<p><strong>ಸಂತೇಮರಹಳ್ಳಿ</strong>: ಮಹಾನಮಿ ಆಯುಧ ಪೂಜೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಸತತ ಸುರಿಯುತ್ತಿರುವ ಮಳೆಯಿಂದ ಸೇವಂತಿ ಗಿಡಗಳು ನೆಲ ಕಚ್ಚಿದ್ದು, ಹೂವುಗಳು ಹಾಳಾಗಿ ನಷ್ಟ ಅನುಭವಿಸುವಂತಾಗಿದೆ.</p>.<p>ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ವಾರದಿಂದ ಬೀಳುತ್ತಿರುವ ಮಳೆಯ ಹೊಡೆತಕ್ಕೆ ರೈತರು ಬೆಳೆದಿರುವ ಹತ್ತಾರು ಎಕರೆ ಸೇವಂತಿ ಹಾಗೂ ಚೆಂಡು ಹೂವು ಫಸಲು ಕೊಳೆಯಲು ಆರಂಭಿಸಿವೆ. ಹಬ್ಬಗಳ ಸಮಯದಲ್ಲಿ ಹೆಚ್ಚು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.</p>.<p>ಸಂತೇಮರಹಳ್ಳಿ, ಮಂಗಲ, ಯಡಿಯೂರು, ಹುಲ್ಲೇಪುರ, ಕೆಂಪನಪುರ ಹಾಗೂ ಸಿಂಗನಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹೂವು ಬೆಳೆ ಮಳೆಗೆ ನಾಶವಾಗಿವೆ. ನವರಾತ್ರಿಯಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ, ದರವು ಹೆಚ್ಚಾಗಿದೆ. ರೈತರ ಲಾಭದ ನಿರೀಕ್ಷೆ ಮಳೆಯಿಂದ ಹುಸಿಯಾಗಿದೆ.<br> ಕೆಜಿಗೆ ₹150 ದರವಿದ್ದ ಸೇವಂತಿ ಹಬ್ಬದ ಸಮಯವಾಗಿರುವುದರಿಂದ 1 ಕೆ.ಜಿ.ಗೆ ₹ 250 ರಿಂದ ₹ 280 ವರೆಗೆ ಮಾರಾಟವಾಗುತ್ತಿದೆ. ₹ 20 ರಿಂದ ₹30 ದರವಿದ್ದ ಚೆಂಡು ಹೂವು ₹ 60 ರಿಂದ ₹ 80 ವರೆಗೆ ಮಾರಾಟವಾಗುತ್ತಿದೆ. </p>.<p>ನರ್ಸರಿಯಲ್ಲಿ ಗಿಡಗಳನ್ನು ತಂದು ನಾಟಿ ಮಾಡಿದ್ದು, ಒಂದೂವರೆ ಎಕರೆಗೆ₹ 50 ಸಾವಿರಕ್ಕೂ ಹೆಚ್ಚು ಖರ್ಚಾಗಿದೆ. ಮಳೆ ಇಲ್ಲದಿದ್ದರೆ 5 ಟನ್ ವರೆಗೆ ಹೂವು ಸಿಗುತಿತ್ತು. ₹ 1.5 ಲಕ್ಷದವರೆಗೆ ಲಾಭ ದೊರಕುತಿತ್ತು. ಮಳೆಯಿಂದ ಹೂವಿನ ಗಿಡಗಳು ನೆಲಕ್ಕೆ ಬಿದ್ದು , ಕಟಾವು ಮಾಡಲು ಸಾಧ್ಯವಿಲ್ಲ, ಕೊಳೆಯುತ್ತಿವೆ ಎಂದು ಮಂಗಲ ಗ್ರಾಮದ ಅನಿಲ್ ತಿಳಿಸಿದರು.</p>.