<p><strong>ಬಾಗೇಪಲ್ಲಿ: </strong>ಕೃಷಿ ಕೂಲಿಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಸರ್ಕಾರದ ನಡೆ ತೀವ್ರವಾದ ಆತಂಕ ಸಂಘರ್ಷಗಳ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ಕರೆ ನೀಡಿದರು.</p>.<p>‘ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪ್ರಜಾ ಸಂಘರ್ಷ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರೈತ ಹೋರಾಟಗಾರ ಜಿ.ವಿ.ಅಶ್ವತ್ಥನಾರಾಯಣರೆಡ್ಡಿರವರ 10ನೇ ವರ್ಧಂತಿ ಆಚರಣೆಯಲ್ಲಿ ಮಾತನಾಡಿದರು.</p>.<p>‘ಅವಿಭಜಿತ ಜಿಲ್ಲೆಗಳಲ್ಲಿ 1972ರಲ್ಲಿ ಬಂಜರು ಭೂಮಿಗಳನ್ನು ರೈತರಿಗೆ ವಿತರಿಸಬೇಕು ಎಂದು ಸಾವಿರಾರು ರೈತರು ಹೋರಾಟ ನಡೆಸಿದ್ದರು. 3,600 ಮಂದಿ ಜೈಲಿಗೆ ಅಶ್ವತ್ಥನಾರಾಯಣರೆಡ್ಡಿ ಒಬ್ಬರಾಗಿದ್ದಾರೆ. ವಿದ್ಯಾರ್ಥಿ, ಯುವಜನ, ಕೃಷಿ ಕೂಲಿ ಕಾರ್ಮಿಕರ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು’ ಎಂದರು.</p>.<p>‘ದೇಶದಲ್ಲಿ ಕೃಷಿಕರ ಮೇಲೆ ಹಾಗೂ ಕೋಮುವಾದಿಗಳಿಂದ ನಿರಂತರವಾಗಿ ದಾಳಿ ನಡೆಯುತ್ತಿದೆ. ಕೇಸರಿಕರಣ ಮಾಡುವ ಹುನ್ನಾರ ನಡೆಯುತ್ತಿದೆ. ದೇಶದಲ್ಲಿ 35 ಕೋಟಿ ಮಂದಿ ನಿರುದ್ಯೋಗಿಗಳು ಇದ್ದಾರೆ. ಕೊರೊನಾ ಹೆಸರಿನಲ್ಲಿಸರ್ಕಾರಗಳು ಕೋಟ್ಯಂತರ ಹಣ ಲೂಟಿ ಹೊಡೆಯುತ್ತಿದೆ’ ಎಂದರು.</p>.<p>ವಕೀಲ ಬಿ.ನಾರಾಯಣರೆಡ್ಡಿ ಮಾತನಾಡಿ, ‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಾಮಾಜಿಕ, ರಾಜಕೀಯದ ಹೋರಾಟದಹಿನ್ನೆಲೆಗಳು ಇದೆ. ರೈತ ನಾಯಕ ಅಶ್ವತ್ಥನಾರಾಯಣರೆಡ್ಡಿರವರು ವಿದ್ಯಾರ್ಥಿ, ರೈತ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ಹೋರಾಟಗಾರರಿಗೆ ಶಕ್ತಿ ತುಂಬಿದ್ದಾರೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚನ್ನರಾಯಪ್ಪ, ಮುಖಂಡರಾದ ಆರ್.ಎನ್.ರಾಜು, ಜಿ.ಎಂ.ರಾಮಕೃಷ್ಣಪ್ಪ, ರಾಮಾಂಜಿ, ವೆಂಕಟೇಶ್, ಆರ್.ಚಂದ್ರಶೇಖರರೆಡ್ಡಿ, ಭಾಷಾಸಾಬ್, ಎಸ್.ಎನ್.ಚಂದ್ರಶೇಖರರೆಡ್ಡಿ, ಎಲ್.