‘ತಾಲ್ಲೂಕಿನ ಕೆಲ ರೈತರ ಪಹಣಿಯಲ್ಲಿ ರಾಗಿ ಬೆಳೆ ಬದಲಾಗಿ ಜೋಳ, ಭತ್ತ, ನೆಲಗಡಲೆ, ತೊಗರಿ, ದ್ರಾಕ್ಷಿ, ದಾಳಿಂಬೆ, ಸಪೋಟ ಹೀಗೆ ಇತರೆ ಬೆಳೆಗಳೆಂದು ತಪ್ಪು ತಪ್ಪಾಗಿ ನಮೂದಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಶೀಘ್ರವೇ ದೋಷ ಸರಿಪಡಿಸಿ ರೈತರಿಂದ ರಾಗಿ ಖರೀದಿಗೆ ಅವಕಾಶ ಕಲ್ಪಿಸಬೇಕು’ ಎಂದು ರೈತ ಮುಖಂಡ ಹಳೇ ಗುಡಿಬಂಡೆ ರಾಮನಾಥರೆಡ್ಡಿ ಅಗ್ರಹಿಸಿದ್ದಾರೆ.