<p><strong>ಚಾಮರಾಜನಗರ</strong>: ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗ ನಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಮಂಗಳವಾರ ಭೇಟಿ ನೀಡಿ ದೇವಾಲಯ ಜೀರ್ಣೋದ್ಧಾರ ಕಾಮಗಾರಿಯನ್ನು ಪರಿಶೀಲಿಸಿದರು.</p>.<p>ದೇವಾಲಯದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆದ ಸಚಿವರು, ಶೀಘ್ರವೇ ಬಾಕಿ ಇರುವ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p>.<p>‘ಪಾಕಶಾಲೆ ನಿರ್ಮಾಣ ಆಗಿದೆ. ದೇವಾಲಯ ವಿದ್ಯುತ್ ವ್ಯವಸ್ಥೆ ಕೆಲಸವು ಶೇ 90ರಷ್ಟು ಪೂರ್ಣಗೊಂಡಿದೆ. ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯವು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಾನೇ ಭೇಟಿ ನೀಡಿ ರಥದ ಕಾರ್ಯವನ್ನು ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.</p>.<p>‘ದೇವಾಲಯದ ಕಾಮಗಾರಿ ಪ್ರಗತಿಯನ್ನು ಉಪವಿಭಾಗಾಧಿಕಾರಿ ಪ್ರತಿ ವಾರ ಪರಿಶೀಲಿಸಬೇಕು. ದೇವಾಲಯದ ಅಭಿವೃದ್ಧಿ ಕುರಿತು ಸಮಗ್ರವಾಗಿ ಪರಾಮರ್ಶಿಸಬೇಕು. ಮಹಾಸಂಪ್ರೋಕ್ಷಣೆಗೆ ಮಾರ್ಚ್ ತಿಂಗಳಿನಲ್ಲಿ ದಿನಾಂಕ ನಿಗದಿ ಆಗಬೇಕಿರುವುದರಿಂದ ಈಗಾಗಲೇ ಆರಂಭವಾಗಿರುವ ಎಲ್ಲಾ ಕಾಮಗಾರಿಗಳು ಪೂರ್ಣ ಆಗುವಂತೆ ಗಮನ ಹರಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.</p>.<p>ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ, ‘ದೇವಾಲಯ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಸಿದ್ಧಮಾಡಬೇಕಿದೆ. ಇದರಿಂದ ಕ್ಷೇತ್ರದಲ್ಲಿ ಯಾವ ಯಾವ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂಬ ಬಗ್ಗೆ ಕ್ರಮ ತೆಗೆದುಕೊಳ್ಳಬಹುದಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದರು.</p>.<p>ಬಲಿಪೀಠ ಹೆಸರು ಬದಲಾಯಿಸಿ: ಸಭೆಯಲ್ಲಿ ‘ದೇವಾಲಯದ ಸಮೀಪ ಬಲಿಪೀಠ ನಿರ್ಮಿಸಬೇಕು’ ಎಂದು ಅರ್ಚಕರು ಹೇಳುತ್ತಿದ್ದಂತೆ ಪ್ರತಿಕ್ರಿಯಿಸಿದ ಶಾಸಕ ಎನ್ ಮಹೇಶ್, ‘ಕೂಡಲೇ ಆ ಹೆಸರನ್ನು ಬದಲಿಸಿ ಬೇರೆ ಹೆಸರಿನಿಂದ ಕರೆಯಿರಿ’ ಎಂದು ಸೂಚಿಸಿದರು.</p>.<p>‘ಬಲಿಪೀಠ ಎಂದು ಕರೆಯುವುದರಿಂದ ಜಿಲ್ಲೆಯ ಜನರಿಗೆ ಮತ್ತು ಭಕ್ತರಿಗೆ ತಪ್ಪುಕಲ್ಪನೆ ಮೂಡುತ್ತದೆ. ಆದ್ದರಿಂದ ಕೂಡಲೇ ಆರ್ಚಕರು ಅದನ್ನು ಬದಲಾಯಿಸಬೇಕು’ ಎಂದರು.</p>.<p>ಇದಕ್ಕೆ ಪತಿಕ್ರಿಯಿಸಿದ ಪ್ರಧಾನ ಆರ್ಚಕ ರವಿಕುಮಾರ್, ‘ಹಿಂದಿನಿಂದಲೂ ಅದೇ ಹೆಸರಿನಿಂದ ಕರೆಯುವುದರಿಂದ ಈಗ ಆ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.</p>.<p>ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಸುದರ್ಶನ್, ಮುಜರಾಯಿ ಇಲಾಖೆಯ ಮೋಹನ್, ಪ್ರಮುಖ ದಾನಿಗಳಾದ ರಮೇಶ್, ಲಕ್ಷ್ಮೀನಾರಾಯಣ ಕಡಂಬಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ವೇದ ವಿದ್ವಾಂಸ ಎಸ್. ಗೋವಿಂದಭಟ್, ಚಿಕ್ಕರಾಜು, ವೇದಮೂರ್ತಿ, ಆಗಮಿಕರಾದ ರಮೇಶ್ ಬಾಬು ಸಭೆಯಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗ ನಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಮಂಗಳವಾರ ಭೇಟಿ ನೀಡಿ ದೇವಾಲಯ ಜೀರ್ಣೋದ್ಧಾರ ಕಾಮಗಾರಿಯನ್ನು ಪರಿಶೀಲಿಸಿದರು.