ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎಪಿಎಂಸಿಯಲ್ಲಿ ತರಕಾರಿ ವಹಿವಾಟು ಕುಸಿಯುತ್ತಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು. ಬೆಳಿಗ್ಗೆ ರೈತರು ತರಕಾರಿ ಕಟಾವು ಮಾಡಿಕೊಂಡು ತಂದರೆ ಅವು ತಾಜಾ ಇರುತ್ತವೆ. ಇದರಿಂದ ಸಹಜವಾಗಿ ಬೆಲೆಯೂ ಹೆಚ್ಚುತ್ತದೆ. ಈ ಹಿಂದೆ ತಾಜಾ ತರಕಾರಿ ಎನ್ನುವ ಕಾರಣದಿಂದಲೇ ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಹೊರ ರಾಜ್ಯದವರು ಮತ್ತು ವ್ಯಾಪಾರಿಗಳು ಖರೀದಿಗೆ ಬರುತ್ತಿದ್ದರು. ಇಲ್ಲಿಂದ ಖರೀದಿಸಿ ಬೇರೆ ಕಡೆ ಕೊಂಡೊಯ್ಯುತ್ತಿದ್ದರು. ಆದರೆ ಈಗ ವಹಿವಾಟು ಬೇಗ ಆರಂಭವಾಗುವ ಕಾರಣ ತಾಜಾ ತರಕಾರಿ ದೊರೆಯುವುದಿಲ್ಲ ಎಂದು ಖರೀದಿಗೆ ಬರುವವರು ಕಡಿಮೆ ಆಗಿದ್ದಾರೆ. ತರಕಾರಿ ವಹಿವಾಟು ಎಪಿಎಂಸಿಯಲ್ಲಿ ಕುಸಿಯುತ್ತಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು.