ಪಟ್ಟಣದಲ್ಲಿ ಎಲ್ಲೂ ಪಿಒಪಿ ಗಣಪತಿ ಮೂರ್ತಿಗಳ ಮಾರಾಟ ಕಂಡು ಬಂದಿಲ್ಲ. ಪಿಒಪಿ ಮೂರ್ತಿಗಳ ಪತ್ತೆಗೆ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ.
–ವಸಂತ ಕುಮಾರಿ, ಪುರಸಭೆ ಮುಖ್ಯಾಧಿಕಾರಿ
ಪಿಒಪಿ ಮೂರ್ತಿಗಳನ್ನು ಕೆರೆಗಳಿಗೆ ವಿಸರ್ಜನೆ ಮಾಡಿದರೆ ನೀರು ವಿಷವಾಗಿ ಮೀನು ಸೇರಿದಂತೆ ಜಲಜರಗಳಿಗೆ ಕಂಟಕವಾಗುತ್ತದೆ. ಜಾನುವಾರು ಸೇವಿಸಿದರೆ ಅನಾರೋಗ್ಯ ಕಾಡಲಿದೆ. ಅಧಿಕಾರಿಗಳು ಕ್ರಮ ಜರುಗಿಸಬೇಕು.
–ಶ್ರೀಕಂಠ, ಪರಿಸರ ಪ್ರೇಮಿ
ಪಿಒಪಿ ಗಣೇಶ ಮಾರಾಟ ಮಾಡುವುದು ಕಂಡುಬಂದರೆ ಪುರಸಭೆಯೊಂದಿಗೆ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳಲಾಗುವುದು.
–ರಮೇಶ್ ಬಾಬು, ತಹಶೀಲ್ದಾರ್
ಪಿಒಪಿ ಆಕರ್ಷಣೆ ಏಕೆ ?
ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಗೆ ಮಾನವ ಶ್ರಮ ಹೆಚ್ಚು. ಮೂರು ತಿಂಗಳಿಗೂ ಮುನ್ನವೇ ಮಣ್ಣು ತಂದು ಹದವಾಗಿ ಕೊಳೆಸಿ ಪ್ರಯಾಸದಿಂದ ಮೂರ್ತಿಗಳನ್ನು ತಯಾರಿಸಬೆಕು. ಮೂರ್ತಿ ತಯಾರಿಕೆಗೆ ತಗುಲುವ ವೆಚ್ಚ ಸಮಯ ಶ್ರಮ ಹೆಚ್ಚು. ಆದರೆ ಪಿಒಪಿ ಮೂರ್ತಿ ತಯಾರಿ ಬಹಳ ಸುಲಭ. ಗಂಟೆಗಳಲ್ಲಿ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇರಿಸಬಹುದು. ಮೂರ್ತಿಗಳು ಸುಂದರವಾಗಿ ಹಾಗೂ ಹಗುರವಾಗಿ ಮೂಡಿಬರುವ ಕಾರಣ ಪಿಒಪಿ ಮೂರ್ತಿಗಳತ್ತ ಜನರೂ ಆಕರ್ಷಿತರಾಗುತ್ತಾರೆ ಎಂದು ಮಣ್ಣಿನಲ್ಲಿ ಗಣಪತಿ ತಯಾರಿಸುವ ಶಿಲ್ಪಿ ತಿಳಿಸಿದರು.