<p><strong>ಗುಂಡ್ಲುಪೇಟೆ</strong>: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿರುವ ಪುರಾತನ ಕಾಲದ ಸಿದ್ದರಾಮೇಶ್ವರ ದೇವಸ್ಥಾನ ಶಿಥಿಲವಾಗುತ್ತಿದ್ದು ಕಾಯಕಲ್ಪದ ನಿರೀಕ್ಷೆಯಲ್ಲಿದೆ.</p>.<p>ಈ ದೇವಸ್ಥಾನ ಚೋಳರ ಕಾಲದಾಗಿದ್ದು, ಇದರ ಸುತ್ತಲೂ ಅರೆಕಂಬಗಳು ಮತ್ತು ಕೋಷ್ಟ ಮಂಟಪಗಳನ್ನು ಕಾಣಬಹುದು.ನವರಂಗದಲ್ಲಿ ಮಹಿಷ ಮರ್ಧಿನಿಶಿಲ್ಪ, ಉಮಾಮಹೇಶ್ವರ, ಸೂರ್ಯ, ಶಂಕರನಾರಾಯಣ, ನಂದಿ, ಗಣಪತಿ, ಶಿಲ್ಪಗಳು, ಗರ್ಭಗೃಹದ ಮೇಲೆ ಗೋಪುರವಿದೆ. ಇದು ಶೈವ ಪರಂಪರೆಗೆ ಸೇರಿದ ದೇವಾಲಯ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯಪಡುತ್ತಾರೆ.</p>.<p>ಸೋಮವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆಮತ್ತು ಶಿವರಾತ್ರಿ ಹಬ್ಬದ ಸಮಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಇಲ್ಲಿ ನಡೆಯುತ್ತವೆ.</p>.<p>‘ನಿರ್ವಹಣೆ ಕೊರತೆಯಿಂದ ದೇವಾಲಯದ ಕಟ್ಟಡ ಶಿಥಿಲವಾಗಿದ್ದು,ದೇವಸ್ಥಾನದ ಹಿಂದಿನ ಭಾಗ ಸೋರುತ್ತದೆ. ಗೋಡೆ ಬಿರುಕು ಬಿಟ್ಟಿದೆ. ಇತಿಹಾಸ ಸಾರುವ ಈ ದೇವಾಲಯದ ಜೀರ್ಣೋದ್ಧಾರ ಆಗಬೇಕು ಎಂಬ ಅಭಿಲಾಷೆ ಗ್ರಾಮದ ಯುವಕರಲ್ಲಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ದೇವಸ್ಥಾನ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಗ್ರಾಮದ ಮಹೇಂದ್ರ ಒತ್ತಾಯಿಸಿದರು.</p>.<p>ದೇವಸ್ಥಾನದ ಮುಂಭಾಗದಲ್ಲಿ ಇರುವ ಕಲ್ಲಿನ ಶಾಸನ ಮತ್ತು ಹೊರಭಾಗದ ಗೋಡೆಯ ಮೇಲೆ ಬರೆದಿರುವ ಮೊದಲ ಶಾಸನಗಳಲ್ಲಿ 12ನೇ ಶತಮಾನದಿಂದ 18ನೇ ಶತಮಾನದವರೆಗೆ ದಾನ ದತ್ತಿ ನೀಡಿರುವುದರ ಬಗ್ಗೆ ಉಲ್ಲೇಖವಿದೆ.</p>.<p class="Subhead">ಹಸಗೂಲಿ ಹೆಸರು ಬಂದಿದ್ದು ಹೇಗೆ?: ಹಸಗೂಲಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿದೆ. ಸ್ಥಳೀಯರ ಪ್ರಕಾರ, ಹಸುಗೂಲಿಗೆ 10ನೇ ಶತಮಾನದಲ್ಲಿ ಪುನುಗೂಲಿ ಎಂಬ ಹಸರಿತ್ತು. ನಂತರದ ಶತಮಾನಗಳಲ್ಲಿ ಇದು ‘ಹಸುಕಲಿ’ ಎಂದು ಬದಲಾಯಿತು. ಆ ಬಳಿಕ ಹಸಗೂಲಿ ಆಯಿತು.</p>.<p>ಹಸಗೂಲಿ ಎಂದರೆ ಪಶುಗಳನ್ನು ಕೊಲ್ಲು ಎಂದರ್ಥ ಎಂದು ಹೇಳುತ್ತಾರೆ ಸ್ಥಳೀಯರು. ಹಸಗೂಲಿ ಮಾರಮ್ಮ ದೇವಿಗೆ ಬಲಿ ಕೊಡುವ ಪದ್ದತಿ ಇತ್ತು. ‘ಹಸುಕೊಲೆ‘ ‘ಹಸುಕೂಲಿ’ ಪದಗಳು ನಂತರದ ದಿನಗಳಲ್ಲಿ ಹಸಗೂಲಿ ಎಂದು ಬದಲಾಗಿದೆ ಎಂದು ಗ್ರಾಮದ ಹಿರಿಯರ ಅನಿಸಿಕೆ.