ಶಿಡ್ಲಘಟ್ಟದ ನಗರಸಭೆ ಮುಂದೆ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಪ್ರತಿಭಟನೆ
ಜನರ ಸೇವೆ ಮಾಡುವ ಸರ್ಕಾರಿ ನೌಕರರಾದ ನಾವು ಕನಿಷ್ಟ ಗೌರವವನ್ನಾದರೂ ಬಯಸುತ್ತೇವೆ. ನಮ್ಮ ತಾಯಿ ಮತ್ತು ನಮ್ಮ ಪೌರಕಾರ್ಮಿಕರ ತಾಯಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಾಗ ನಿಜಕ್ಕೂ ನೋವಾಗುತ್ತದೆ. ಹಾಗೆಲ್ಲಾ ಮಾತನಾಡಬೇಡಿ ಸರ್ ಎಂದು ಸಹ ಹೇಳಿದೆ. ಈ ರೀತಿಯ ಬೈಗುಳಗಳನ್ನು ಕೇಳಿಸಿಕೊಳ್ಳಲು ಹಿಂಸೆಯಾಗುತ್ತದೆ
-ಜಿ.ಅಮೃತಾ, ಪೌರಾಯುಕ್ತೆ
ಅಚಾತುರ್ಯದಿಂದ ದುಡುಕಿ ಆ ರೀತಿ ಮಾತನಾಡಿದ್ದೇನೆ. ನಾವು ಕಟ್ಟಿಸಿದ್ದ ಫ್ಲೆಕ್ಸ್ ಗಳನ್ನು ನಗರಸಭೆಯವರು ತೆಗೆಯುತ್ತಿದ್ದಾರೆ ಎಂಬ ಮಾಹಿತಿ ಬಂದಾಗ ಕೋಪಗೊಂಡು ಆ ರೀತಿ ತಪ್ಪಾಗಿ ನಡೆದುಕೊಂಡಿರುವೆ. ಪೌರಾಯುಕ್ತೆ ನನ್ನ ಸಹೋದರಿಯಿದ್ದಂತೆ. ನನ್ನಿಂದ ತಪ್ಪಾಗಿದೆ. ಪೌರಾಯುಕ್ತೆ ಅವರನ್ನು ಬಹಿರಂಗವಾಗಿ ಕ್ಷಮೆ ಕೋರುತ್ತೇನೆ
-ರಾಜೀವ್ ಗೌಡ, ಕೆಪಿಸಿಸಿ ಸಂಯೋಜಕ
ಯಾರೂ ಕಾನೂನಿಗಿಂತ ದೊಡ್ಡವರಲ್ಲ. ತಪ್ಪು ಮಾಡಿದವರು ಕ್ಷಮೆ ಕೇಳಬೇಕು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು
ಡಿ.ಕೆ. ಶಿವಕುಮಾರ್,,ಉಪ ಮುಖ್ಯಮಂತ್ರಿ
ಮಹಿಳಾ ಅಧಿಕಾರಿಗಳ ಮೇಲೆ ಪದೇ, ಪದೇ ದೌರ್ಜನ್ಯ ನಡೆಯುತ್ತಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು
ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಮಾತು ಮತ್ತು ನಾಲಿಗೆ ಮೇಲೆ ರಾಜಕಾರಣಿಗಳಿಗೆ ಹಿಡಿತ ಇರಬೇಕು. ಮಹಿಳಾ ಅಧಿಕಾರಿಗಳು ತಪ್ಪು ಮಾಡಿದರೆ ಹೇಳಲು ರೀತಿ, ನೀತಿಗಳಿವೆ. ಭಾಷೆ ಸಂಸ್ಕೃತಿ ಹೇಳುತ್ತದೆ.
– ಡಾ.ಕೆ.ಸುಧಾಕರ್, ಸಂಸದ
ಪೌರಾಯುಕ್ತೆ ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಬೆಂಕಿ ಹಚ್ಚುವುದಾಗಿ ಕಾಂಗ್ರೆಸ್ ಮುಖಂಡ ಪ್ರಾಣ ಬೆದರಿಕೆ ಹಾಕಿದ್ದಾನೆ. ಅಶ್ಲೀಲವಾಗಿ ನಿಂದಿಸಿದ್ದಾನೆ. ಇದನ್ನು ಕಾಂಗ್ರೆಸ್ ನಾಯಕರು ಖಂಡಿಸಿಲ್ಲ