ಚಂದಕವಾಡಿಯ ಶಿವಬಸಪ್ಪ (80) ಅವರ ಮನೆಯ ಆವರಣದಲ್ಲಿ 20 ವರ್ಷದ ಗಂಧದ ಮರವಿತ್ತು. ಅ.4ರ ಮಧ್ಯರಾತ್ರಿ ಕಳ್ಳರು ಅದನ್ನು ಕಡಿಯಲು ಯತ್ನಿಸಿದ್ದರು. ಮನೆಯ ಹೊರಗಡೆ ಜಗಲಿಯಲ್ಲಿ ಮಲಗಿದ್ದ ಶಿವಬಸಪ್ಪ ಅವರು ತಡೆಯಲು ಪ್ರಯತ್ನಿಸಿದಾಗ ಆರೋಪಿಗಳು ಅವರ ಕೈಕಾಲು ಕಟ್ಟಿ, ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದರು. ಆ ಬಳಿಕ ಮರ ಕಡಿಯುವುದನ್ನು ಮುಂದುವರಿಸಿದ್ದರು. ಗರಗಸದ ಸದ್ದಿಗೆ ಮನೆಯವರಿಗೆ ಎಚ್ಚರವಾಗಿ ಹೊರಗಡೆ ಬಂದಾಗ ಆರೋಪಿಗಳು ಪರಾರಿಯಾಗಿದ್ದರು. ಶಿವಬಸಪ್ಪ ಅವರಿಗಾಗಿ ಹುಡುಕಾಟ ನಡೆಸಿದಾಗ ಸ್ವಲ್ಪ ದೂರದಲ್ಲಿ ಅವರ ಶವ ಪತ್ತೆಯಾಗಿತ್ತು.