</p>.<p>ದೇವಾಲಯದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆದ ಸಚಿವರು, ಶೀಘ್ರವೇ ಬಾಕಿ ಇರುವ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p>.<p>‘ಪಾಕಶಾಲೆ ನಿರ್ಮಾಣ ಆಗಿದೆ. ದೇವಾಲಯ ವಿದ್ಯುತ್ ವ್ಯವಸ್ಥೆ ಕೆಲಸವು ಶೇ 90ರಷ್ಟು ಪೂರ್ಣಗೊಂಡಿದೆ. ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯವು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಾನೇ ಭೇಟಿ ನೀಡಿ ರಥದ ಕಾರ್ಯವನ್ನು ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.</p>.<p>‘ದೇವಾಲಯದ ಕಾಮಗಾರಿ ಪ್ರಗತಿಯನ್ನು ಉಪವಿಭಾಗಾಧಿಕಾರಿ ಪ್ರತಿ ವಾರ ಪರಿಶೀಲಿಸಬೇಕು. ದೇವಾಲಯದ ಅಭಿವೃದ್ಧಿ ಕುರಿತು ಸಮಗ್ರವಾಗಿ ಪರಾಮರ್ಶಿಸಬೇಕು. ಮಹಾಸಂಪ್ರೋಕ್ಷಣೆಗೆ ಮಾರ್ಚ್ ತಿಂಗಳಿನಲ್ಲಿ ದಿನಾಂಕ ನಿಗದಿ ಆಗಬೇಕಿರುವುದರಿಂದ ಈಗಾಗಲೇ ಆರಂಭವಾಗಿರುವ ಎಲ್ಲಾ ಕಾಮಗಾರಿಗಳು ಪೂರ್ಣ ಆಗುವಂತೆ ಗಮನ ಹರಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.</p>.<p>ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ, ‘ದೇವಾಲಯ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಸಿದ್ಧಮಾಡಬೇಕಿದೆ. ಇದರಿಂದ ಕ್ಷೇತ್ರದಲ್ಲಿ ಯಾವ ಯಾವ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂಬ ಬಗ್ಗೆ ಕ್ರಮ ತೆಗೆದುಕೊಳ್ಳಬಹುದಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದರು.</p>.<p>ಬಲಿಪೀಠ ಹೆಸರು ಬದಲಾಯಿಸಿ: ಸಭೆಯಲ್ಲಿ ‘ದೇವಾಲಯದ ಸಮೀಪ ಬಲಿಪೀಠ ನಿರ್ಮಿಸಬೇಕು’ ಎಂದು ಅರ್ಚಕರು ಹೇಳುತ್ತಿದ್ದಂತೆ ಪ್ರತಿಕ್ರಿಯಿಸಿದ ಶಾಸಕ ಎನ್ ಮಹೇಶ್, ‘ಕೂಡಲೇ ಆ ಹೆಸರನ್ನು ಬದಲಿಸಿ ಬೇರೆ ಹೆಸರಿನಿಂದ ಕರೆಯಿರಿ’ ಎಂದು ಸೂಚಿಸಿದರು.</p>.<p>‘ಬಲಿಪೀಠ ಎಂದು ಕರೆಯುವುದರಿಂದ ಜಿಲ್ಲೆಯ ಜನರಿಗೆ ಮತ್ತು ಭಕ್ತರಿಗೆ ತಪ್ಪುಕಲ್ಪನೆ ಮೂಡುತ್ತದೆ. ಆದ್ದರಿಂದ ಕೂಡಲೇ ಆರ್ಚಕರು ಅದನ್ನು ಬದಲಾಯಿಸಬೇಕು’ ಎಂದರು.</p>.<p>ಇದಕ್ಕೆ ಪತಿಕ್ರಿಯಿಸಿದ ಪ್ರಧಾನ ಆರ್ಚಕ ರವಿಕುಮಾರ್, ‘ಹಿಂದಿನಿಂದಲೂ ಅದೇ ಹೆಸರಿನಿಂದ ಕರೆಯುವುದರಿಂದ ಈಗ ಆ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.</p>.<p>ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಸುದರ್ಶನ್, ಮುಜರಾಯಿ ಇಲಾಖೆಯ ಮೋಹನ್, ಪ್ರಮುಖ ದಾನಿಗಳಾದ ರಮೇಶ್, ಲಕ್ಷ್ಮೀನಾರಾಯಣ ಕಡಂಬಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ವೇದ ವಿದ್ವಾಂಸ ಎಸ್. ಗೋವಿಂದಭಟ್, ಚಿಕ್ಕರಾಜು, ವೇದಮೂರ್ತಿ, ಆಗಮಿಕರಾದ ರಮೇಶ್ ಬಾಬು ಸಭೆಯಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>