<p>ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಲು ಜನ ಸಮುದಾಯದ ನಿರ್ಲಕ್ಷ ಕಾರಣ. ಸ್ವಯಂ ನಿರ್ಬಂಧ ಹೇರಿಕೊಂಡು ಮುಂಜಾಗ್ರತೆ ವಹಿಸಿದರೆ ಕೋವಿಡ್ ನಿಯಂತ್ರಿಸಬಹುದು. ನೆಗಡಿ, ಕೆಮ್ಮು ಬಂದಾಗ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡೆ.ಪಾಸಿಟಿವ್ ಇರುವುದು ಖಚಿತವಾಯಿತು. ವೈದ್ಯರು ಮಾತ್ರೆ ನೀಡಿ, ಸಲಹೆ ಸೂಚನೆ ನೀಡಿದರು.</p>.<p>ಶಿಕ್ಷಕಿಯಾದ ಕಾರಣ 14 ದಿನ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೆ. ನಾಲ್ಕೈದು ದಿನಗಳಲ್ಲಿ ಆರೋಗ್ಯ ಸಹಜ ಸ್ಥಿತಿಗೆ ಬಂತು. ಆಸ್ಪತ್ರೆಯವರು ಪ್ರತಿ ನಿತ್ಯ ಆತ್ಮವಿಶ್ವಾಸತುಂಬಿದರು. ಆಹಾರದಲ್ಲಿ ಹಣ್ಣು ಮತ್ತು ತರಕಾರಿಯನ್ನು ಹೆಚ್ಚು ಸೇವಿಸುವಂತೆ ಸೂಚನೆನೀಡಿದರು.</p>.<p>ಹುಳಿ ಹಣ್ಣುಗಳ ಷರಬತ್ತು ಮತ್ತು ಹೆಚ್ಚು ಉಷ್ಣಾಂಶ ಇರುವ ಪದಾರ್ಥಗಳನ್ನುಬಳಸುತ್ತಿದ್ದಂತೆ ಸೋಂಕು ಇಲ್ಲವಾಯಿತು. ಆದರೂ, ಯಾರ ಸಂಪರ್ಕಕ್ಕೂ ಸಿಗದೆ, ನಿಗದಿತಸಮಯದವರೆಗೆ ಅಂತರ ಕಾಯ್ದುಕೊಂಡು, ಮಾಸ್ಕ್ ಬಳಸುತ್ತ, ಸ್ಯಾನಿಟೈಸರ್ ಉಪಯೋಗ ಪಡೆದರೆ,ಕೊರೊನಾ ವೈರಾಣು ಇತರರಿಗೆ ವ್ಯಾಪಿಸುವುದನ್ನು ತಡೆಯಬಹುದು.</p>.<p>ಈಗ ರೋಗ ಲಕ್ಷಣ ಎಂತದೇ ಇರಲಿ, ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸುವುದು ಉತ್ತಮ.ಮಕ್ಕಳು, ವೃದ್ಧರು ಜನ ಸಂಪರ್ಕದಿಂದ ದೂರ ಇದ್ದು, ಸರಳ ವ್ಯಾಯಾಮ, ಯೋಗ ಮತ್ತುಚಟುವಟಿಕೆಯ ಕೆಲಸಗಳಲ್ಲಿ ತೊಡಗಿದರೆ ಕೊರೊನಾ ಬಾಧಿಸದು. ಮನೆಯಲ್ಲಿ ವೈದ್ಯರ ಸಲಹೆಇಲ್ಲದೆ ಪ್ರಯೋಗಕ್ಕೆ ಮುಂದಾಗಬೇಡಿ.</p>.<p><strong>– ಆಸಿಯಮ್ಮ, ಯಳಂದೂರು</strong></p>.<p><em>ನಿರೂಪಣೆ: ನಾ.ಮಂಜುನಾಥಸ್ವಾಮಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಲು ಜನ ಸಮುದಾಯದ ನಿರ್ಲಕ್ಷ ಕಾರಣ. ಸ್ವಯಂ ನಿರ್ಬಂಧ ಹೇರಿಕೊಂಡು ಮುಂಜಾಗ್ರತೆ ವಹಿಸಿದರೆ ಕೋವಿಡ್ ನಿಯಂತ್ರಿಸಬಹುದು. ನೆಗಡಿ, ಕೆಮ್ಮು ಬಂದಾಗ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡೆ.ಪಾಸಿಟಿವ್ ಇರುವುದು ಖಚಿತವಾಯಿತು. ವೈದ್ಯರು ಮಾತ್ರೆ ನೀಡಿ, ಸಲಹೆ ಸೂಚನೆ ನೀಡಿದರು.</p>.<p>ಶಿಕ್ಷಕಿಯಾದ ಕಾರಣ 14 ದಿನ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೆ. ನಾಲ್ಕೈದು ದಿನಗಳಲ್ಲಿ ಆರೋಗ್ಯ ಸಹಜ ಸ್ಥಿತಿಗೆ ಬಂತು. ಆಸ್ಪತ್ರೆಯವರು ಪ್ರತಿ ನಿತ್ಯ ಆತ್ಮವಿಶ್ವಾಸತುಂಬಿದರು. ಆಹಾರದಲ್ಲಿ ಹಣ್ಣು ಮತ್ತು ತರಕಾರಿಯನ್ನು ಹೆಚ್ಚು ಸೇವಿಸುವಂತೆ ಸೂಚನೆನೀಡಿದರು.</p>.<p>ಹುಳಿ ಹಣ್ಣುಗಳ ಷರಬತ್ತು ಮತ್ತು ಹೆಚ್ಚು ಉಷ್ಣಾಂಶ ಇರುವ ಪದಾರ್ಥಗಳನ್ನುಬಳಸುತ್ತಿದ್ದಂತೆ ಸೋಂಕು ಇಲ್ಲವಾಯಿತು. ಆದರೂ, ಯಾರ ಸಂಪರ್ಕಕ್ಕೂ ಸಿಗದೆ, ನಿಗದಿತಸಮಯದವರೆಗೆ ಅಂತರ ಕಾಯ್ದುಕೊಂಡು, ಮಾಸ್ಕ್ ಬಳಸುತ್ತ, ಸ್ಯಾನಿಟೈಸರ್ ಉಪಯೋಗ ಪಡೆದರೆ,ಕೊರೊನಾ ವೈರಾಣು ಇತರರಿಗೆ ವ್ಯಾಪಿಸುವುದನ್ನು ತಡೆಯಬಹುದು.</p>.<p>ಈಗ ರೋಗ ಲಕ್ಷಣ ಎಂತದೇ ಇರಲಿ, ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸುವುದು ಉತ್ತಮ.ಮಕ್ಕಳು, ವೃದ್ಧರು ಜನ ಸಂಪರ್ಕದಿಂದ ದೂರ ಇದ್ದು, ಸರಳ ವ್ಯಾಯಾಮ, ಯೋಗ ಮತ್ತುಚಟುವಟಿಕೆಯ ಕೆಲಸಗಳಲ್ಲಿ ತೊಡಗಿದರೆ ಕೊರೊನಾ ಬಾಧಿಸದು. ಮನೆಯಲ್ಲಿ ವೈದ್ಯರ ಸಲಹೆಇಲ್ಲದೆ ಪ್ರಯೋಗಕ್ಕೆ ಮುಂದಾಗಬೇಡಿ.</p>.<p><strong>– ಆಸಿಯಮ್ಮ, ಯಳಂದೂರು</strong></p>.<p><em>ನಿರೂಪಣೆ: ನಾ.ಮಂಜುನಾಥಸ್ವಾಮಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>