<p><strong>ಚಾಮರಾಜನಗರ: </strong>ಜಿಲ್ಲೆಯಲ್ಲಿ ಸಾಂಬಾರ್ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.</p>.<p>ಕ್ವಿಂಟಲ್ ಸಾಂಬಾರ್ (ಸಣ್ಣ) ಈರುಳ್ಳಿ ₹800ರಿಂದ ₹1,100 ನಡುವೆ ಮಾರಾಟವಾಗುತ್ತಿದ್ದು, ಹಾಕಿದ ಖರ್ಚು ರೈತರಿಗೆ ಬರುತ್ತಿಲ್ಲ. ಇದರಿಂದಾಗಿ ಕೆಲ ಸಣ್ಣ ರೈತರು ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ.</p>.<p>ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಹನೂರು ಭಾಗಗಳಲ್ಲಿ ಸಣ್ಣ ಈರುಳ್ಳಿಯನ್ನು ಹೆಚ್ಚು ಬೆಳೆಯುತ್ತಾರೆ. ತಮಿಳುನಾಡಿನಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದ್ದು, ಅಲ್ಲಿಂದ ಶ್ರೀಲಂಕಾಕ್ಕೂ ರಫ್ತಾಗುತ್ತದೆ.</p>.<p>‘ಕೋವಿಡ್ ಸಮಯದಲ್ಲಿ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದ್ದರೂ, ಇಷ್ಟು ಬೆಲೆ ಕುಸಿತವಾಗಿರಲಿಲ್ಲ’ ಎಂದು ಹೇಳುತ್ತಾರೆ ರೈತರು.</p>.<p class="Subhead"><strong>ಚಳಿಗಾಲದ ಬೆಳೆ: </strong>ಚಳಿಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ 2,400 ಹೆಕ್ಟೇರ್ ಪ್ರದೇಶದಲ್ಲಿ ಸಾಂಬಾರ್ ಈರುಳ್ಳಿ ಬಿತ್ತನೆ ಮಾಡಲಾಗಿದೆ.</p>.<p>ಸಾಮಾನ್ಯವಾಗಿ ರೈತರು ನವೆಂಬರ್ ತಿಂಗಳಲ್ಲಿ ಬಿತ್ತನೆ ಮಾಡುತ್ತಾರೆ. ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಕಳೆದ ನವೆಂಬರ್ ತಿಂಗಳಲ್ಲಿ ಮಳೆಯಾಗಿದ್ದರಿಂದ ಬಿತ್ತನೆ ವಿಳಂಬವಾಗಿದೆ.</p>.<p>ಡಿಸೆಂಬರ್ನಲ್ಲಿ ಬಿತ್ತನೆ ನಡೆದು,ಬಹುತೇಕ ಕಡೆಗಳಲ್ಲಿ ಈಗ ಕಟಾವು ನಡೆಯುತ್ತಿದೆ. ಕೆ.ಜಿಗೆ ₹8ನಿಂದ ₹11ರವರೆಗೆ ಇದೆ.ರೈತರು ಬಿತ್ತನೆ ಈರುಳ್ಳಿಯನ್ನು ಕ್ವಿಂಟಲ್ಗೆ ₹2,000ದಿಂದ ₹5,000ದವರೆಗೂ ನೀಡಿ ಖರೀದಿಸಿದ್ದರು.</p>.<p>ಸಾಮಾನ್ಯವಾಗಿ ತಮಿಳುನಾಡಿನ ವ್ಯಾಪಾರಿಗಳು ಜಿಲ್ಲೆಗೆ ಬಂದು ರೈತರಿಂದ ನೇರವಾಗಿ ಖರೀದಿಸುತ್ತಾರೆ. ಈ ಬಾರಿ ಅವರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ವ್ಯಾಪಾರಿಗಳೇ ಈರುಳ್ಳಿ ಕಟಾವು ಮಾಡಿದರೆ ಕೆಜಿಗೆ ₹8ರಂತೆ ನೀಡುತ್ತಿದ್ದಾರೆ. ಕಟಾವು ಮಾಡಿದ ಈರುಳ್ಳಿಯನ್ನು ಕೆ.