ಸಿಗದ ಚಿರತೆ: ಅರಣ್ಯ ಇಲಾಖೆಯು ಐದು ಕಡೆಗಳಲ್ಲಿ ಬೋನು ಇಟ್ಟಿದ್ದರೂ, ಚಿರತೆ ಅವುಗಳ ಒಳಗೆ ಬಿದ್ದಿಲ್ಲ. ಸೆ.25ರಂದು ಗೋವಿಂದಯ್ಯ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ಚಿರತೆ ಎರಡು ದಿನಗಳ ಬಳಿಕ ಕೆವಿಎನ್ ದೊಡ್ಡಿಯ ಮನೆಯೊಂದರ ಮುಂಭಾಗ ಇದ್ದ ನಾಯಿಯನ್ನು ಎಳೆದುಕೊಂಡು ಹೋಗಿತ್ತು. ಮಾರನೇ ದಿನ ಗ್ರಾಮದ ಗಂಗಮ್ಮ ಎಂಬುವವರ ಕಣ್ಣಿಗೆ ಬಿದ್ದಿತ್ತು. ಅವರು ಭಯದಿಂದ ಕಿರುಚಿಕೊಂಡಿದ್ದರು. ಆಯುಧ ಪೂಜೆಯ ದಿನವಾದ ಮಂಗಳವಾರ ಕೆಂಚಯ್ಯನದೊಡ್ಡಿ ಗ್ರಾಮದಲ್ಲಿ ಚಿರತೆಯು ಹಸುವಿನ ಮೇಲೆ ದಾಳಿ ನಡೆಸಿದೆ.