</p>.<p class="Briefhead"><strong>ಶಿಲಾಯುಗದ ಅವಶೇಷಗಳು...</strong></p>.<p>‘ಹಸಗೂಲಿ ಗ್ರಾಮದಲ್ಲಿ, ಶಿಲಾಯುಗಕ್ಕೆ ಸೇರಿದ ಅವಶೇಷಗಳಿವೆ. ದೇವಾಲಯದ ಮುಂದೆ ಶಿಲಾಯುಗಕ್ಕೆ ಸೇರಿದ ಸಮಾಧಿಗಳನ್ನು ಗುರುತಿಸಲಾಗಿದೆ. ಇವುಗಳು ಈಗ ಸಂಪೂರ್ಣ ನಾಶವಾಗಿ ಕುರುಹುಗಳು ಮಾತ್ರವೇ ಇವೆ. ಈ ಅವಶೇಷಗಳ ಮಧ್ಯೆ ವೀರಗಲ್ಲುಗಳಿವೆ. ಇದನ್ನು ಗ್ರಾಮಸ್ಥರು ವೀರಗುಡಿಗಳೆಂದು ಕರೆಯುತ್ತಾರೆ’ ಎಂದು ದೇವಸ್ಥಾನದ ಪೂಜಾರಿ ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಸಿದ್ದರಾಮೇಶ್ವರ ದೇವಾಲಯವು ಪ್ರಾಚೀನ ದೇವಾಲಯ. ವಾಸ್ತು ನೋಡಿದಾಗ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯ ಎಂಬುದು ದೃಢಪಡುತ್ತದೆ. ದೇವಾಲಯದ ಗೋಪುರ ಕೆಳಗಿನ ಎಡಬದಿಯ ಭಿತ್ತಿ (ಗೋಡೆ) ಕುಸಿಯುತ್ತಿದೆ. ಈ ದೇವಾಲಯವನ್ನು ಸಂರಕ್ಷಿಸಲು ಸ್ಥಳೀಯರು ತಾಲ್ಲೂಕು ಆಡಳಿತ ಕ್ರಮ ವಹಿಸಬೇಕು’ ಎಂದು ಮೈಸೂರು ಮಹಾರಾಜ ಕಾಲೇಜಿನ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕ ಡಾ.ಎಸ್.ಮಣಿಕಂಠ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ</strong>: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿರುವ ಪುರಾತನ ಕಾಲದ ಸಿದ್ದರಾಮೇಶ್ವರ ದೇವಸ್ಥಾನ ಶಿಥಿಲವಾಗುತ್ತಿದ್ದು ಕಾಯಕಲ್ಪದ ನಿರೀಕ್ಷೆಯಲ್ಲಿದೆ.</p>.<p>ಈ ದೇವಸ್ಥಾನ ಚೋಳರ ಕಾಲದಾಗಿದ್ದು, ಇದರ ಸುತ್ತಲೂ ಅರೆಕಂಬಗಳು ಮತ್ತು ಕೋಷ್ಟ ಮಂಟಪಗಳನ್ನು ಕಾಣಬಹುದು.ನವರಂಗದಲ್ಲಿ ಮಹಿಷ ಮರ್ಧಿನಿಶಿಲ್ಪ, ಉಮಾಮಹೇಶ್ವರ, ಸೂರ್ಯ, ಶಂಕರನಾರಾಯಣ, ನಂದಿ, ಗಣಪತಿ, ಶಿಲ್ಪಗಳು, ಗರ್ಭಗೃಹದ ಮೇಲೆ ಗೋಪುರವಿದೆ. ಇದು ಶೈವ ಪರಂಪರೆಗೆ ಸೇರಿದ ದೇವಾಲಯ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯಪಡುತ್ತಾರೆ.</p>.<p>ಸೋಮವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆಮತ್ತು ಶಿವರಾತ್ರಿ ಹಬ್ಬದ ಸಮಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಇಲ್ಲಿ ನಡೆಯುತ್ತವೆ.</p>.<p>‘ನಿರ್ವಹಣೆ ಕೊರತೆಯಿಂದ ದೇವಾಲಯದ ಕಟ್ಟಡ ಶಿಥಿಲವಾಗಿದ್ದು,ದೇವಸ್ಥಾನದ ಹಿಂದಿನ ಭಾಗ ಸೋರುತ್ತದೆ. ಗೋಡೆ ಬಿರುಕು ಬಿಟ್ಟಿದೆ. ಇತಿಹಾಸ ಸಾರುವ ಈ ದೇವಾಲಯದ ಜೀರ್ಣೋದ್ಧಾರ ಆಗಬೇಕು ಎಂಬ ಅಭಿಲಾಷೆ ಗ್ರಾಮದ ಯುವಕರಲ್ಲಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ದೇವಸ್ಥಾನ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಗ್ರಾಮದ ಮಹೇಂದ್ರ ಒತ್ತಾಯಿಸಿದರು.