<p><strong>ಚಿಕ್ಕಬಳ್ಳಾಪುರ:</strong> ನಾಲ್ಕು ಕಾರ್ಮಿಕ ಕೋಡ್ಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ವಿ.ಬಿ. ಜಿ ರಾಮ್ ಜಿ, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ.12ರಂದು ಟ್ರೇಡ್ ಯುನಿಯನ್ ಜಂಟಿ ಸಮಿತಿ (ಜೆಸಿಟಿಯು)- ಸಂಯುಕ್ತ ಹೋರಾಟ ಕರ್ನಾಟಕ (ಎಸ್ಎಚ್ಕೆ)ದಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. </p>.<p>ಈ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ರೈತ ಕಾರ್ಮಿಕರ ಜಿಲ್ಲಾ ಸಮಾವೇಶ ನಡೆಯಿತು.</p>.<p>ಸಮಾವೇಶ ಉದ್ಘಾಟಿಸಿದ ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, ‘ಮನುಷ್ಯ ಸ್ವತಂತ್ರ ಜೀವಿ. ಪ್ರತಿಭಟಿಸುವುದು ನೈಸರ್ಗಿಕ ಹಕ್ಕು. ಆದರೆ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳ ಮೂಲಕ ಪ್ರತಿಭಟನೆಯ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಿದರು.</p>.<p>ಈ ಕಾರ್ಮಿಕ ಕಾಯ್ದೆಗಳಲ್ಲಿ ಶೋಷಣೆ ಮಾಡುವವರಿಗೆ ಇರುವ ದಂಡನೆಗಳನ್ನು ವಾಪಸ್ ಪಡೆಯಲಾಗಿದೆ. ಕಾರ್ಮಿಕರ ವಿರುದ್ಧವೇ ಕ್ರಮಕೈಗೊಳ್ಳಲು ಅವಕಾಶವಿದೆ. ಪ್ರತಿಭಟಿಸುವ ಕಾರ್ಮಿಕರನ್ನು ಜೈಲಿಗೂ ಹಾಕುವರು ಎಂದರು.</p>.<p>ಉತ್ಪಾದನಾ ಕ್ಷೇತ್ರದಲ್ಲಿ ಶಾಂತಿ ಇರಬೇಕು ಎನ್ನುವ ದೃಷ್ಟಿಯಿಂದ ಈ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲ. ಈ ಕೋಡ್ಗಳನ್ನು ಅಂಗೀಕರಿಸಬಾರದು ಎಂದು ರಾಜ್ಯ ಸರ್ಕಾರವನ್ನೂ ಕೋರಿದ್ದೆವು. ಆದರೆ ಕಾರ್ಮಿಕರ ವಿಷಯ ಬಂದಾಗ ರಾಜ್ಯ ಸರ್ಕಾರ ಸಹ ಬಂಡವಾಳಶಾಹಿಗಳ ಪರ ನಿಲ್ಲುತ್ತಿದೆ. ಈ ವಿಚಾರವಾಗಿ ಯಾವುದೇ ಟ್ರೇಡ್ ಯೂನಿಯಗಳ ಜೊತೆಯೂ ಮಾತನಾಡಲಿಲ್ಲ ಎಂದು ಹೇಳಿದರು.</p>.<p>ಕೇಂದ್ರ ಸರ್ಕಾರ ಈ ಕೋಡ್ಗಳ ಮೂಲಕ ಮೆದುಳಿಗೆ ಕೈ ಹಾಕಿದರೆ ರಾಜ್ಯ ಸರ್ಕಾರವು ಕಾರ್ಮಿಕರ ಬೆನ್ನು ಮೂಳೆಯನ್ನೇ ಮುರಿಯುತ್ತಿದೆ ಎಂದು ದೂರಿದರು.</p>.<p>ಬಂಡವಾಳಗಾರರ ಹಿತ ರಕ್ಷಣೆಯೇ ಈ ಕೋಡ್ಗಳ ಏಕೈಕ ಗುರಿ. ನಮ್ಮ ಹಿತರಕ್ಷಣೆ ಅಲ್ಲ. ಕಾರ್ಮಿಕ ನ್ಯಾಯಾಲಯಗಳ ಬದಲಿಗೆ ನ್ಯಾಯ ಮಂಡಳಿಗಳು ರಚನೆಯಾಗುತ್ತವೆ. ಇಲ್ಲಿ ನೇಮಕವಾಗುವವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರತಿನಿಧಿಗಳೇ ಎಂದರು.</p>.<p>ದೇಶದಲ್ಲಿ ಯಾವುದೇ ಕೆಲಸ ಕಾಯಂ ಇಲ್ಲ. ಅಂದರೆ ಶಕ್ತಿ ಇದ್ದರೆ ದುಡಿಯಬೇಕು. ಶಕ್ತಿ ಅನುಸಾರ ದುಡಿಯಬೇಕು ಅಷ್ಟೇ. ಕೆಲಸ ಮಾಡುವ ಫಲವನ್ನು ಅಪೇಕ್ಷಿಸಬೇಡ ಎನ್ನುವುದು ಈ ಕೋಡ್ಗಳ ಉದ್ದೇಶ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ರಕ್ತ ಬಸಿಯುವಂತೆ ಮಾಡುತ್ತಿವೆ ಎಂದು ದೂರಿದರು.</p>.<p>12ರಂದು ದೇಶದಾದ್ಯಂತ ಹಮ್ಮಿಕೊಂಡಿರುವ ಮುಷ್ಕರವನ್ನು ಚಿಕ್ಕಬಳ್ಳಾಪುರದಲ್ಲಿಯೂ ಯಶಸ್ವಿಗೊಳಿಸಬೇಕು. ಮುಷ್ಕರವನ್ನು ಬಂದ್ ಸ್ವರೂಪದಲ್ಲಿ ಮಾಡಬೇಕು ಎಂದರು.</p>.<p>ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಧರ್ಮದ ಆಧಾರದಲ್ಲಿ ಸಮಾಜದವನ್ನು ವಿಭಜಿಸಿದೆ. ದುಡಿಯುವ ವರ್ಗವನ್ನು ಶೋಷಿಸುವ ಕಾನೂನು ಜಾರಿಗೊಳಿಸುತ್ತಿದೆ ಎಂದರು.</p>.<p>ಗ್ರಾಮೀಣ ಭಾರತದಲ್ಲಿ ಬಡವರಿಗೆ ಆಸರೆ ಆಗಿದ್ದ ನರೇಗಾ ಯೋಜನೆ ರದ್ದುಗೊಳಿಸಿದರು. ಅದರ ಸ್ವರೂಪ ಬದಲಿಸಿದರು. ಇದರಿಂದ ಬಡವರಿಗೆ ಅನನುಕೂಲವಾಗಿದೆ ಎಂದರು.</p>.<p>ವಿದ್ಯುತ್ ಖಾಸಗೀಕರಣಕ್ಕೆ ಕೇಂದ್ರ ತೀರ್ಮಾನಿಸಿದೆ. ಇದರಿಂದ ಎಲ್ಲ ವರ್ಗದ ಜನರು ಕಷ್ಟ ಅನುಭವಿಸುವರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. </p>.<p>ಸಿಐಟಿಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಸಂಘಟನೆಯ ಮುಖಂಡ ಚನ್ನರಾಯಪ್ಪ, ಸಿದ್ದಗಂಗಪ್ಪ, ಮುನಿಸ್ವಾಮಿ, ಪಾಪಣ್ಣ, ಮುನಿಯಪ್ಪ ವೇದಿಕೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ನಾಲ್ಕು ಕಾರ್ಮಿಕ ಕೋಡ್ಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ವಿ.ಬಿ. ಜಿ ರಾಮ್ ಜಿ, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ.12ರಂದು ಟ್ರೇಡ್ ಯುನಿಯನ್ ಜಂಟಿ ಸಮಿತಿ (ಜೆಸಿಟಿಯು)- ಸಂಯುಕ್ತ ಹೋರಾಟ ಕರ್ನಾಟಕ (ಎಸ್ಎಚ್ಕೆ)ದಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. </p>.<p>ಈ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ರೈತ ಕಾರ್ಮಿಕರ ಜಿಲ್ಲಾ ಸಮಾವೇಶ ನಡೆಯಿತು.</p>.<p>ಸಮಾವೇಶ ಉದ್ಘಾಟಿಸಿದ ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, ‘ಮನುಷ್ಯ ಸ್ವತಂತ್ರ ಜೀವಿ. ಪ್ರತಿಭಟಿಸುವುದು ನೈಸರ್ಗಿಕ ಹಕ್ಕು. ಆದರೆ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳ ಮೂಲಕ ಪ್ರತಿಭಟನೆಯ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಿದರು.</p>.<p>ಈ ಕಾರ್ಮಿಕ ಕಾಯ್ದೆಗಳಲ್ಲಿ ಶೋಷಣೆ ಮಾಡುವವರಿಗೆ ಇರುವ ದಂಡನೆಗಳನ್ನು ವಾಪಸ್ ಪಡೆಯಲಾಗಿದೆ. ಕಾರ್ಮಿಕರ ವಿರುದ್ಧವೇ ಕ್ರಮಕೈಗೊಳ್ಳಲು ಅವಕಾಶವಿದೆ. ಪ್ರತಿಭಟಿಸುವ ಕಾರ್ಮಿಕರನ್ನು ಜೈಲಿಗೂ ಹಾಕುವರು ಎಂದರು.</p>.<p>ಉತ್ಪಾದನಾ ಕ್ಷೇತ್ರದಲ್ಲಿ ಶಾಂತಿ ಇರಬೇಕು ಎನ್ನುವ ದೃಷ್ಟಿಯಿಂದ ಈ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲ. ಈ ಕೋಡ್ಗಳನ್ನು ಅಂಗೀಕರಿಸಬಾರದು ಎಂದು ರಾಜ್ಯ ಸರ್ಕಾರವನ್ನೂ ಕೋರಿದ್ದೆವು. ಆದರೆ ಕಾರ್ಮಿಕರ ವಿಷಯ ಬಂದಾಗ ರಾಜ್ಯ ಸರ್ಕಾರ ಸಹ ಬಂಡವಾಳಶಾಹಿಗಳ ಪರ ನಿಲ್ಲುತ್ತಿದೆ. ಈ ವಿಚಾರವಾಗಿ ಯಾವುದೇ ಟ್ರೇಡ್ ಯೂನಿಯಗಳ ಜೊತೆಯೂ ಮಾತನಾಡಲಿಲ್ಲ ಎಂದು ಹೇಳಿದರು.</p>.<p>ಕೇಂದ್ರ ಸರ್ಕಾರ ಈ ಕೋಡ್ಗಳ ಮೂಲಕ ಮೆದುಳಿಗೆ ಕೈ ಹಾಕಿದರೆ ರಾಜ್ಯ ಸರ್ಕಾರವು ಕಾರ್ಮಿಕರ ಬೆನ್ನು ಮೂಳೆಯನ್ನೇ ಮುರಿಯುತ್ತಿದೆ ಎಂದು ದೂರಿದರು.</p>.<p>ಬಂಡವಾಳಗಾರರ ಹಿತ ರಕ್ಷಣೆಯೇ ಈ ಕೋಡ್ಗಳ ಏಕೈಕ ಗುರಿ. ನಮ್ಮ ಹಿತರಕ್ಷಣೆ ಅಲ್ಲ. ಕಾರ್ಮಿಕ ನ್ಯಾಯಾಲಯಗಳ ಬದಲಿಗೆ ನ್ಯಾಯ ಮಂಡಳಿಗಳು ರಚನೆಯಾಗುತ್ತವೆ. ಇಲ್ಲಿ ನೇಮಕವಾಗುವವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರತಿನಿಧಿಗಳೇ ಎಂದರು.</p>.<p>ದೇಶದಲ್ಲಿ ಯಾವುದೇ ಕೆಲಸ ಕಾಯಂ ಇಲ್ಲ. ಅಂದರೆ ಶಕ್ತಿ ಇದ್ದರೆ ದುಡಿಯಬೇಕು. ಶಕ್ತಿ ಅನುಸಾರ ದುಡಿಯಬೇಕು ಅಷ್ಟೇ. ಕೆಲಸ ಮಾಡುವ ಫಲವನ್ನು ಅಪೇಕ್ಷಿಸಬೇಡ ಎನ್ನುವುದು ಈ ಕೋಡ್ಗಳ ಉದ್ದೇಶ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ರಕ್ತ ಬಸಿಯುವಂತೆ ಮಾಡುತ್ತಿವೆ ಎಂದು ದೂರಿದರು.</p>.<p>12ರಂದು ದೇಶದಾದ್ಯಂತ ಹಮ್ಮಿಕೊಂಡಿರುವ ಮುಷ್ಕರವನ್ನು ಚಿಕ್ಕಬಳ್ಳಾಪುರದಲ್ಲಿಯೂ ಯಶಸ್ವಿಗೊಳಿಸಬೇಕು. ಮುಷ್ಕರವನ್ನು ಬಂದ್ ಸ್ವರೂಪದಲ್ಲಿ ಮಾಡಬೇಕು ಎಂದರು.</p>.<p>ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಧರ್ಮದ ಆಧಾರದಲ್ಲಿ ಸಮಾಜದವನ್ನು ವಿಭಜಿಸಿದೆ. ದುಡಿಯುವ ವರ್ಗವನ್ನು ಶೋಷಿಸುವ ಕಾನೂನು ಜಾರಿಗೊಳಿಸುತ್ತಿದೆ ಎಂದರು.</p>.<p>ಗ್ರಾಮೀಣ ಭಾರತದಲ್ಲಿ ಬಡವರಿಗೆ ಆಸರೆ ಆಗಿದ್ದ ನರೇಗಾ ಯೋಜನೆ ರದ್ದುಗೊಳಿಸಿದರು. ಅದರ ಸ್ವರೂಪ ಬದಲಿಸಿದರು. ಇದರಿಂದ ಬಡವರಿಗೆ ಅನನುಕೂಲವಾಗಿದೆ ಎಂದರು.</p>.<p>ವಿದ್ಯುತ್ ಖಾಸಗೀಕರಣಕ್ಕೆ ಕೇಂದ್ರ ತೀರ್ಮಾನಿಸಿದೆ. ಇದರಿಂದ ಎಲ್ಲ ವರ್ಗದ ಜನರು ಕಷ್ಟ ಅನುಭವಿಸುವರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. </p>.<p>ಸಿಐಟಿಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಸಂಘಟನೆಯ ಮುಖಂಡ ಚನ್ನರಾಯಪ್ಪ, ಸಿದ್ದಗಂಗಪ್ಪ, ಮುನಿಸ್ವಾಮಿ, ಪಾಪಣ್ಣ, ಮುನಿಯಪ್ಪ ವೇದಿಕೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>