‘ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಞಣ ಸಮಿತಿ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಪೌರಕಾರ್ಮಿಕ ಭವನ ಮತ್ತು ಸಫಾಯಿ ಕರ್ಮಚಾರಿಗಳ ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಎರಡು ಎಕರೆ ಜಮೀನು, ಪೌರಕಾರ್ಮಿಕ ಬಡಾವಣೆಗೆ 2 ಎಕರೆ ಜಮೀನು, ಪೌರಕಾರ್ಮಿಕರ ಸ್ಮಶಾನಕ್ಕೆ 14 ಗುಂಟೆ ಜಮೀನು ಮಂಜೂರು ಮಾಡಿಸಲು ಶ್ರಮಿಸಿದ್ದಾರೆ. ಹನೂರಿನ ಪೌರಕಾರ್ಮಿಕ ಕಾಲೊನಿಗೆ ಕುಡಿಯುವ ನೀರಿನ ತೊಂಬೆ, ಯಳಂದೂರು, ತೆರಕಣಾಂಬಿ ಗ್ರಾಮಗಳಲ್ಲಿ ಪೌರಕಾರ್ಮಿಕರಿಗೆ ಮನೆ ಹಕ್ಕುಪತ್ರಗಳನ್ನು ಕೊಡಿಸಲು ಹೋರಾಟ ಮಾಡಿದ್ದಾರೆ’ ಎಂದರು.