ಹೊಂಗಹಳ್ಳಿ ಗ್ರಾಮದ ತಾಯಮ್ಮ ಸೇರಿ ಇತರೆ ರೈತರು ಬೆಳೆ ನಷ್ಟ ಅನುಭವಿಸಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅಥವಾ ಓಂಕಾರ ಅರಣ್ಯ ವಲಯದಿಂದ ಆಹಾರ ಅರಸಿ ಬಂದಿದ್ದ ಕಾಡಾನೆಗಳು ಸೋಲಾರ್ ವಿದ್ಯುತ್ ತಂತಿ ಬೇಲಿ ಮುರಿದು ಒಳನುಗ್ಗಿವೆ. ಈ ವೇಳೆ ಬೆಳವಣಿಗೆ ಹಂತದಲ್ಲಿದ್ದ ಬಾಳೆ ಬೆಳೆಯನ್ನು ತಿಂದು, ತುಳಿದು ನಾಶ ಮಾಡಿವೆ. ಕಾವಲಿಗಿದ್ದ ರೈತರು ಕೂಗಿಕೊಂಡರೂ ಲೆಕ್ಕಿಸದೇ ಪಕ್ಕದ ಜಮೀನುಗಳಲ್ಲಿ ತೆಂಗಿನ ಗಿಡಗಳನ್ನು ನಾಶ ಮಾಡಿವೆ.