ಹಿಂದಿನ ತಹಶೀಲ್ದಾರ್ ಸಹಿ ನಕಲು: ತಾಲ್ಲೂಕಿನಕಾಡಹಳ್ಳಿಯ ಮಹದೇವಸ್ವಾಮಿ ಎಂಬುವವರು ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿದ್ದರು. ಅದನ್ನು ಸಕ್ರಮಗೊಳಿಸಿ, ಹಕ್ಕು ಪತ್ರ ಪಡೆಯುವುದಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ದ್ವಿತೀಯ ದರ್ಜೆ ಸಹಾಯಕರಾಗಿದ್ದ ಅಬ್ದುಲ್ ಮುಜಾಹಿದ್ ಅವರು ಹಕ್ಕು ಪತ್ರಕ್ಕೆ ತಹಶೀಲ್ದಾರ್ ಸಹಿ ಹಾಕಿಸಿಕೊಡುವುದಾಗಿ ಅರ್ಜಿದಾರರಿಂದ ಹಣಪಡೆದಿದ್ದರು ಎನ್ನಲಾಗಿದೆ.