<p><strong>ಚಾಮರಾಜನಗರ</strong>: ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆಯದೆ ಹಿಂದಿರುಗಿದ ಸ್ವಾರಸ್ಯಕರ ಪ್ರಸಂಗ ಹೇಳಿದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.<br /> <br /> ಒಮ್ಮೆ ಚಾಮರಾಜೇಶ್ವರ ದೇಗುಲಕ್ಕೆ ಕೆಂಗಲ್ ಹನುಮಂತಯ್ಯ ಭೇಟಿ ನೀಡಿದ್ದರು. ಅಂದು ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಯಿತು. ಮೊದಲು ಮುಖ್ಯಮಂತ್ರಿಗೆ ಮಂಗಳಾರತಿ ಸ್ವೀಕರಿಸಲು ಅರ್ಚಕರು ತಟ್ಟೆಹಿಡಿದು ಬರುತ್ತಾರೆಂದು ನಿರೀಕ್ಷಿಸಲಾಯಿತು. <br /> <br /> ಆದರೆ, ಅರ್ಚಕರು ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಸೇರಿದಂತೆ ದೇವಸ್ಥಾನದ ಉಸ್ತುವಾರಿ ಅಧಿಕಾರಿಗಳಿಗೆ ಮಂಗಳಾರತಿ ಸೇವೆ ನೀಡಿದರು.<br /> <br /> ಕೊನೆಗೆ, ಹನುಮಂತಯ್ಯ ಅವರ ಬಳಿಗೆ ಬಂದರು. ಇದು ಮುಖ್ಯಮಂತ್ರಿಗೆ ಕೋಪ ತರಿಸಿತು. ಅವರು ಮಂಗಳಾರತಿ ಸ್ವೀಕರಿಸದೆ ನೇರವಾಗಿ ಸ್ನೇಹಿತರೊಬ್ಬರ ಮನೆಗೆ ತೆರಳಿದರು. ಅರ್ಚಕರ ವರ್ತನೆಗೆ ಕಿಡಿಕಾರಿದರು. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಿದರು. ಈ ಸುದ್ದಿ ಅರ್ಚಕರ ಕಿವಿಗೂ ಮುಟ್ಟಿತು. <br /> <br /> ಆಗ ಮುಖ್ಯಮಂತ್ರಿ ಅವರು ವಾಸ್ತವ್ಯ ಹೂಡಿದ್ದ ಮನೆಗೆ ಹೋದ ಅರ್ಚಕರು ರಾಜ್ಯ ಸರ್ಕಾರ ರೂಪಿಸಿದ್ದ ಪೂಜಾ ಶಿಷ್ಟಾಚಾರದ ಪಟ್ಟಿ ತೋರಿಸಿದರು. ಅದರನ್ವಯವೇ ಅಧಿಕಾರಿಗಳಿಗೆ ಮೊದಲು ಮಂಗಳಾರತಿ ಸೇವೆ ಸ್ವೀಕರಿಸಲು ಅನುವು ಮಾಡಿಕೊಡಲಾಗಿದೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿಯ ಹೆಸರಿಲ್ಲ. ಹೀಗಾಗಿ, ಕೊನೆಯಲ್ಲಿ ಮಂಗಳಾರತಿ ಸೇವೆ ಸ್ವೀಕರಿಸಲು ನಿಮ್ಮ ಬಳಿಗೆ ಬರಲಾಯಿತು ಎಂದು ಅರ್ಚಕರು ಹೇಳಿದರು.<br /> <br /> ಅರ್ಚಕರ ಈ ಮಾತು ಕೇಳಿದ ಹನುಮಂತಯ್ಯ ಅವರಿಗೆ ನಗು ತಡೆಯಲಾಗಲಿಲ್ಲ. ಅರ್ಚಕರ ಕಾನೂನು ಪಾಲನೆಗೆ ಮೆಚ್ಚುಗೆ ಸೂಚಿಸಿದರು ಎಂದ ಮಲೆಯೂರು ಗುರುಸ್ವಾಮಿ, `ಈ ಮಣ್ಣಿನಲ್ಲಿ ಕಾನೂನನ್ನೂ ಗೌರವಿಸುವ ಗುಣವಿದೆ~ ಎಂಬ ಮಾತು ಹೇಳಲು ಮರೆಯಲಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಮಾಜಿ ಮುಖ್ಯಮಂತ್ರಿ ದಿ.ಕೆಂಗಲ್ ಹನುಮಂತಯ್ಯ ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆಯದೆ ಹಿಂದಿರುಗಿದ ಸ್ವಾರಸ್ಯಕರ ಪ್ರಸಂಗ ಹೇಳಿದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.<br /> <br /> ಒಮ್ಮೆ ಚಾಮರಾಜೇಶ್ವರ ದೇಗುಲಕ್ಕೆ ಕೆಂಗಲ್ ಹನುಮಂತಯ್ಯ ಭೇಟಿ ನೀಡಿದ್ದರು. ಅಂದು ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಯಿತು. ಮೊದಲು ಮುಖ್ಯಮಂತ್ರಿಗೆ ಮಂಗಳಾರತಿ ಸ್ವೀಕರಿಸಲು ಅರ್ಚಕರು ತಟ್ಟೆಹಿಡಿದು ಬರುತ್ತಾರೆಂದು ನಿರೀಕ್ಷಿಸಲಾಯಿತು. <br /> <br /> ಆದರೆ, ಅರ್ಚಕರು ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಸೇರಿದಂತೆ ದೇವಸ್ಥಾನದ ಉಸ್ತುವಾರಿ ಅಧಿಕಾರಿಗಳಿಗೆ ಮಂಗಳಾರತಿ ಸೇವೆ ನೀಡಿದರು.<br /> <br /> ಕೊನೆಗೆ, ಹನುಮಂತಯ್ಯ ಅವರ ಬಳಿಗೆ ಬಂದರು. ಇದು ಮುಖ್ಯಮಂತ್ರಿಗೆ ಕೋಪ ತರಿಸಿತು. ಅವರು ಮಂಗಳಾರತಿ ಸ್ವೀಕರಿಸದೆ ನೇರವಾಗಿ ಸ್ನೇಹಿತರೊಬ್ಬರ ಮನೆಗೆ ತೆರಳಿದರು. ಅರ್ಚಕರ ವರ್ತನೆಗೆ ಕಿಡಿಕಾರಿದರು. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಿದರು. ಈ ಸುದ್ದಿ ಅರ್ಚಕರ ಕಿವಿಗೂ ಮುಟ್ಟಿತು. <br /> <br /> ಆಗ ಮುಖ್ಯಮಂತ್ರಿ ಅವರು ವಾಸ್ತವ್ಯ ಹೂಡಿದ್ದ ಮನೆಗೆ ಹೋದ ಅರ್ಚಕರು ರಾಜ್ಯ ಸರ್ಕಾರ ರೂಪಿಸಿದ್ದ ಪೂಜಾ ಶಿಷ್ಟಾಚಾರದ ಪಟ್ಟಿ ತೋರಿಸಿದರು. ಅದರನ್ವಯವೇ ಅಧಿಕಾರಿಗಳಿಗೆ ಮೊದಲು ಮಂಗಳಾರತಿ ಸೇವೆ ಸ್ವೀಕರಿಸಲು ಅನುವು ಮಾಡಿಕೊಡಲಾಗಿದೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿಯ ಹೆಸರಿಲ್ಲ. ಹೀಗಾಗಿ, ಕೊನೆಯಲ್ಲಿ ಮಂಗಳಾರತಿ ಸೇವೆ ಸ್ವೀಕರಿಸಲು ನಿಮ್ಮ ಬಳಿಗೆ ಬರಲಾಯಿತು ಎಂದು ಅರ್ಚಕರು ಹೇಳಿದರು.<br /> <br /> ಅರ್ಚಕರ ಈ ಮಾತು ಕೇಳಿದ ಹನುಮಂತಯ್ಯ ಅವರಿಗೆ ನಗು ತಡೆಯಲಾಗಲಿಲ್ಲ. ಅರ್ಚಕರ ಕಾನೂನು ಪಾಲನೆಗೆ ಮೆಚ್ಚುಗೆ ಸೂಚಿಸಿದರು ಎಂದ ಮಲೆಯೂರು ಗುರುಸ್ವಾಮಿ, `ಈ ಮಣ್ಣಿನಲ್ಲಿ ಕಾನೂನನ್ನೂ ಗೌರವಿಸುವ ಗುಣವಿದೆ~ ಎಂಬ ಮಾತು ಹೇಳಲು ಮರೆಯಲಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>