ವೆಂಕಟೇಶ್, ಜುಬೇರ್ ಅಹಮದ್, ನರಸಿಂಹಪ್ಪ, ಅಶ್ವತ್ಥರೆಡ್ಡಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗೇಪಲ್ಲಿ: </strong>ಕೃಷಿ ಕೂಲಿಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಸರ್ಕಾರದ ನಡೆ ತೀವ್ರವಾದ ಆತಂಕ ಸಂಘರ್ಷಗಳ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ಕರೆ ನೀಡಿದರು.</p>.<p>‘ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪ್ರಜಾ ಸಂಘರ್ಷ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರೈತ ಹೋರಾಟಗಾರ ಜಿ.ವಿ.ಅಶ್ವತ್ಥನಾರಾಯಣರೆಡ್ಡಿರವರ 10ನೇ ವರ್ಧಂತಿ ಆಚರಣೆಯಲ್ಲಿ ಮಾತನಾಡಿದರು.</p>.<p>‘ಅವಿಭಜಿತ ಜಿಲ್ಲೆಗಳಲ್ಲಿ 1972ರಲ್ಲಿ ಬಂಜರು ಭೂಮಿಗಳನ್ನು ರೈತರಿಗೆ ವಿತರಿಸಬೇಕು ಎಂದು ಸಾವಿರಾರು ರೈತರು ಹೋರಾಟ ನಡೆಸಿದ್ದರು. 3,600 ಮಂದಿ ಜೈಲಿಗೆ ಅಶ್ವತ್ಥನಾರಾಯಣರೆಡ್ಡಿ ಒಬ್ಬರಾಗಿದ್ದಾರೆ. ವಿದ್ಯಾರ್ಥಿ, ಯುವಜನ, ಕೃಷಿ ಕೂಲಿ ಕಾರ್ಮಿಕರ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು’ ಎಂದರು.</p>.<p>‘ದೇಶದಲ್ಲಿ ಕೃಷಿಕರ ಮೇಲೆ ಹಾಗೂ ಕೋಮುವಾದಿಗಳಿಂದ ನಿರಂತರವಾಗಿ ದಾಳಿ ನಡೆಯುತ್ತಿದೆ. ಕೇಸರಿಕರಣ ಮಾಡುವ ಹುನ್ನಾರ ನಡೆಯುತ್ತಿದೆ. ದೇಶದಲ್ಲಿ 35 ಕೋಟಿ ಮಂದಿ ನಿರುದ್ಯೋಗಿಗಳು ಇದ್ದಾರೆ. ಕೊರೊನಾ ಹೆಸರಿನಲ್ಲಿಸರ್ಕಾರಗಳು ಕೋಟ್ಯಂತರ ಹಣ ಲೂಟಿ ಹೊಡೆಯುತ್ತಿದೆ’ ಎಂದರು.</p>.<p>ವಕೀಲ ಬಿ.ನಾರಾಯಣರೆಡ್ಡಿ ಮಾತನಾಡಿ, ‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಾಮಾಜಿಕ, ರಾಜಕೀಯದ ಹೋರಾಟದಹಿನ್ನೆಲೆಗಳು ಇದೆ. ರೈತ ನಾಯಕ ಅಶ್ವತ್ಥನಾರಾಯಣರೆಡ್ಡಿರವರು ವಿದ್ಯಾರ್ಥಿ, ರೈತ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ಹೋರಾಟಗಾರರಿಗೆ ಶಕ್ತಿ ತುಂಬಿದ್ದಾರೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚನ್ನರಾಯಪ್ಪ, ಮುಖಂಡರಾದ ಆರ್.ಎನ್.ರಾಜು, ಜಿ.ಎಂ.ರಾಮಕೃಷ್ಣಪ್ಪ, ರಾಮಾಂಜಿ, ವೆಂಕಟೇಶ್, ಆರ್.ಚಂದ್ರಶೇಖರರೆಡ್ಡಿ, ಭಾಷಾಸಾಬ್, ಎಸ್.ಎನ್.ಚಂದ್ರಶೇಖರರೆಡ್ಡಿ, ಎಲ್.ವೆಂಕಟೇಶ್, ಜುಬೇರ್ ಅಹಮದ್, ನರಸಿಂಹಪ್ಪ, ಅಶ್ವತ್ಥರೆಡ್ಡಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>