ಗ್ರಾಮದ ಮಹದೇವಸ್ವಾಮಿ ಎಂಬ ರೈತ ತಮ್ಮ ಜಮೀನಿನಲ್ಲಿ ಕರುವನ್ನು ಮೇಯಿಸುತ್ತಿದ್ದ ವೇಳೆ ಕರು ಆಹಾರ ಎಂದು ಭಾವಿಸಿ ಸಿಡಿಮದ್ದು ಜಗಿದಿದೆ. ಈ ವೇಳೆ ಸ್ಫೋಟಗೊಂಡು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಸಿಡಿಮದ್ದು ಇರಿಸಿದ್ದ ಚಿಕ್ಕಎಲಚಟ್ಟಿ ಗ್ರಾಮದ ಜಬ್ಬರ್, ಪುಟ್ಟಯ್ಯ, ಅಣ್ಣೂರಿಕೇರಿ ಗ್ರಾಮದ ಗೋವಿಂದಶೆಟ್ಟಿ ಎಂಬ ಆರೋಪಿಗಳನ್ನು ರೈತರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.