ಚಾಮರಾಜನಗರ: ತಾಲ್ಲೂಕಿನ ಗಡಿ ಭಾಗ ತಮಿಳುನಾಡಿನ ತಾಳವಾಡಿಯಲ್ಲಿ ರೈತರೊಬ್ಬರ ಜಮೀನಿಗೆ ರಾತ್ರಿ ನುಗ್ಗಿದ ಕಾಡಾನೆಯೊಂದು ಮಾವಿನ ಮರದಿಂದ ಹಣ್ಣುಗಳನ್ನು ಕಿತ್ತು ಸೇವಿಸಿದೆ.
ತಾಳವಾಡಿಯ ನಟರಾಜು ಎಂಬುವವರ ತೋಟಕ್ಕೆ ಎರಡು ದಿನಗಳ ಹಿಂದೆ ರಾತ್ರಿ ಕಾಡಾನೆ ಬಂದಿದೆ. ಮಾವಿನ ಮರದ ರೆಂಬೆಗೆ ಕಾಲಿಟ್ಟು ಸೊಂಡಿಲಿನಿಂದ ಮಾವಿನ ಹಣ್ಣಿನ ಗೊಂಚಲನ್ನು ಕಿತ್ತು ಕೆಳಗಡೆ ಹಾಕಿದೆ. ನಂತರ ಹಣ್ಣುಗಳನ್ನು ಸೇವಿಸಿದೆ.
ನಟರಾಜು ಮನೆಯವರೇ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.