ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಪಿ.ಬಂಗಾರು ಹಣ ಕಳೆದುಕೊಂಡವರು. ಪಟ್ಟಣದ ಗಾಂಧಿ ವೃತ್ತದ ಬಳಿ ಇರುವ ಎಸ್ಬಿಐ ಶಾಖೆಯ ಎಟಿಎಂನಲ್ಲಿ ₹1.39 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ಹೊರ ಬಂದಿದ್ದಾರೆ. ಈ ವೇಳೆ, ಅವರ ಹತ್ತಿರ ಬಂದ ವ್ಯಕ್ತಿಯೊಬ್ಬ, ‘ನಿಮ್ಮ ಬೆನ್ನಿಗೆ ಗಲೀಜು ಬಿದ್ದಿದೆ ಎಂದು ಗಮನವನ್ನು ಬೇರೆಡೆ ಸೆಳೆದಿದ್ದಾನೆ. ಬಂಗಾರು ಅವರು ಹಣದ ಬ್ಯಾಗನ್ನು ಬೈಕ್ನ ಟ್ಯಾಂಕ್ ಮೇಲಿಟ್ಟು ಹಿಂದಕ್ಕೆ ತಿರುಗಿದ್ದಾರೆ. ಈ ವೇಳೆ, ಮುಂದೆ ನಿಂತಿದ್ದ ವ್ಯಕ್ತಿ ಹಣದ ಬ್ಯಾಗ್ನೊಂದಿಗೆ ಪರಾರಿಯಾಗಿದ್ದಾನೆ.