ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಗುರು ಮಹತ್ವದ ಪಾತ್ರವಹಿಸುತ್ತಾರೆ. ಶಿಷ್ಯನು ಅನುಭವಿಯಾದ ಗುರುವಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು. ಗುರು ನೀಡಿದ ಉಪದೇಶವನ್ನು ಹೃದಯದಲ್ಲಿ ನಂಬಿ ಸ್ವೀಕರಿಸಬೇಕು. ಸ್ಪರ್ಶಮಣಿಗೆ ತಾಕಿದ ಕಬ್ಬಿಣವು ಬಂಗಾರವಾಗುವಂತೆ, ಗುರುವಿನ ಉಪದೇಶದಿಂದ ಶಿಷ್ಯನ ಅಜ್ಞಾನವು ದೂರವಾಗುತ್ತದೆ. ನಮಗೆ ಜ್ಞಾನ ಬರಬೇಕಾದರೆ ಗುರುವಿನ ಚಿಂತನೆ ಸದಾಕಾಲ ಮಾಡಬೇಕು ಎಂದರು.