ಜಿಗೆ ₹11–₹12ರಂತೆ ಕೊಳ್ಳುತ್ತಿದ್ದಾರೆ.</p>.<p class="Subhead">ಬಾರದ ಅಸಲು: ‘ಸಣ್ಣ ಈರುಳ್ಳಿ ಬೆಳೆಯಲು ಎಕರೆಗೆ ₹35 ಸಾವಿರದಿಂದ ₹40 ಸಾವಿರ ಖರ್ಚು ಬರುತ್ತದೆ. ಎಕರೆಗೆ ಅತಿ ಹೆಚ್ಚು ಎಂದರೆ 40ರಿಂದ 50 ಕ್ವಿಂಟಲ್ವರೆಗೂ ಇಳುವರಿ ಬರುತ್ತದೆ. ಒಂದು ಎಕರೆಯಲ್ಲಿ ಈರುಳ್ಳಿ ಹಾಕಿದ್ದೆ. 23 ಕ್ವಿಂಟಲ್ ಬಂದಿದೆ. ಕ್ವಿಂಟಲ್ಗೆ ₹900ರಂತೆ ಮಾರಾಟ ಮಾಡಿದ್ದೇನೆ. ಮಾಡಿದ ಖರ್ಚಿನ ಅರ್ಧದಷ್ಟೂ ಬಂದಿಲ್ಲ’ ಎಂದು ಬೆಳೆಗಾರ ಜಯಪ್ಪ ಅವರು‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ ಬಾರಿ ಇಳುವರಿಯೂ ಕಡಿಮೆಯಾಗಿದೆ, ಬೆಲೆಯೂ ಸಿಕ್ಕಿಲ್ಲ. ಶ್ರಮವಹಿಸಿ ಬೆಳೆ ಬೆಳೆದಿರುವುದು ವ್ಯರ್ಥವಾಗಿದೆ’ ಎಂದರು.</p>.<p>‘ಖರ್ಚು ಕಳೆದು ಸ್ವಲ್ಪವಾದರೂ ಲಾಭ ಕಾಣುವಂತಾಗಬೇಕಾದರೆ ಕನಿಷ್ಠ ಕ್ವಿಂಟಲ್ಗೆ ₹2,500 ಸಾವಿರದಿಂದ ₹3,000 ಬೆಲೆ ಸಿಗಬೇಕು. ಇಲ್ಲದಿದ್ದರೆ ಪ್ರಯೋಜನವಿಲ್ಲ. ಬೆಲೆ ಕುಸಿತದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ, ಕನಿಷ್ಠಪಕ್ಷ ನಷ್ಟ ಆಗದಂತೆ ನೋಡಿಕೊಳ್ಳಬೇಕು‘ ಎಂಬುದು ಬೆಳೆಗಾರರ ಒತ್ತಾಯ.</p>.<p class="Briefhead"><strong>ತಮಿಳುನಾಡಿನಲ್ಲಿ ಬೇಡಿಕೆ ಕುಸಿತ</strong></p>.<p>‘ಜಿಲ್ಲೆಯಲ್ಲಿ ಬೆಳೆದ ಸಣ್ಣ ಈರುಳ್ಳಿ ಹೆಚ್ಚು ತಮಿಳುನಾಡಿಗೆ ಹೋಗುತ್ತದೆ. ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಈ ಬಾರಿ ಚಳಿಗಾಲದ ಬೆಳೆ ವಿಳಂಬವಾಗಿದೆ. ತಮಿಳುನಾಡಿನಲ್ಲೂ ಸಣ್ಣ ಈರುಳ್ಳಿ ಬೆಳೆ ವಿಸ್ತಾರವಾಗಿದ್ದು, ಸ್ಥಳೀಯವಾಗಿ ಹೆಚ್ಚು ಲಭ್ಯವಾಗುತ್ತಿದೆ. ಇದರಿಂದ ಅಲ್ಲಿ ಸಾಂಬಾರ್ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಬೆಲೆ ಕಡಿಮೆಯಾಗಿದೆ‘ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಎಲ್.