ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಂತರಾಜು, ‘ಶಾಲೆಗೆ ಬರುವ ಮಕ್ಕಳು ಸಮವಸ್ತ್ರ ಧರಿಸಿ, ಅತ್ಯಂತ ಶಿಸ್ತಿನಿಂದ ಬರಬೇಕು ಎಂಬುದು ಶಿಕ್ಷಣ ಇಲಾಖೆಯ ನಿಯಮ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಬ್ಬುಲಿ, ಸ್ಪೈಕ್, ಮಾಡೆಲ್ ಕ್ಷೌರ ಸೇರಿದಂತೆ ವಿಚಿತ್ರವಾದ ಕೇಶ ವಿನ್ಯಾಸ ಮಾಡಿಸಿಕೊಂಡು ಬರುತ್ತಿದ್ದಾರೆ. ಮಕ್ಕಳನ್ನು ಗುರುತು ಹಿಡಿಯುವುದೇ ಕಷ್ಟವಾಗಿದೆ’ ಎಂದರು.
‘ಇಂತಹ ಕೇಶ ವಿನ್ಯಾಸಗಳಿಂದ ಶಿಕ್ಷಕರಿಗೂ ಮುಜುಗರವಾಗುತ್ತಿದೆ. ಮಕ್ಕಳು ಓದಿನ ಕಡೆ ಆಸಕ್ತಿ ವಹಿಸದೆ ಕೇಶ ಸೌಂದರ್ಯಕ್ಕೆ ಹೆಚ್ಚಾಗಿ ಮೋರೆ ಹೋಗುತ್ತಿದ್ದಾರೆ. ಇದು ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಸವಿತಾ ಸಮಾಜದ ಅಧ್ಯಕ್ಷ ರಾಚಶೆಟ್ಟಿಯವರಿಗೆ ಪತ್ರ ಬರೆದಿದ್ದೇನೆ’ ಎಂದರು.