ಮೈದುಂಬಿ ಹರಿಯುವ ಜಲಪಾತ ನೋಡುವುದೇ ಸ್ವರ್ಗದಂತೆ. ಪ್ರತಿ ವರ್ಷ ಕುಟುಂಬ ಸಮೇತ ಭರಚುಕ್ಕಿ ಜಲಪಾತ ಸಹಿತ ಇತರೆ ತಾಣಗಳನ್ನು ವೀಕ್ಷಿಸಿ ಖುಷಿಯಿಂದ ಹೋಗುತ್ತೇವೆ.
– ಶಿವಶಂಕರ್, ಮಳವಳ್ಳಿ
ಎಚ್ಚರ ಇರಲಿ
ಭರಚುಕ್ಕಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿರುವುದು ಪ್ರಾಣಾಪಾಯಕ್ಕೆ ಕಾರಣವಾಗುತ್ತಿದೆ. ಕಾವೇರಿ ನದಿಪಾತ್ರದಲ್ಲಿ ಈಜುಲು ಇಳಿಯುವುದು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡುವುದು ಹೆಚ್ಚಾಗುತ್ತಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಜಲಪಾತ ಹಾಗೂ ಕಾವೇರಿ ನದಿಯೊಳಗೆ ಇಳಿದರೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್ಪಿ ಧರ್ಮೇಂದ್ರ ಎಚ್ಚರಿಕೆ ನೀಡಿದ್ದಾರೆ.