ಶಿವಪ್ರಸಾದ್ ‘ಪ್ರಜಾವಾಣಿ‘ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಜಿಲ್ಲೆಯಲ್ಲಿ ಸಾಂಬಾರ್ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.</p>.<p>ಕ್ವಿಂಟಲ್ ಸಾಂಬಾರ್ (ಸಣ್ಣ) ಈರುಳ್ಳಿ ₹800ರಿಂದ ₹1,100 ನಡುವೆ ಮಾರಾಟವಾಗುತ್ತಿದ್ದು, ಹಾಕಿದ ಖರ್ಚು ರೈತರಿಗೆ ಬರುತ್ತಿಲ್ಲ. ಇದರಿಂದಾಗಿ ಕೆಲ ಸಣ್ಣ ರೈತರು ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ.</p>.<p>ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಹನೂರು ಭಾಗಗಳಲ್ಲಿ ಸಣ್ಣ ಈರುಳ್ಳಿಯನ್ನು ಹೆಚ್ಚು ಬೆಳೆಯುತ್ತಾರೆ. ತಮಿಳುನಾಡಿನಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದ್ದು, ಅಲ್ಲಿಂದ ಶ್ರೀಲಂಕಾಕ್ಕೂ ರಫ್ತಾಗುತ್ತದೆ.</p>.<p>‘ಕೋವಿಡ್ ಸಮಯದಲ್ಲಿ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದ್ದರೂ, ಇಷ್ಟು ಬೆಲೆ ಕುಸಿತವಾಗಿರಲಿಲ್ಲ’ ಎಂದು ಹೇಳುತ್ತಾರೆ ರೈತರು.</p>.<p class="Subhead"><strong>ಚಳಿಗಾಲದ ಬೆಳೆ: </strong>ಚಳಿಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ 2,400 ಹೆಕ್ಟೇರ್ ಪ್ರದೇಶದಲ್ಲಿ ಸಾಂಬಾರ್ ಈರುಳ್ಳಿ ಬಿತ್ತನೆ ಮಾಡಲಾಗಿದೆ.</p>.<p>ಸಾಮಾನ್ಯವಾಗಿ ರೈತರು ನವೆಂಬರ್ ತಿಂಗಳಲ್ಲಿ ಬಿತ್ತನೆ ಮಾಡುತ್ತಾರೆ. ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಕಳೆದ ನವೆಂಬರ್ ತಿಂಗಳಲ್ಲಿ ಮಳೆಯಾಗಿದ್ದರಿಂದ ಬಿತ್ತನೆ ವಿಳಂಬವಾಗಿದೆ.</p>.<p>ಡಿಸೆಂಬರ್ನಲ್ಲಿ ಬಿತ್ತನೆ ನಡೆದು,ಬಹುತೇಕ ಕಡೆಗಳಲ್ಲಿ ಈಗ ಕಟಾವು ನಡೆಯುತ್ತಿದೆ. ಕೆ.ಜಿಗೆ ₹8ನಿಂದ ₹11ರವರೆಗೆ ಇದೆ.ರೈತರು ಬಿತ್ತನೆ ಈರುಳ್ಳಿಯನ್ನು ಕ್ವಿಂಟಲ್ಗೆ ₹2,000ದಿಂದ ₹5,000ದವರೆಗೂ ನೀಡಿ ಖರೀದಿಸಿದ್ದರು.</p>.<p>ಸಾಮಾನ್ಯವಾಗಿ ತಮಿಳುನಾಡಿನ ವ್ಯಾಪಾರಿಗಳು ಜಿಲ್ಲೆಗೆ ಬಂದು ರೈತರಿಂದ ನೇರವಾಗಿ ಖರೀದಿಸುತ್ತಾರೆ. ಈ ಬಾರಿ ಅವರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ವ್ಯಾಪಾರಿಗಳೇ ಈರುಳ್ಳಿ ಕಟಾವು ಮಾಡಿದರೆ ಕೆಜಿಗೆ ₹8ರಂತೆ ನೀಡುತ್ತಿದ್ದಾರೆ. ಕಟಾವು ಮಾಡಿದ ಈರುಳ್ಳಿಯನ್ನು ಕೆ.