</p>.<p>ದೇವಸ್ಥಾನದ ಮುಂಭಾಗದಲ್ಲಿ ಇರುವ ಕಲ್ಲಿನ ಶಾಸನ ಮತ್ತು ಹೊರಭಾಗದ ಗೋಡೆಯ ಮೇಲೆ ಬರೆದಿರುವ ಮೊದಲ ಶಾಸನಗಳಲ್ಲಿ 12ನೇ ಶತಮಾನದಿಂದ 18ನೇ ಶತಮಾನದವರೆಗೆ ದಾನ ದತ್ತಿ ನೀಡಿರುವುದರ ಬಗ್ಗೆ ಉಲ್ಲೇಖವಿದೆ.</p>.<p class="Subhead">ಹಸಗೂಲಿ ಹೆಸರು ಬಂದಿದ್ದು ಹೇಗೆ?: ಹಸಗೂಲಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿದೆ. ಸ್ಥಳೀಯರ ಪ್ರಕಾರ, ಹಸುಗೂಲಿಗೆ 10ನೇ ಶತಮಾನದಲ್ಲಿ ಪುನುಗೂಲಿ ಎಂಬ ಹಸರಿತ್ತು. ನಂತರದ ಶತಮಾನಗಳಲ್ಲಿ ಇದು ‘ಹಸುಕಲಿ’ ಎಂದು ಬದಲಾಯಿತು. ಆ ಬಳಿಕ ಹಸಗೂಲಿ ಆಯಿತು.</p>.<p>ಹಸಗೂಲಿ ಎಂದರೆ ಪಶುಗಳನ್ನು ಕೊಲ್ಲು ಎಂದರ್ಥ ಎಂದು ಹೇಳುತ್ತಾರೆ ಸ್ಥಳೀಯರು. ಹಸಗೂಲಿ ಮಾರಮ್ಮ ದೇವಿಗೆ ಬಲಿ ಕೊಡುವ ಪದ್ದತಿ ಇತ್ತು. ‘ಹಸುಕೊಲೆ‘ ‘ಹಸುಕೂಲಿ’ ಪದಗಳು ನಂತರದ ದಿನಗಳಲ್ಲಿ ಹಸಗೂಲಿ ಎಂದು ಬದಲಾಗಿದೆ ಎಂದು ಗ್ರಾಮದ ಹಿರಿಯರ ಅನಿಸಿಕೆ.</p>.<p class="Briefhead"><strong>ಶಿಲಾಯುಗದ ಅವಶೇಷಗಳು...</strong></p>.<p>‘ಹಸಗೂಲಿ ಗ್ರಾಮದಲ್ಲಿ, ಶಿಲಾಯುಗಕ್ಕೆ ಸೇರಿದ ಅವಶೇಷಗಳಿವೆ. ದೇವಾಲಯದ ಮುಂದೆ ಶಿಲಾಯುಗಕ್ಕೆ ಸೇರಿದ ಸಮಾಧಿಗಳನ್ನು ಗುರುತಿಸಲಾಗಿದೆ. ಇವುಗಳು ಈಗ ಸಂಪೂರ್ಣ ನಾಶವಾಗಿ ಕುರುಹುಗಳು ಮಾತ್ರವೇ ಇವೆ. ಈ ಅವಶೇಷಗಳ ಮಧ್ಯೆ ವೀರಗಲ್ಲುಗಳಿವೆ. ಇದನ್ನು ಗ್ರಾಮಸ್ಥರು ವೀರಗುಡಿಗಳೆಂದು ಕರೆಯುತ್ತಾರೆ’ ಎಂದು ದೇವಸ್ಥಾನದ ಪೂಜಾರಿ ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಸಿದ್ದರಾಮೇಶ್ವರ ದೇವಾಲಯವು ಪ್ರಾಚೀನ ದೇವಾಲಯ. ವಾಸ್ತು ನೋಡಿದಾಗ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯ ಎಂಬುದು ದೃಢಪಡುತ್ತದೆ. ದೇವಾಲಯದ ಗೋಪುರ ಕೆಳಗಿನ ಎಡಬದಿಯ ಭಿತ್ತಿ (ಗೋಡೆ) ಕುಸಿಯುತ್ತಿದೆ. ಈ ದೇವಾಲಯವನ್ನು ಸಂರಕ್ಷಿಸಲು ಸ್ಥಳೀಯರು ತಾಲ್ಲೂಕು ಆಡಳಿತ ಕ್ರಮ ವಹಿಸಬೇಕು’ ಎಂದು ಮೈಸೂರು ಮಹಾರಾಜ ಕಾಲೇಜಿನ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕ ಡಾ.ಎಸ್.ಮಣಿಕಂಠ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>