<p>ಮಳೆಗೆ ಹೂವುಗಳು ನಷ್ಟವಾಗುವುದರ ಜತೆಗೆ ಗಿಡಗಳು ಬಾಗಿ ನೆಲ ಕಚ್ಚಿವೆ. ಇದರಿಂದ ಮುಂದಿನ ಬೀಡು ಬರಲಾರದು ಎಂದು ರೈತ ಮಹದೇವಸ್ವಾಮಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಮರಹಳ್ಳಿ</strong>: ಮಹಾನಮಿ ಆಯುಧ ಪೂಜೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಸತತ ಸುರಿಯುತ್ತಿರುವ ಮಳೆಯಿಂದ ಸೇವಂತಿ ಗಿಡಗಳು ನೆಲ ಕಚ್ಚಿದ್ದು, ಹೂವುಗಳು ಹಾಳಾಗಿ ನಷ್ಟ ಅನುಭವಿಸುವಂತಾಗಿದೆ.</p>.<p>ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ವಾರದಿಂದ ಬೀಳುತ್ತಿರುವ ಮಳೆಯ ಹೊಡೆತಕ್ಕೆ ರೈತರು ಬೆಳೆದಿರುವ ಹತ್ತಾರು ಎಕರೆ ಸೇವಂತಿ ಹಾಗೂ ಚೆಂಡು ಹೂವು ಫಸಲು ಕೊಳೆಯಲು ಆರಂಭಿಸಿವೆ. ಹಬ್ಬಗಳ ಸಮಯದಲ್ಲಿ ಹೆಚ್ಚು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.</p>.<p>ಸಂತೇಮರಹಳ್ಳಿ, ಮಂಗಲ, ಯಡಿಯೂರು, ಹುಲ್ಲೇಪುರ, ಕೆಂಪನಪುರ ಹಾಗೂ ಸಿಂಗನಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹೂವು ಬೆಳೆ ಮಳೆಗೆ ನಾಶವಾಗಿವೆ. ನವರಾತ್ರಿಯಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ, ದರವು ಹೆಚ್ಚಾಗಿದೆ. ರೈತರ ಲಾಭದ ನಿರೀಕ್ಷೆ ಮಳೆಯಿಂದ ಹುಸಿಯಾಗಿದೆ.<br> ಕೆಜಿಗೆ ₹150 ದರವಿದ್ದ ಸೇವಂತಿ ಹಬ್ಬದ ಸಮಯವಾಗಿರುವುದರಿಂದ 1 ಕೆ.ಜಿ.ಗೆ ₹ 250 ರಿಂದ ₹ 280 ವರೆಗೆ ಮಾರಾಟವಾಗುತ್ತಿದೆ. ₹ 20 ರಿಂದ ₹30 ದರವಿದ್ದ ಚೆಂಡು ಹೂವು ₹ 60 ರಿಂದ ₹ 80 ವರೆಗೆ ಮಾರಾಟವಾಗುತ್ತಿದೆ. </p>.<p>ನರ್ಸರಿಯಲ್ಲಿ ಗಿಡಗಳನ್ನು ತಂದು ನಾಟಿ ಮಾಡಿದ್ದು, ಒಂದೂವರೆ ಎಕರೆಗೆ₹ 50 ಸಾವಿರಕ್ಕೂ ಹೆಚ್ಚು ಖರ್ಚಾಗಿದೆ. ಮಳೆ ಇಲ್ಲದಿದ್ದರೆ 5 ಟನ್ ವರೆಗೆ ಹೂವು ಸಿಗುತಿತ್ತು. ₹ 1.5 ಲಕ್ಷದವರೆಗೆ ಲಾಭ ದೊರಕುತಿತ್ತು. ಮಳೆಯಿಂದ ಹೂವಿನ ಗಿಡಗಳು ನೆಲಕ್ಕೆ ಬಿದ್ದು , ಕಟಾವು ಮಾಡಲು ಸಾಧ್ಯವಿಲ್ಲ, ಕೊಳೆಯುತ್ತಿವೆ ಎಂದು ಮಂಗಲ ಗ್ರಾಮದ ಅನಿಲ್ ತಿಳಿಸಿದರು.</p>.<p>ಮಳೆಗೆ ಹೂವುಗಳು ನಷ್ಟವಾಗುವುದರ ಜತೆಗೆ ಗಿಡಗಳು ಬಾಗಿ ನೆಲ ಕಚ್ಚಿವೆ. ಇದರಿಂದ ಮುಂದಿನ ಬೀಡು ಬರಲಾರದು ಎಂದು ರೈತ ಮಹದೇವಸ್ವಾಮಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>