವೆ ನಂಬರ್ 125, 124, 134, 135, 133, 463, 169, 184ರಲ್ಲಿ 130 ಎಕರೆ 3 ಗುಂಟೆ, ಬೂದಿತಿಟ್ಟು ಗ್ರಾಮದ ಸರ್ವೇ ನಂಬರ್ 117ರಲ್ಲಿ 63 ಎಕರೆ 39 ಗುಂಟೆ, ಕರಡಿಹಳ್ಳ ಗ್ರಾಮದ ಸರ್ವೇ ನಂಬರ್ 1, 2, 3ರಲ್ಲಿ 76 ಎಕರೆ 23 ಗುಂಟೆ.</p>.<p>ಕನ್ನಿಕೆರೆ ಗ್ರಾಮದ ಸರ್ವೇ ನಂಬರ್ 1, 2, 3 ರಲ್ಲಿ 190 ಎಕರೆ 4 ಗುಂಟೆ, ಉಮ್ಮತ್ತೂರು ಗ್ರಾಮದ ಸರ್ವೇ ನಂಬರ್ 563ರಲ್ಲಿರುವ 199 ಎಕರೆ 27 ಗುಂಟೆ, ಬಸವಾಪುರ ಗ್ರಾಮದ ಸರ್ವೇ ನಂಬರ್ 143ರಲ್ಲಿ 13 ಎಕರೆ ಹಾಗೂ ಚಾಮರಾಜನಗರದಲ್ಲಿರುವ ಮಹಾರಾಜರ ಜನನ ಮಂಟಪ ಹಾಗೂ ಉದ್ಯಾನವು ರಾಜಮನೆತನದ ಸ್ವತ್ತಾಗಿದೆ ಎಂದು ತಿಳಿಸಿದ್ದಾರೆ.</p>.<p>ರಾಜರ ಸ್ವತ್ತುಗಳಿರುವ ಗ್ರಾಮಗಳನ್ನು ಜಿಲ್ಲಾಡಳಿತವು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುತ್ತಿರುವ ಮಾಹಿತಿ ಇದ್ದು, ಖಾಸಗಿ ಸ್ವತ್ತುಗಳನ್ನು ಕಂದಾಯ ಗ್ರಾಮವಾಗಿಸಬಾರದು ಎಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.</p>.<p><strong>‘ಪತ್ರ ತಲುಪಿದೆ; ಪೂರಕ ದಾಖಲೆಗಳು ಸಲ್ಲಿಸಿಲ್ಲ’ </strong></p><p>ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಪತ್ರ ಜಿಲ್ಲಾಡಳಿತಕ್ಕೆ ತಲುಪಿದೆ. ಆದರೆ ಮಹಾರಾಜರ ಖಾಸಗಿ ಸ್ವತ್ತು ಎಂಬುದಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ. ಅರ್ಜಿ ಸಂಬಂಧ ಪರಿಶೀಲನೆ ನಡೆಸುವಂತೆ ಚಾಮರಾಜನಗರ ತಹಶೀಲ್ದಾರ್ಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>