<p><strong>ಗೌರಿಬಿದನೂರು</strong>: ತಾಲ್ಲೂಕಿನ ಮಂಚೇನಹಳ್ಳಿ ಗ್ರಾ.ಪಂ ಚುನಾವಣಾ ಫಲಿತಾಂಶವು ಬುಧವಾರ ಪ್ರಕಟಗೊಂಡಿದ್ದು, ಗ್ರಾ.ಪಂ ವ್ಯಾಪ್ತಿಯ 6 ವಾರ್ಡ್ಗಳಲ್ಲಿನ ಒಟ್ಟು 20 ಸದಸ್ಯರಿಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12, ಬಿಜೆಪಿ ಬೆಂಬಲಿತ 5 ಹಾಗೂ 3 ಪಕ್ಷೇತರರ ಅಭ್ಯರ್ಥಿಗಳು ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ.</p>.<p>ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ರವರ ಕನಸಿನ ಕೂಸಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಂಚೇನಹಳ್ಳಿಯನ್ನು ಬಿಜೆಪಿ ಸರ್ಕಾರದಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿಸಿದ್ದರು. ನಂತರದ ದಿನಗಳಲ್ಲಿ ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಿದ್ದರು. ಇವರಿಗೆ ಬೆಂಬಲವಾಗಿ ಅನೇಕ ನಾಯಕರು ಮಾತೃ ಪಕ್ಷಗಳನ್ನು ತೊರೆದು ಕಮಲ ಪಾಳಯಕ್ಕೆ ಸೇರ್ಪಡೆಯಾಗಿದ್ದರು.</p>.<p>ಸಚಿವರಿಗೆ ಪ್ರತಿ ವಿಧಾನಸಭೆ ಚುನಾವಣೆ ವೇಳೆ ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಮತ್ತು ಮತದಾರರು ಹೆಚ್ಚಿನ ಬಹುಮತದ ಮತಗಳನ್ನು ನೀಡಿ ಗೆಲುವಿನ ದಡ ಸೇರಿಸುತ್ತಿದ್ದರು. ಈ ಭಾಗದಲ್ಲಿನ ಒಟ್ಟು 7 ಗ್ರಾ.ಪಂ ಗಳಲ್ಲಿ ಈಗಾಗಲೇ 6 ಪಂಚಾಯಿತಿಗಳು ಕಮಲ ಪಾಳಯದ ವಶವಾಗಿದ್ದವು. ಉಳಿದಂತೆ ನೂತನ ತಾಲ್ಲೂಕು ಕೇಂದ್ರದಲ್ಲಿದ್ದ ಮಂಚೇನಹಳ್ಳಿ ಗ್ರಾ.ಪಂ ಯನ್ನು ತನ್ನ ತೆಕ್ಕೆಗೆ ಪಡೆಯಲು ಸಚಿವರು ಹಾಗೂ ಅವರ ಬೆಂಬಲಿಗರಿಗೆ ಈ ಚುನಾವಣೆಯು ಪ್ರತಿಷ್ಠೆಯ ಕಣವಾಗಿತ್ತು. ಆದರೆ ಈ ಭಾಗದ ಮತದಾರರು ಕಳೆದ 7-8 ವರ್ಷಗಳಿಂದ ಅಭಿವೃದ್ಧಿ ಕಾಣದೆ, ಜ್ವಲಂತ ಸಮಸ್ಯೆಗಳು ಪರಿಹಾರ ಕಾಣದೆ ಕೇವಲ ಭರವಸೆಯಲ್ಲೆ ದಿನದೂಡುತ್ತಿದ್ದ ಜನಪ್ರತಿನಿಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.</p>.<p>ಫಲಿತಾಂಶದ ಬಳಿಕ ಕೇವಲ 5 ಸ್ಥಾನಗಳನ್ನು ಮಾತ್ರ ಪಡೆದಿರುವ ಬಿಜೆಪಿ ನಾಯಕರು ಕಂಗೆಟ್ಟಿದ್ದು, ಸಚಿವರಿಗೆ ನೀಡಿದ್ದ ಭರಪೂರ ಭರವಸೆಗಳು ಹುಸಿಯಾಗಿದ್ದು, ಕನಿಷ್ಠ ಗ್ರಾ.ಪಂ ಅಧಿಕಾರವನ್ನು ಹಿಡಿಯಲು ಸಾಧ್ಯವಾಗುಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಗದೆ ನಿರಾಶರಾಗಿದ್ದು, ಪರ್ಯಾಯ ಚಿಂತನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.</p>.<p>ಇನ್ನು ದಶಕಗಳಿಂದಲೂ ಕೂಡ ಮಂಚೇನಹಳ್ಳಿ ಹೋಬಳಿಯು ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, ಈ ಭಾಗದ ಜನರನ್ನು ಕೆಲ ಜನಪ್ರತಿನಿಧಿಗಳು ಹಣದಾಸೆಗಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಇದರಿಂದ ಎಚ್ಚೆತ್ತ ನಾಗರೀಕರು ಅವಕಾಶಕ್ಕಾಗಿ ಕಾಯುತ್ತಾ ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಜನಮತದ ಅಭಿಪ್ರಾಯವನ್ನು ಹೊರ ತಂದಂತಿದೆ.</p>.<p>ಸಚಿವರ ನೇತೃತ್ವದಲ್ಲಿ ಬಿಜೆಪಿ ಪಾಳಯ ಶಕ್ತವಾಗುವ ಜತೆಗೆ ಈ ಭಾಗದಲ್ಲಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಅವರು ತೀವ್ರವಾಗಿ ಕಡೆಗಣಿಸಿದ್ದರು. ಇದರಿಂದ ಸಮಯಕ್ಕಾಗಿ ಕಾಯುತ್ತಿದ್ದ ಅವರುಗಳು ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅತ್ಯಧಿಕ 12 ಸ್ಥಾನಗಳನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ರಾಜಕೀಯ ಪುನರ್ಜನ್ಮ ಪಡೆದಂತಾಗಿದ್ದಾರೆ.</p>.<p>ಒಟ್ಟು 20 ಸ್ಥಾನಗಳಿಗಾಗಿ ಚುನಾವಣೆಯಲ್ಲಿ 54 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 5,342 ಚಲಾವಣೆಯಾದ ಒಟ್ಟು ಮತಗಳು. ಪುರುಷ - 2626 ; ಮಹಿಳೆ - 2716.</p>.<p class="Subhead">ವಿಜೇತರ ಪಟ್ಟಿ: 1 ನೇ ವಾರ್ಡ್ ರಾಮಾಂಜಿನಪ್ಪ, 2 ನೇ ವಾರ್ಡ್ ನಾರಾಯಣಸ್ವಾಮಿ, 3ನೇ ವಾರ್ಡ್ ಗಂಗಾದೇವಿ, 4ನೇ ವಾರ್ಡ್<br />ಜೆ.ವಿ.ನಾರಾಯಣಪ್ಪ, 5ನೇ ವಾರ್ಡ್ ಯಶೋಧ ಶ್ರೀಧರ್, 6ನೇ ವಾರ್ಡ್ ನರಸಮ್ಮ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು</strong>: ತಾಲ್ಲೂಕಿನ ಮಂಚೇನಹಳ್ಳಿ ಗ್ರಾ.ಪಂ ಚುನಾವಣಾ ಫಲಿತಾಂಶವು ಬುಧವಾರ ಪ್ರಕಟಗೊಂಡಿದ್ದು, ಗ್ರಾ.ಪಂ ವ್ಯಾಪ್ತಿಯ 6 ವಾರ್ಡ್ಗಳಲ್ಲಿನ ಒಟ್ಟು 20 ಸದಸ್ಯರಿಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12, ಬಿಜೆಪಿ ಬೆಂಬಲಿತ 5 ಹಾಗೂ 3 ಪಕ್ಷೇತರರ ಅಭ್ಯರ್ಥಿಗಳು ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ.</p>.<p>ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ರವರ ಕನಸಿನ ಕೂಸಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಮಂಚೇನಹಳ್ಳಿಯನ್ನು ಬಿಜೆಪಿ ಸರ್ಕಾರದಲ್ಲಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿಸಿದ್ದರು. ನಂತರದ ದಿನಗಳಲ್ಲಿ ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಿದ್ದರು. ಇವರಿಗೆ ಬೆಂಬಲವಾಗಿ ಅನೇಕ ನಾಯಕರು ಮಾತೃ ಪಕ್ಷಗಳನ್ನು ತೊರೆದು ಕಮಲ ಪಾಳಯಕ್ಕೆ ಸೇರ್ಪಡೆಯಾಗಿದ್ದರು.</p>.<p>ಸಚಿವರಿಗೆ ಪ್ರತಿ ವಿಧಾನಸಭೆ ಚುನಾವಣೆ ವೇಳೆ ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಮತ್ತು ಮತದಾರರು ಹೆಚ್ಚಿನ ಬಹುಮತದ ಮತಗಳನ್ನು ನೀಡಿ ಗೆಲುವಿನ ದಡ ಸೇರಿಸುತ್ತಿದ್ದರು. ಈ ಭಾಗದಲ್ಲಿನ ಒಟ್ಟು 7 ಗ್ರಾ.ಪಂ ಗಳಲ್ಲಿ ಈಗಾಗಲೇ 6 ಪಂಚಾಯಿತಿಗಳು ಕಮಲ ಪಾಳಯದ ವಶವಾಗಿದ್ದವು. ಉಳಿದಂತೆ ನೂತನ ತಾಲ್ಲೂಕು ಕೇಂದ್ರದಲ್ಲಿದ್ದ ಮಂಚೇನಹಳ್ಳಿ ಗ್ರಾ.ಪಂ ಯನ್ನು ತನ್ನ ತೆಕ್ಕೆಗೆ ಪಡೆಯಲು ಸಚಿವರು ಹಾಗೂ ಅವರ ಬೆಂಬಲಿಗರಿಗೆ ಈ ಚುನಾವಣೆಯು ಪ್ರತಿಷ್ಠೆಯ ಕಣವಾಗಿತ್ತು. ಆದರೆ ಈ ಭಾಗದ ಮತದಾರರು ಕಳೆದ 7-8 ವರ್ಷಗಳಿಂದ ಅಭಿವೃದ್ಧಿ ಕಾಣದೆ, ಜ್ವಲಂತ ಸಮಸ್ಯೆಗಳು ಪರಿಹಾರ ಕಾಣದೆ ಕೇವಲ ಭರವಸೆಯಲ್ಲೆ ದಿನದೂಡುತ್ತಿದ್ದ ಜನಪ್ರತಿನಿಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.</p>.<p>ಫಲಿತಾಂಶದ ಬಳಿಕ ಕೇವಲ 5 ಸ್ಥಾನಗಳನ್ನು ಮಾತ್ರ ಪಡೆದಿರುವ ಬಿಜೆಪಿ ನಾಯಕರು ಕಂಗೆಟ್ಟಿದ್ದು, ಸಚಿವರಿಗೆ ನೀಡಿದ್ದ ಭರಪೂರ ಭರವಸೆಗಳು ಹುಸಿಯಾಗಿದ್ದು, ಕನಿಷ್ಠ ಗ್ರಾ.ಪಂ ಅಧಿಕಾರವನ್ನು ಹಿಡಿಯಲು ಸಾಧ್ಯವಾಗುಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಗದೆ ನಿರಾಶರಾಗಿದ್ದು, ಪರ್ಯಾಯ ಚಿಂತನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.</p>.<p>ಇನ್ನು ದಶಕಗಳಿಂದಲೂ ಕೂಡ ಮಂಚೇನಹಳ್ಳಿ ಹೋಬಳಿಯು ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದು, ಈ ಭಾಗದ ಜನರನ್ನು ಕೆಲ ಜನಪ್ರತಿನಿಧಿಗಳು ಹಣದಾಸೆಗಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಇದರಿಂದ ಎಚ್ಚೆತ್ತ ನಾಗರೀಕರು ಅವಕಾಶಕ್ಕಾಗಿ ಕಾಯುತ್ತಾ ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಜನಮತದ ಅಭಿಪ್ರಾಯವನ್ನು ಹೊರ ತಂದಂತಿದೆ.</p>.<p>ಸಚಿವರ ನೇತೃತ್ವದಲ್ಲಿ ಬಿಜೆಪಿ ಪಾಳಯ ಶಕ್ತವಾಗುವ ಜತೆಗೆ ಈ ಭಾಗದಲ್ಲಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಅವರು ತೀವ್ರವಾಗಿ ಕಡೆಗಣಿಸಿದ್ದರು. ಇದರಿಂದ ಸಮಯಕ್ಕಾಗಿ ಕಾಯುತ್ತಿದ್ದ ಅವರುಗಳು ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅತ್ಯಧಿಕ 12 ಸ್ಥಾನಗಳನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ರಾಜಕೀಯ ಪುನರ್ಜನ್ಮ ಪಡೆದಂತಾಗಿದ್ದಾರೆ.</p>.<p>ಒಟ್ಟು 20 ಸ್ಥಾನಗಳಿಗಾಗಿ ಚುನಾವಣೆಯಲ್ಲಿ 54 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 5,342 ಚಲಾವಣೆಯಾದ ಒಟ್ಟು ಮತಗಳು. ಪುರುಷ - 2626 ; ಮಹಿಳೆ - 2716.</p>.<p class="Subhead">ವಿಜೇತರ ಪಟ್ಟಿ: 1 ನೇ ವಾರ್ಡ್ ರಾಮಾಂಜಿನಪ್ಪ, 2 ನೇ ವಾರ್ಡ್ ನಾರಾಯಣಸ್ವಾಮಿ, 3ನೇ ವಾರ್ಡ್ ಗಂಗಾದೇವಿ, 4ನೇ ವಾರ್ಡ್<br />ಜೆ.ವಿ.ನಾರಾಯಣಪ್ಪ, 5ನೇ ವಾರ್ಡ್ ಯಶೋಧ ಶ್ರೀಧರ್, 6ನೇ ವಾರ್ಡ್ ನರಸಮ್ಮ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>