ಪೆದ್ದಹಳ್ಳಿ ವೆಂಕಟೇಶಪ್ಪ ಮಾತನಾಡಿ, ಕೋಲಾರ, ಮುಳಬಾಗಿಲಿನಿಂದ ಅಭ್ಯರ್ಥಿಯನ್ನು ತಂದರೆ ಹೇಗೆ? ಅವರು ಇಷ್ಟು ಹಣ ಕೊಡುತ್ತಾರೆ, ಇವರು ಇಷ್ಟು ಹಣ ಕೊಡುತ್ತಾರೆ ಎನ್ನುವುದೇ ಚರ್ಚೆ ಆಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಬೇರೂರಲು ಆರ್.ಎಲ್.ಜಾಲಪ್ಪ, ಅವರ ಕುಟುಂಬ ಸದಸ್ಯರಾದ ಜಿ.ಎಚ್.ನಾಗರಾಜ್, ವಿನಯ್ ಶ್ಯಾಮ್ ಅವರ ಕೊಡುಗೆ ಇದೆ ಎಂದರು.