<p><strong>ಚಾಮರಾಜನಗರ: </strong>‘ಹಿಂಸೆ ನಮ್ಮ ದೇಶವನ್ನು, ನಮ್ಮ ಬದುಕನ್ನು ಅಸ್ತವ್ಯಸ್ತ ಮಾಡುತ್ತಿರುವ ಈ ಕಾಲದಲ್ಲಿ ಹಿಂಸೆಯನ್ನು ದೂರಮಾಡುವ ಬುದ್ಧನ ಪ್ರೀತಿ ಹಾಗೂ ಸಾತ್ವಿಕತೆ ಮನುಷ್ಯನಿಗೆ ಬೇಕಾಗಿದೆ’ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಅವರು ಸೋಮವಾರ ಅಭಿಪ್ರಾಯ ಪಟ್ಟರು.</p>.<p>ದೀನಬಂಧು ಟ್ರಸ್ಟ್, ಬುದ್ಧಪೂರ್ಣಿಮೆ ಅಂಗವಾಗಿ ದೀನಬಂಧು ಮಕ್ಕಳ ಮನೆಯಲ್ಲಿ ಹಮ್ಮಿಕೊಂಡಿದ್ದ ಬಾನ್ಸುರಿ ವಾದಕ ರವಿಶಂಕರ್ ಮಿಶ್ರಾ ಹಾಗೂ ತಬಲಾ ವಾದಕ ಡಾ. ಉದಯರಾಜ್ ಕರ್ಪೂರ್ ಅವರ ಸ್ವರಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗೌತಮ ಬುದ್ಧನ ವೈಚಾರಿಕ, ಬೌದ್ಧಿಕ ವಿಚಾರಗಳಿಗಿಂತ ಅವನ ಪ್ರೀತಿ ಹೆಚ್ಚು ವಿಶೇಷ. ಭಾರತದಲ್ಲಿ ಎಲ್ಲಿ ನೆಲ ಅಗೆದರೂ ಅಲ್ಲಿ ಬುದ್ಧನ ಪ್ರತಿಮೆ ಸಿಗುತ್ತದೆ. 2,500 ವರ್ಷಗಳಿಂದಲೂ ಇಡೀ ಜಗತ್ತನ್ನು ಬುದ್ಧ ಪ್ರಭಾವಿಸುತ್ತಾ ಇದ್ದಾನೆ’ ಎಂದರು.</p>.<p>‘ಬುದ್ಧ ಇಡೀ ಜಗತ್ತನ್ನು ಪ್ರೀತಿಸಿದ. ಅದಕ್ಕಾಗಿ ಅವನನ್ನು ಜಗತ್ತು ಪ್ರೀತಿಸುತ್ತದೆ. ಅವನು ಇಲ್ಲದೇ ಇದ್ದರೂ ಅವನ ಪ್ರೀತಿ ಚಂದ್ರನ ಬೆಳದಿಂಗಳ ಮೂಲಕ ಭೂಮಿಗೆ ಬರುತ್ತದೆ.ಬುದ್ಧ ಪೂರ್ಣಿಮೆಯ ಬೆಳದಿಂಗಳನ್ನು ನೋಡಿದ ಕೂಡಲೇ ಬುದ್ಧನ ಪ್ರೀತಿಯ ಅನುಭವವಾಗುತ್ತದೆ’ ಎಂದರು.</p>.<p>ರವಿಶಂಕರ್ ಮಿಶ್ರಾ ಹಾಗೂ ತಬಲಾ ವಾದಕ ಉದಯರಾಜ್ ಕರ್ಪೂರ್ ಅವರು ಎರಡು ಗಂಟೆಗೂ ಹೆಚ್ಚು ಕಾಲ ಸಂಗೀತ ರಸದೌತಣವನ್ನು ಬಡಿಸಿದರು. ದೀನಬಂಧು ಸಂಸ್ಥೆಯ ಯುಟ್ಯೂಬ್ ಚಾನೆಲ್ನಲ್ಲಿ ಕಾರ್ಯಕ್ರಮದ ಸ್ವರ ಸಂಗಮದ ನೇರಪ್ರಸಾರವನ್ನೂ ನೂರಾರು ಜನರು ವೀಕ್ಷಿಸಿದರು.</p>.