ಮೃತಪಟ್ಟ ಕುರಿಗಳು ಸ್ಥಳೀಯ ಅಶ್ವತ್ಥಪ್ಪ ಮತ್ತು ಯಂಕಪ್ಪ ಎಂಬುವರಿಗೆ ಸೇರಿದ್ದು, ಸುಮಾರು ₹4 ಲಕ್ಷ ನಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎಂದಿನಂತೆ ಈ ಇಬ್ಬರು ಬುಧವಾರ ಗ್ರಾಮದ ಹೊರವಲಯದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಕುರಿಗಳು ನೀರು ಕುಡಿಯಲು ರಸ್ತೆಯ ಮತ್ತೊಂದು ಬದಿಗೆ ದಾಟುತ್ತಿದ್ದಾಗ ಟಿಪ್ಪರ್ ಲಾರಿ ಕುರಿಗಳ ಮೇಲೆ ಹರಿದಿದೆ. ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ.