ಗುರುವಾರ ಪತ್ರಿಕೆಯಲ್ಲಿ ‘ಅಪಾಯಕ್ಕೆ ಕಾದಿರುವ ವಿದ್ಯುತ್ ಕಂಬಗಳು’ ಎನ್ನುವ ವರದಿ ಪ್ರಕಟವಾಗಿತ್ತು. ಪತ್ರಿಕೆಯ ವರದಿ ಆಧರಿಸಿ ಗೌರಿಬಿದನೂರು ಪ್ರಜಾವಾಣಿ ಅರೆಕಾಲಿಕ ವರದಿಗಾರರಿಗೆ ಗುರುವಾರ ಬೆಳಿಗ್ಗೆಯೇ ಕರೆ ಮಾಡಿದ ಬೆಸ್ಕಾಂ ಅಧಿಕಾರಿಗಳು ಯಾವ ಗ್ರಾಮ, ಸ್ಥಳದಲ್ಲಿ ಯಾವ ಸಮಸ್ಯೆಗಳು ನಿಮ್ಮ ಗಮನಕ್ಕೆ ಬಂದಿವೆ ಎನ್ನುವ ಬಗ್ಗೆ ಮಾಹಿತಿ ಪಡೆದರು.