<p><strong>ಗುಂಡ್ಲುಪೇಟೆ</strong>: ತಾಲ್ಲೂಕಿನ ಶಿವಪುರ ಗ್ರಾಮದ ಹೊರವಲಯದ ಬಯಲಿನಲ್ಲಿ ಸೋಮವಾರ ಮಧ್ಯಾಹ್ನ ಮೇಕೆಗಳ ಮೇಲೆ ದಾಳಿ ಮಾಡಿದ ಹುಲಿಯನ್ನು ಓಡಿಸಲು ಯತ್ನಿಸಿದ ಇಬ್ಬರು ಕುರಿಗಾಹಿಗಳ ಮೇಲೆ ವ್ಯಾಘ್ರ ಎರಗಿದೆ. ಇಬ್ಬರಿಗೂ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. </p><p>ಶಿವಪುರ ಗ್ರಾಮದ ಜವರಶೆಟ್ಟಿ ಮತ್ತು ಶಿವಶೆಟ್ಟಿ ದಾಳಿಯಲ್ಲಿ ಗಾಯಗೊಂಡವರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.</p><p>‘ಎಂದಿನಂತೆ ನಾಲ್ಕೈದು ಜನರ ತಂಡ ಗ್ರಾಮದ ತೆಂಕತಟ್ಟು ಎಂಬ ಭಾಗದಲ್ಲಿ ಕುರಿ -ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿಯೊಂದು ಮೇಕೆಗಳ ದಾಳಿ ಮಾಡಿ ಒಂದು ಮರಿಯನ್ನು ಹಿಡಿಯಿತು. ಶಿವಶೆಟ್ಟಿ ಮತ್ತು ಜವರಶೆಟ್ಟಿ ಅವರು ಹುಲಿಯಿಂದ ಮೇಕೆ ಮರಿಯನ್ನು ಬಿಡಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಹುಲಿ ಇವರ ಮೇಲೆ ದಾಳಿ ಮಾಡಿದೆ. ಎದೆ, ಕೈ ಮಂಡಿ, ತೊಡೆ ಹಾಗೂ ಬೆನ್ನಿನ ಭಾಗಗಳಲ್ಲಿ ಗಾಯಗಳಾಗಿವೆ. ತಕ್ಷಣವೇ ನೆರೆಹೊರೆಯ ಜನರು ಗದರಿಸಿದ್ದರಿಂದ ಹುಲಿ ಕಾಡಿನ ಕಡೆಗೆ ಹೋಗಿದೆ’ ಎಂದು ಕುರಿಗಳನ್ನು ಮೇಯಿಸುತ್ತಿದ್ದ ಪುಟ್ಟಸಿದ್ದಯ್ಯ ತಿಳಿಸಿದರು.</p><p>‘ಹುಲಿ, ಮೇಕೆ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಎಂದರೆ ಹುಲಿಗೆ ವಯಸ್ಸಾಗಿದ್ದು ಶಕ್ತಿ ಕಳೆದುಕೊಂಡು ಕಾಡಿನಿಂದ ಹೊರ ಬಂದಿರುವ ಸಾಧ್ಯತೆ ಇದೆ. ಈ ಹುಲಿಯಿಂದ ಮುಂದೆ ಹೆಚ್ಚಿನ ದಾಳಿಗಳಾಗಬಹುದು. ಆದ್ದರಿಂದ ಶೀಘ್ರವಾಗಿ ಹುಲಿಯನ್ನು ಸೆರೆ ಹಿಡಿಯಬೇಕು’ ಎಂದು ಮಂಗಲ ಗ್ರಾಮದ ಉಮೇಶ್ ತಿಳಿಸಿದರು.</p><p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯದ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಕುರಿಮರಿಗಳನ್ನು ಮೇಯಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ</strong>: ತಾಲ್ಲೂಕಿನ ಶಿವಪುರ ಗ್ರಾಮದ ಹೊರವಲಯದ ಬಯಲಿನಲ್ಲಿ ಸೋಮವಾರ ಮಧ್ಯಾಹ್ನ ಮೇಕೆಗಳ ಮೇಲೆ ದಾಳಿ ಮಾಡಿದ ಹುಲಿಯನ್ನು ಓಡಿಸಲು ಯತ್ನಿಸಿದ ಇಬ್ಬರು ಕುರಿಗಾಹಿಗಳ ಮೇಲೆ ವ್ಯಾಘ್ರ ಎರಗಿದೆ. ಇಬ್ಬರಿಗೂ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. </p><p>ಶಿವಪುರ ಗ್ರಾಮದ ಜವರಶೆಟ್ಟಿ ಮತ್ತು ಶಿವಶೆಟ್ಟಿ ದಾಳಿಯಲ್ಲಿ ಗಾಯಗೊಂಡವರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.</p><p>‘ಎಂದಿನಂತೆ ನಾಲ್ಕೈದು ಜನರ ತಂಡ ಗ್ರಾಮದ ತೆಂಕತಟ್ಟು ಎಂಬ ಭಾಗದಲ್ಲಿ ಕುರಿ -ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿಯೊಂದು ಮೇಕೆಗಳ ದಾಳಿ ಮಾಡಿ ಒಂದು ಮರಿಯನ್ನು ಹಿಡಿಯಿತು. ಶಿವಶೆಟ್ಟಿ ಮತ್ತು ಜವರಶೆಟ್ಟಿ ಅವರು ಹುಲಿಯಿಂದ ಮೇಕೆ ಮರಿಯನ್ನು ಬಿಡಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಹುಲಿ ಇವರ ಮೇಲೆ ದಾಳಿ ಮಾಡಿದೆ. ಎದೆ, ಕೈ ಮಂಡಿ, ತೊಡೆ ಹಾಗೂ ಬೆನ್ನಿನ ಭಾಗಗಳಲ್ಲಿ ಗಾಯಗಳಾಗಿವೆ. ತಕ್ಷಣವೇ ನೆರೆಹೊರೆಯ ಜನರು ಗದರಿಸಿದ್ದರಿಂದ ಹುಲಿ ಕಾಡಿನ ಕಡೆಗೆ ಹೋಗಿದೆ’ ಎಂದು ಕುರಿಗಳನ್ನು ಮೇಯಿಸುತ್ತಿದ್ದ ಪುಟ್ಟಸಿದ್ದಯ್ಯ ತಿಳಿಸಿದರು.</p><p>‘ಹುಲಿ, ಮೇಕೆ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಎಂದರೆ ಹುಲಿಗೆ ವಯಸ್ಸಾಗಿದ್ದು ಶಕ್ತಿ ಕಳೆದುಕೊಂಡು ಕಾಡಿನಿಂದ ಹೊರ ಬಂದಿರುವ ಸಾಧ್ಯತೆ ಇದೆ. ಈ ಹುಲಿಯಿಂದ ಮುಂದೆ ಹೆಚ್ಚಿನ ದಾಳಿಗಳಾಗಬಹುದು. ಆದ್ದರಿಂದ ಶೀಘ್ರವಾಗಿ ಹುಲಿಯನ್ನು ಸೆರೆ ಹಿಡಿಯಬೇಕು’ ಎಂದು ಮಂಗಲ ಗ್ರಾಮದ ಉಮೇಶ್ ತಿಳಿಸಿದರು.</p><p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯದ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಕುರಿಮರಿಗಳನ್ನು ಮೇಯಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>