<p>ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>‘ಹಿಂಸೆ ನಮ್ಮ ದೇಶವನ್ನು, ನಮ್ಮ ಬದುಕನ್ನು ಅಸ್ತವ್ಯಸ್ತ ಮಾಡುತ್ತಿರುವ ಈ ಕಾಲದಲ್ಲಿ ಹಿಂಸೆಯನ್ನು ದೂರಮಾಡುವ ಬುದ್ಧನ ಪ್ರೀತಿ ಹಾಗೂ ಸಾತ್ವಿಕತೆ ಮನುಷ್ಯನಿಗೆ ಬೇಕಾಗಿದೆ’ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಅವರು ಸೋಮವಾರ ಅಭಿಪ್ರಾಯ ಪಟ್ಟರು.</p>.<p>ದೀನಬಂಧು ಟ್ರಸ್ಟ್, ಬುದ್ಧಪೂರ್ಣಿಮೆ ಅಂಗವಾಗಿ ದೀನಬಂಧು ಮಕ್ಕಳ ಮನೆಯಲ್ಲಿ ಹಮ್ಮಿಕೊಂಡಿದ್ದ ಬಾನ್ಸುರಿ ವಾದಕ ರವಿಶಂಕರ್ ಮಿಶ್ರಾ ಹಾಗೂ ತಬಲಾ ವಾದಕ ಡಾ. ಉದಯರಾಜ್ ಕರ್ಪೂರ್ ಅವರ ಸ್ವರಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗೌತಮ ಬುದ್ಧನ ವೈಚಾರಿಕ, ಬೌದ್ಧಿಕ ವಿಚಾರಗಳಿಗಿಂತ ಅವನ ಪ್ರೀತಿ ಹೆಚ್ಚು ವಿಶೇಷ. ಭಾರತದಲ್ಲಿ ಎಲ್ಲಿ ನೆಲ ಅಗೆದರೂ ಅಲ್ಲಿ ಬುದ್ಧನ ಪ್ರತಿಮೆ ಸಿಗುತ್ತದೆ. 2,500 ವರ್ಷಗಳಿಂದಲೂ ಇಡೀ ಜಗತ್ತನ್ನು ಬುದ್ಧ ಪ್ರಭಾವಿಸುತ್ತಾ ಇದ್ದಾನೆ’ ಎಂದರು.</p>.<p>‘ಬುದ್ಧ ಇಡೀ ಜಗತ್ತನ್ನು ಪ್ರೀತಿಸಿದ. ಅದಕ್ಕಾಗಿ ಅವನನ್ನು ಜಗತ್ತು ಪ್ರೀತಿಸುತ್ತದೆ. ಅವನು ಇಲ್ಲದೇ ಇದ್ದರೂ ಅವನ ಪ್ರೀತಿ ಚಂದ್ರನ ಬೆಳದಿಂಗಳ ಮೂಲಕ ಭೂಮಿಗೆ ಬರುತ್ತದೆ.ಬುದ್ಧ ಪೂರ್ಣಿಮೆಯ ಬೆಳದಿಂಗಳನ್ನು ನೋಡಿದ ಕೂಡಲೇ ಬುದ್ಧನ ಪ್ರೀತಿಯ ಅನುಭವವಾಗುತ್ತದೆ’ ಎಂದರು.</p>.<p>ರವಿಶಂಕರ್ ಮಿಶ್ರಾ ಹಾಗೂ ತಬಲಾ ವಾದಕ ಉದಯರಾಜ್ ಕರ್ಪೂರ್ ಅವರು ಎರಡು ಗಂಟೆಗೂ ಹೆಚ್ಚು ಕಾಲ ಸಂಗೀತ ರಸದೌತಣವನ್ನು ಬಡಿಸಿದರು. ದೀನಬಂಧು ಸಂಸ್ಥೆಯ ಯುಟ್ಯೂಬ್ ಚಾನೆಲ್ನಲ್ಲಿ ಕಾರ್ಯಕ್ರಮದ ಸ್ವರ ಸಂಗಮದ ನೇರಪ್ರಸಾರವನ್ನೂ ನೂರಾರು ಜನರು ವೀಕ್ಷಿಸಿದರು.</p>.<p>ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>