ಈ ಕುರಿತು ‘ಪ್ರಜಾವಾಣಿ’ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಅಶೋಕ್ ಅವರನ್ನು ಸಂಪರ್ಕಿಸಿದಾಗ, ಅವರು, ‘ಕೋವಿಡ್ ಭಯದಿಂದ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ನೆರವಾಗಲಿಲ್ಲ. ಮೃತವ್ಯಕ್ತಿಯ ಜಮೀನಿಗೆ ಹೋಗಲು ಪಕ್ಕದ ಗ್ರಾಮದ ಮೂಲಕ ಹಾದು ಹೋಗಬೇಕಿತ್ತು. ಕೋವಿಡ್ ಬರಬಹುದು ಎಂಬ ಭಯದಿಂದ ಅವರೂ ಅವಕಾಶ ಕೊಡಲಿಲ್ಲ. ಕೊನೆಗೆ ಸರ್ಕಾರಿ ಜಾಗದಲ್ಲಿ ಸ್ವಯಂಸೇವಕರ ನೆರವಿನಿಂದ ಅಂತ್ಯಸಂಸ್ಕಾರ ನೆರವೇರಿಸಲಾಯಿತು’ ಎಂದು ಹೇಳಿದರು.