ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಶಂಕರ ಅಂಕನಶೆಟ್ಟಿಪುರ ನಾಮಪತ್ರ 

ಬೆಂಬಲ ಘೋಷಿಸಿದ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ದ್ರಾವಿಡ ಲಯನ್ಸ್‌ ಸೇವಾ ಟ್ರಸ್ಟ್‌
Published 3 ಏಪ್ರಿಲ್ 2024, 3:12 IST
Last Updated 3 ಏಪ್ರಿಲ್ 2024, 3:12 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕವಿ, ಹೋರಾಟಗಾರ  ಸಿ.ಶಂಕರ ಅಂಕನಶೆಟ್ಟಿಪುರ ಅವರು ಮಂಗಳವಾರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ನಾಮಪತ್ರ ಸಲ್ಲಿಸಿದರು.

ನಗರದ ಚಾಮರಾಜೇಶ್ವರ ಸ್ವಾಮಿ ಉದ್ಯಾನದಿಂದ ಜಾನಪದ ಕಲಾತಂಡಗಳು, ಬೆಂಬಲಿಗರೊಂದಿಗೆ ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆ ನಡೆಸಿ, ಬಳಿಕ ನಾಮಪತ್ರ ಸಲ್ಲಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಗೀತಾ ಹುಡೇದ ಅವರು ಇದ್ದರು. 

ಶಂಕರಗೆ ಬೆಂಬಲ: ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ದ್ರಾವಿಡ ಲಯನ್ಸ್‌ ಸೇವಾ ಟ್ರಸ್ಟ್‌, ಶಂಕರ ಅಂಕನಶೆಟ್ಟಿ‌ಪುರ ಅವರಿಗೆ ಬೆಂಬಲ ಘೋಷಿಸಿದೆ. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಸ್ಟ್‌ ಅಧ್ಯಕ್ಷ ನಾರಾಯಣ್‌ ಜಿ., ‘ಕಡು ಬಡತನದಿಂದ ಬಂದಿರುವ ಶಂಕರ ಅವರು ಕವಿಯಾಗಿ, ಸಾಮಾಜಿಕ ಹೋರಾಟ ಗಾರರಾಗಿ ಗುರುತಿಸಿಕೊಂಡಿದ್ದಾರೆ. ಪೌರಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಎಲ್ಲರೂ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. 

‘ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಞಣ ಸಮಿತಿ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಪೌರಕಾರ್ಮಿಕ ಭವನ ಮತ್ತು  ಸಫಾಯಿ ಕರ್ಮಚಾರಿಗಳ ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಎರಡು ಎಕರೆ ಜಮೀನು, ಪೌರಕಾರ್ಮಿಕ ಬಡಾವಣೆಗೆ  2 ಎಕರೆ ಜಮೀನು, ಪೌರಕಾರ್ಮಿಕರ ಸ್ಮಶಾನಕ್ಕೆ 14 ಗುಂಟೆ ಜಮೀನು ಮಂಜೂರು ಮಾಡಿಸಲು ಶ್ರಮಿಸಿದ್ದಾರೆ. ಹನೂರಿನ ಪೌರಕಾರ್ಮಿಕ ಕಾಲೊನಿಗೆ ಕುಡಿಯುವ ನೀರಿನ ತೊಂಬೆ,  ಯಳಂದೂರು, ತೆರಕಣಾಂಬಿ ಗ್ರಾಮಗಳಲ್ಲಿ  ಪೌರಕಾರ್ಮಿಕರಿಗೆ ಮನೆ ಹಕ್ಕುಪತ್ರಗಳನ್ನು ಕೊಡಿಸಲು ಹೋರಾಟ ಮಾಡಿದ್ದಾರೆ’ ಎಂದರು. 

ಟ್ರಸ್ಟ್‌ನ ಸಹ ಕಾರ್ಯದರ್ಶಿ ವೀರೇಶ್‌ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪಿ.ಪ್ರಶಾಂತ್‌ ಕುಮಾರ್‌, ಖಜಾಂಚಿ ಸೋಮು, ಸದಸ್ಯರಾದ ವಿಜಯ, ಮುರುಗೇಶ್‌ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT