<p>ಚಾಮರಾಜನಗರ: `ರೋಟರಿಯಲ್ಲಿ ಸದಸ್ಯರಾಗುವ ಮೂಲಕ ಸಮಾಜಕ್ಕೆ ಉಪಯುಕ್ತ ಸೇವೆ ಸಲ್ಲಿಸಬಹುದು~ ಎಂದು ರೋಟರಿಯ ನಿಯೋಜಿತ ಜಿಲ್ಲಾ ಗೌರ್ನರ್ ಎಸ್. ಗುರುರಾಜ್ ಹೇಳಿದರು.<br /> <br /> ನಗರದ ರಕ್ಷಿತಾ ಮಹಲ್ನಲ್ಲಿ ಬುಧವಾರ ನಡೆದ ರೋಟರಿಯ ನೂತನ ಅಧ್ಯಕ್ಷ ಎಂ. ಮಹೇಶ್ ಮತ್ತು ಕಾರ್ಯದರ್ಶಿ ಯೋಗರಾಜ್ ತಂಡದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ರೋಟರಿ ಸಂಸ್ಥೆಯಲ್ಲಿ ಪ್ರತಿಯೊಬ್ಬ ಸದಸ್ಯ ಕೂಡ ನಾಯಕನಾಗಿರುತ್ತಾನೆ. ಹೀಗಾಗಿ, ಅಧ್ಯಕ್ಷರಾದವರು ಎಲ್ಲರಿಗೂ ನಾಯಕರಾಗಿ ಕೆಲಸ ಮಾಡುವುದು ಕಷ್ಟಕರ. ರೋಟರಿ ಸಂಸ್ಥೆಯಂತಹ ಪ್ರತಿಯೊಂದು ಕ್ಲಬ್ನಲ್ಲಿಯೂ ಕಾಣದ ಕೈಗಳು ಸಹಾಯ ನೀಡುತ್ತವೆ. ಅಂತಹವರ ಸಹಕಾರ ನೂತನ ಸದಸ್ಯರಿಗೆ ಅತ್ಯಗತ್ಯವಾಗಿದೆ ಎಂದರು.<br /> <br /> ಸಮಾಜ ಸೇವೆಯಂತಹ ಉತ್ತಮ ಕೆಲಸ ಮಾಡಿದಾಗ ಹಣದ ಕೊರತೆ ಬರುವುದಿಲ್ಲ. ರೋಟರಿ ಸಂಸ್ಥೆಯಲ್ಲಿ ಉತ್ತಮ ಸಾಮಾಜಿಕ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶವಿರುತ್ತದೆ. ಸದಸ್ಯರು ಅಂತಹ ಕನಸುಗಳನ್ನು ನನಸು ಮಾಡಲು ಮುಂದಾಗಬೇಕು ಎಂದು ಹೇಳಿದರು.<br /> <br /> ರೋಟರಿ ಸಹಾಯಕ ಗೌರ್ನರ್ ವಿ. ಪ್ರಭಾಕರ್ ಮಾತನಾಡಿ, ರೋಟರಿ ಸಂಸ್ಥೆಯಿಂದ ವಿಮಾ ಯೋಜನೆ, ಸೌರ ವಿದ್ಯುತ್ದೀಪ ಅಳವಡಿಕೆ, ಸೀಳುತುಟಿ ಮತ್ತು ನೇತ್ರ ತಪಾಸಣಾ ಚಿಕಿತ್ಸೆ, ಪಲ್ಸ್ ಪೋಲಿಯೊ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.<br /> <br /> ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಹಿಂದಿ ಬಿ.ಇಡಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮೇಘಶ್ರೀ ಅವರಿಗೆ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಯಿತು.<br /> <br /> ಕಾರ್ಯಕ್ರಮದಲ್ಲಿ ರೋಟರಿಯ ನಿಕಟಪೂರ್ವ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸಿ.ಎಸ್. ರೇಣುಕಾ ಪ್ರಸಾದ್, ವಲಯ ಪ್ರತಿನಿಧಿ ಎ. ಪ್ರಶಾಂತ್, ಮಾಜಿ ಸಹಾಯಕ ಗೌರ್ನರ್ ಸಿ.ವಿ. ಶ್ರೀನಿವಾಸಶೆಟ್ಟಿ, ಬಿ.ಕೆ. ಮೋಹನ್, ಶಾಂತಮಲ್ಲಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: `ರೋಟರಿಯಲ್ಲಿ ಸದಸ್ಯರಾಗುವ ಮೂಲಕ ಸಮಾಜಕ್ಕೆ ಉಪಯುಕ್ತ ಸೇವೆ ಸಲ್ಲಿಸಬಹುದು~ ಎಂದು ರೋಟರಿಯ ನಿಯೋಜಿತ ಜಿಲ್ಲಾ ಗೌರ್ನರ್ ಎಸ್. ಗುರುರಾಜ್ ಹೇಳಿದರು.<br /> <br /> ನಗರದ ರಕ್ಷಿತಾ ಮಹಲ್ನಲ್ಲಿ ಬುಧವಾರ ನಡೆದ ರೋಟರಿಯ ನೂತನ ಅಧ್ಯಕ್ಷ ಎಂ. ಮಹೇಶ್ ಮತ್ತು ಕಾರ್ಯದರ್ಶಿ ಯೋಗರಾಜ್ ತಂಡದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ರೋಟರಿ ಸಂಸ್ಥೆಯಲ್ಲಿ ಪ್ರತಿಯೊಬ್ಬ ಸದಸ್ಯ ಕೂಡ ನಾಯಕನಾಗಿರುತ್ತಾನೆ. ಹೀಗಾಗಿ, ಅಧ್ಯಕ್ಷರಾದವರು ಎಲ್ಲರಿಗೂ ನಾಯಕರಾಗಿ ಕೆಲಸ ಮಾಡುವುದು ಕಷ್ಟಕರ. ರೋಟರಿ ಸಂಸ್ಥೆಯಂತಹ ಪ್ರತಿಯೊಂದು ಕ್ಲಬ್ನಲ್ಲಿಯೂ ಕಾಣದ ಕೈಗಳು ಸಹಾಯ ನೀಡುತ್ತವೆ. ಅಂತಹವರ ಸಹಕಾರ ನೂತನ ಸದಸ್ಯರಿಗೆ ಅತ್ಯಗತ್ಯವಾಗಿದೆ ಎಂದರು.<br /> <br /> ಸಮಾಜ ಸೇವೆಯಂತಹ ಉತ್ತಮ ಕೆಲಸ ಮಾಡಿದಾಗ ಹಣದ ಕೊರತೆ ಬರುವುದಿಲ್ಲ. ರೋಟರಿ ಸಂಸ್ಥೆಯಲ್ಲಿ ಉತ್ತಮ ಸಾಮಾಜಿಕ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶವಿರುತ್ತದೆ. ಸದಸ್ಯರು ಅಂತಹ ಕನಸುಗಳನ್ನು ನನಸು ಮಾಡಲು ಮುಂದಾಗಬೇಕು ಎಂದು ಹೇಳಿದರು.<br /> <br /> ರೋಟರಿ ಸಹಾಯಕ ಗೌರ್ನರ್ ವಿ. ಪ್ರಭಾಕರ್ ಮಾತನಾಡಿ, ರೋಟರಿ ಸಂಸ್ಥೆಯಿಂದ ವಿಮಾ ಯೋಜನೆ, ಸೌರ ವಿದ್ಯುತ್ದೀಪ ಅಳವಡಿಕೆ, ಸೀಳುತುಟಿ ಮತ್ತು ನೇತ್ರ ತಪಾಸಣಾ ಚಿಕಿತ್ಸೆ, ಪಲ್ಸ್ ಪೋಲಿಯೊ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.<br /> <br /> ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಹಿಂದಿ ಬಿ.ಇಡಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮೇಘಶ್ರೀ ಅವರಿಗೆ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಯಿತು.<br /> <br /> ಕಾರ್ಯಕ್ರಮದಲ್ಲಿ ರೋಟರಿಯ ನಿಕಟಪೂರ್ವ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸಿ.ಎಸ್. ರೇಣುಕಾ ಪ್ರಸಾದ್, ವಲಯ ಪ್ರತಿನಿಧಿ ಎ. ಪ್ರಶಾಂತ್, ಮಾಜಿ ಸಹಾಯಕ ಗೌರ್ನರ್ ಸಿ.ವಿ. ಶ್ರೀನಿವಾಸಶೆಟ್ಟಿ, ಬಿ.ಕೆ. ಮೋಹನ್, ಶಾಂತಮಲ್ಲಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>