ಜಿಗೆ ₹11–₹12ರಂತೆ ಕೊಳ್ಳುತ್ತಿದ್ದಾರೆ.</p>.<p class="Subhead">ಬಾರದ ಅಸಲು: ‘ಸಣ್ಣ ಈರುಳ್ಳಿ ಬೆಳೆಯಲು ಎಕರೆಗೆ ₹35 ಸಾವಿರದಿಂದ ₹40 ಸಾವಿರ ಖರ್ಚು ಬರುತ್ತದೆ. ಎಕರೆಗೆ ಅತಿ ಹೆಚ್ಚು ಎಂದರೆ 40ರಿಂದ 50 ಕ್ವಿಂಟಲ್ವರೆಗೂ ಇಳುವರಿ ಬರುತ್ತದೆ. ಒಂದು ಎಕರೆಯಲ್ಲಿ ಈರುಳ್ಳಿ ಹಾಕಿದ್ದೆ. 23 ಕ್ವಿಂಟಲ್ ಬಂದಿದೆ. ಕ್ವಿಂಟಲ್ಗೆ ₹900ರಂತೆ ಮಾರಾಟ ಮಾಡಿದ್ದೇನೆ. ಮಾಡಿದ ಖರ್ಚಿನ ಅರ್ಧದಷ್ಟೂ ಬಂದಿಲ್ಲ’ ಎಂದು ಬೆಳೆಗಾರ ಜಯಪ್ಪ ಅವರು‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಈ ಬಾರಿ ಇಳುವರಿಯೂ ಕಡಿಮೆಯಾಗಿದೆ, ಬೆಲೆಯೂ ಸಿಕ್ಕಿಲ್ಲ. ಶ್ರಮವಹಿಸಿ ಬೆಳೆ ಬೆಳೆದಿರುವುದು ವ್ಯರ್ಥವಾಗಿದೆ’ ಎಂದರು.</p>.<p>‘ಖರ್ಚು ಕಳೆದು ಸ್ವಲ್ಪವಾದರೂ ಲಾಭ ಕಾಣುವಂತಾಗಬೇಕಾದರೆ ಕನಿಷ್ಠ ಕ್ವಿಂಟಲ್ಗೆ ₹2,500 ಸಾವಿರದಿಂದ ₹3,000 ಬೆಲೆ ಸಿಗಬೇಕು. ಇಲ್ಲದಿದ್ದರೆ ಪ್ರಯೋಜನವಿಲ್ಲ. ಬೆಲೆ ಕುಸಿತದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ, ಕನಿಷ್ಠಪಕ್ಷ ನಷ್ಟ ಆಗದಂತೆ ನೋಡಿಕೊಳ್ಳಬೇಕು‘ ಎಂಬುದು ಬೆಳೆಗಾರರ ಒತ್ತಾಯ.</p>.<p class="Briefhead"><strong>ತಮಿಳುನಾಡಿನಲ್ಲಿ ಬೇಡಿಕೆ ಕುಸಿತ</strong></p>.<p>‘ಜಿಲ್ಲೆಯಲ್ಲಿ ಬೆಳೆದ ಸಣ್ಣ ಈರುಳ್ಳಿ ಹೆಚ್ಚು ತಮಿಳುನಾಡಿಗೆ ಹೋಗುತ್ತದೆ. ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಈ ಬಾರಿ ಚಳಿಗಾಲದ ಬೆಳೆ ವಿಳಂಬವಾಗಿದೆ. ತಮಿಳುನಾಡಿನಲ್ಲೂ ಸಣ್ಣ ಈರುಳ್ಳಿ ಬೆಳೆ ವಿಸ್ತಾರವಾಗಿದ್ದು, ಸ್ಥಳೀಯವಾಗಿ ಹೆಚ್ಚು ಲಭ್ಯವಾಗುತ್ತಿದೆ. ಇದರಿಂದ ಅಲ್ಲಿ ಸಾಂಬಾರ್ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಬೆಲೆ ಕಡಿಮೆಯಾಗಿದೆ‘ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಎಲ್.ಶಿವಪ್ರಸಾದ್ ‘ಪ್ರಜಾವಾಣಿ‘ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>