ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಮೂರು ವರ್ಷದ ಗಂಡು ಹುಲಿಯು ಮೃತಪಟ್ಟಿದೆ.
‘ಹುಲಿಯು ಮುಳ್ಳು ಹಂದಿಯನ್ನು ತಿಂದಿದ್ದು, ದೇಹದಲ್ಲಿ ಮುಳ್ಳು ಚುಚ್ಚಿಕೊಂಡಿದೆ. ಜೊತೆಗೆ ದೇಹದಲ್ಲಿ ಇತರ ಗಾಯಗಳೂ ಕಂಡು ಬಂದಿದ್ದು, ಬೇರೆ ಹುಲಿಯೊಂದಿಗೆ ಕಾದಾಟವನ್ನು ಮಾಡಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು