ಜಿಲ್ಲೆಯಿಂದ ಪ್ರತಿ ದಿನ 4,000ದಿಂದ 5,000 ಮಂದಿ ಈ ರೈಲಿನಲ್ಲಿ ಮೈಸೂರಿಗೆ ಸಂಚರಿಸುತ್ತಿದ್ದರು. ಮೈಸೂರಿಗೆ ಗಾರೆ ಕೆಲಸ ಸೇರಿದಂತೆ ಇತರೆ ಉದ್ಯೋಗಗಳಿಗೆ ಹೋಗುವವರು ರೈಲನ್ನೇ ಅವಲಂಬಿಸಿದ್ದರು. ಆದರೆ, ಲಾಕ್ಡೌನ್ ನಂತರ ಸ್ಥಗಿತಗೊಂಡಿದ್ದ ರೈಲು ಸಂಚರಾ ಅನ್ಲಾಕ್ ಅವಧಿಯಲ್ಲೂ ಆರಂಭವಾಗದೇ ಇರುವುದರಿಂದ ಪ್ರತಿ ದಿನ ಪ್ರಯಾಣಿಸುತ್ತಿದ್ದವರು ತೊಂದರೆ ಅನುಭವಿಸುವಂತಾಗಿದೆ.