ಸಮರ್ಪಕವಾದ ಚರಂಡಿ ಇಲ್ಲದೆ ನಡುರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದೆ. ಇದರ ಸಮೀಪ ಅನೇಕ ಸರ್ಕಾರಿ ಕಚೇರಿಗಳಿವೆ. ಪಂಚಾಯಿತಿ, ಗ್ರಂಥಾಲಯ, ಸಹಕಾರ ಬ್ಯಾಂಕ್ ಮತ್ತು ಬಸ್ ನಿಲ್ದಾಣ ಇದೆ. ಇಲ್ಲಿಗೆ ಬರುವವರೆಲ್ಲರೂ ದುರ್ನಾತವನ್ನು ಎದುರಿಸಿಯೇ ಬರಬೇಕು. ಕೊಳಚೆಯನ್ನು ತುಳಿದುಕೊಂಡು ಬರಬೇಕು. ಆದರೂ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣ ಕುರುಡರಾಗಿದ್ದಾರೆ.